ಸ್ವರ್ಣದಿಂದ ದೂರವಾದ ಸಿಂಧು


Team Udayavani, Aug 6, 2018, 6:00 AM IST

pv-sindhu-2.jpg

ನಾಂಜಿಂಗ್‌ (ಚೀನ): ಪಿ.ವಿ. ಸಿಂಧು ಅವರ ವಿಶ್ವ ಬ್ಯಾಡ್ಮಿಂಟನ್‌ ಅಭಿಯಾನ ಮತ್ತೂಮ್ಮೆ ನಿರಾಸೆಯೊಂದಿಗೆ ಕೊನೆಗೊಂಡಿದೆ. ಸತತ ಎರಡನೇ ವರ್ಷವೂ ಭಾರತದ ತಾರಾ ಆಟಗಾರ್ತಿಗೆ ಚಿನ್ನದ ಪದಕ ಕೈಕೊಟ್ಟಿದೆ; ಬೆಳ್ಳಿ ಪದಕವೇ ಕೊರಳನ್ನು ಅಲಂಕರಿಸಿದೆ.

ರವಿವಾರ ನಡೆದ ವನಿತಾ ಸಿಂಗಲ್ಸ್‌ ಫೈನಲ್‌ನಲ್ಲಿ ಸಿಂಧು ಸ್ಪೇನಿನ ಕ್ಯಾರೊಲಿನಾ ಮರಿನ್‌ ಅವರ ಆಕ್ರಮಣಕಾರಿ ಆಟಕ್ಕೆ ತತ್ತರಿಸಿದರು. ಮೊದಲ ಗೇಮ್‌ ವೇಳೆ ಸಿಂಧು ಸಮಬಲದ ಸ್ಪರ್ಧೆಯೊಡ್ಡಿದರೂ ದ್ವಿತೀಯ ಗೇಮ್‌ನಲ್ಲಿ ಸ್ಪೇನ್‌ ಆಟ ಗಾರ್ತಿಯ ಅಬ್ಬರಕ್ಕೆ ಯಾವ ರೀತಿಯಲ್ಲೂ ಸಾಟಿಯಾಗಲಿಲ್ಲ. 

ಅಂತಿಮವಾಗಿ ಮರಿನ್‌ 21-19, 21-10 ಅಂತರದಿಂದ ಜಯಭೇರಿ ಮೊಳಗಿಸಿದರು. ಸಿಂಧು ಜತೆಗೆ ಭಾರತೀಯ ಕ್ರೀಡಾಪ್ರಿಯರ ಬಂಗಾರದ ಕನಸು ಕೂಡ ಕೊಚ್ಚಿಹೋಯಿತು.ಕಳೆದ ವರ್ಷ ಗ್ಲಾಸೊYದಲ್ಲಿ ನಡೆದ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ ಸಮರದಲ್ಲೂ ಸಿಂಧು ಎಡವಿದ್ದರು. ಅಂದು ಜಪಾನಿನ ನೊಜೊಮಿ ಒಕುಹರಾ ಭಾರತೀಯಳ ಓಟಕ್ಕೆ ಬ್ರೇಕ್‌ ಹಾಕಿದ್ದರು. ಈ ಬಾರಿ ಒಕುಹರಾ ಅವರನ್ನು ಕ್ವಾರ್ಟರ್‌ ಫೈನಲ್‌ನಲ್ಲಿ ಕೆಡವಿ ಸೇಡು ತೀರಿಸಿಕೊಂಡರೂ “ಬೆಳ್ಳಿ ಗಡಿ’ ದಾಟಿ ಮುಂದಡಿ ಇಡಲು ಸಿಂಧುಗೆ ಸಾಧ್ಯವಾಗಲಿಲ್ಲ.

ರಿಯೋದಲ್ಲಿ ಮಣಿಸಿದ್ದ ಮರಿನ್‌
ಸಿಂಧು ಅವರನ್ನೇ ಮಣಿಸಿ ರಿಯೋ ಒಲಿಂಪಿಕ್‌ ಚಾಂಪಿಯನ್‌ ಆಗಿರುವ ಕ್ಯಾರೊಲಿನಾ ಮರಿನ್‌ ನಿಧಾನವಾಗಿಯೇ ಆಟ ಆರಂಭಿಸಿದ್ದರು. ಹಂತ ಹಂತವಾಗಿ  ಪಂದ್ಯದ ಮೇಲೆ ಹಿಡಿತ ಸಾಧಿಸುತ್ತ ಹೋದರು. ಒಮ್ಮೆ ಮುಂದಡಿ ಇರಿಸಿದ ಬಳಿಕ ಮತ್ತೆ ಹಿಂತಿರುಗಿ ನೋಡಲಿಲ್ಲ. 

ಮೊದಲ ಗೇಮ್‌ ವೇಳೆ ಸಿಂಧು 14-9 ಅಂತರದ ಮುನ್ನಡೆಯಲ್ಲಿದ್ದು, ಭರವಸೆ ಮೂಡಿಸಿದ್ದರು. ಈ ಹಂತದಲ್ಲಿ ಅಂಕಗಳನ್ನು ಬಾಚಿಕೊಳ್ಳತೊಡಗಿದ ಮರಿನ್‌, 15-15ರ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ಬಳಿಕ 17-17, 18-18ರಲ್ಲೂ ಜತೆ ಜತೆಯಾಗಿಯೇ ಕಾಣಿಸಿಕೊಂಡರು. ಅದ್ಭುತ ಕ್ರಾಸ್‌-ಕೋರ್ಟ್‌ ಶಾಟ್‌ ಮೂಲಕ 19-18ರ ಮುನ್ನಡೆ ಒಲಿಸಿಕೊಂಡರು. ಅನಂತರ ಸಿಂಧುಗೆ ಅಂಕ ಮರೀಚಿಕೆಯೇ ಆಗುಳಿಯಿತು.

ದ್ವಿತೀಯ ಗೇಮ್‌ ನೀರಸ
ದ್ವಿತೀಯ ಗೇಮ್‌ನಲ್ಲಿ ಮರಿನ್‌ ಅತ್ಯಂತ ಆಕ್ರಮಣಕಾರಿಯಾಗಿ ಗೋಚ ರಿಸಿ ಇಡೀ ಅಂಕಣವನ್ನು ಆಕ್ರಮಿಸಿ ಕೊಂಡರು. ಸ್ಪೇನ್‌ ಆಟಗಾರ್ತಿಯ ಭರ್ಜರಿ ಹೊಡೆತಗಳಿಗೆ ಸಿಂಧು ಕಕ್ಕಾಬಿಕ್ಕಿ ಯಾದರು. ಮರಿನ್‌ ಒಂದೇ ಸಮನೆ ಅಂಕಗಳನ್ನು ಬಾಚಿಕೊಳ್ಳುತ್ತ 5-0 ಮುನ್ನಡೆ ಸಾಧಿಸಿದರು. ಬ್ರೇಕ್‌ ವೇಳೆ ಮರಿನ್‌ 11-2 ಅಂತರದ ಭಾರೀ ಲೀಡ್‌ನ‌ಲ್ಲಿದ್ದರು. ಸಿಂಧು ಆಗಲೇ ಶರಣಾಗತಿ ಸಾರಿಯಾಗಿತ್ತು. ಇದು ಕ್ಯಾರೊಲಿನಾ ಮರಿನ್‌ ಗೆದ್ದ 3ನೇ ವಿಶ್ವ ಸ್ವರ್ಣ. ಇದೊಂದು ದಾಖಲೆಯೂ ಹೌದು. ಇದಕ್ಕೂ ಮುನ್ನ ಅವರು 2014 ಮತ್ತು 2015ರಲ್ಲಿ ಬಂಗಾರದಿಂದ ಸಿಂಗಾರಗೊಂಡಿದ್ದರು.

ಸಿಂಧು: ಫೈನಲ್‌ ಕಂಟಕ
ಫೈನಲ್‌ ತನಕ ಅಮೋಘ ಪ್ರದರ್ಶನ ನೀಡುವ ಪಿ.ವಿ. ಸಿಂಧು, ಪ್ರಶಸ್ತಿ ಸುತ್ತಿನಲ್ಲಿ ಎಡವುತ್ತಿರುವುದು ನಿಜಕ್ಕೂ ಚಿಂತೆಯ ಸಂಗತಿ. 2016ರ ಬಳಿಕ ಅವರು ವಿಶ್ವ ಮಟ್ಟದ 8 ಫೈನಲ್‌ಗ‌ಳಲ್ಲಿ ಸೋಲನುಭವಿಸಿದ್ದಾರೆ. ರಿಯೋ ಒಲಿಂಪಿಕ್ಸ್‌, ಹಾಂಕಾಂಗ್‌ ಓಪನ್‌ (2017, 2018), ಸೂಪರ್‌ ಸೀರಿಸ್‌ ಫೈನಲ್‌ (2017), ಇಂಡಿಯಾ ಓಪನ್‌ (2018), ಥಾಯ್ಲೆಂಡ್‌ ಓಪನ್‌ (2018), ವಿಶ್ವ ಬ್ಯಾಡ್ಮಿಂಟನ್‌ (2017 ಮತ್ತು 2018). ಈ ಸಲವಾದರೂ ಸಿಂಧು ಫೈನಲ್‌ ಕಂಟಕದಿಂದ ಮುಕ್ತರಾಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.ಆದರೆ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಅತ್ಯಧಿಕ 4 ಪದಕ ಗೆದ್ದ ಭಾರತೀಯ ಆಟಗಾರ್ತಿ ಎಂಬ ದಾಖಲೆ ಸಿಂಧು ಹೆಸರಲ್ಲಿರುವುದನ್ನು ಮರೆಯುವಂತಿಲ್ಲ (2 ಬೆಳ್ಳಿ, 2 ಕಂಚು).

ಆಘಾತಕಾರಿ ಸೋಲು
“ನಿಜಕ್ಕೂ ಇದು ಅತ್ಯಂತ ಆಘಾತಕಾರಿ ಸೋಲು. ಸತತ 2ನೇ ವರ್ಷವೂ ಚಿನ್ನ ಕೈಜಾರಿದೆ. ಬಹಳ ದುಃಖವಾಗುತ್ತಿದೆ. ಕೆಲವೊಮ್ಮೆ ನಮ್ಮ ದಿನ ಆಗಿರುವುದಿಲ್ಲ. ಏರಿಳಿತ, ಸೋಲು-ಗೆಲುವು ಸಹಜ. ಮುಂದಿನ ಕೂಟಕ್ಕೆ ಅತ್ಯಂತ ಬಲಿಷ್ಠವಾಗಿ ಮರ ಳುವುದೊಂದೇ ದಾರಿ…’
– ಪಿ.ವಿ. ಸಿಂಧು

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.