ಓವಲ್ ಟೆಸ್ಟ್: ಕುಕ್ ಅರ್ಧ ಶತಕ
Team Udayavani, Sep 9, 2018, 6:00 AM IST
ಲಂಡನ್: ವಿದಾಯ ಪಂದ್ಯ ಆಡುತ್ತಿರುವ ಇಂಗ್ಲೆಂಡ್ ಆರಂಭಕಾರ ಅಲಸ್ಟೇರ್ ಕುಕ್ ಶುಕ್ರವಾರ ಮೊದಲ್ಗೊಂಡ ಓವಲ್ ಟೆಸ್ಟ್ ಪಂದ್ಯದಲ್ಲಿ 71 ರನ್ ಬಾರಿಸಿ ಮಿಂಚಿದ್ದಾರೆ. 7 ವಿಕೆಟಿಗೆ 182 ರನ್ ಗಳಿಸಿರುವ ಇಂಗ್ಲೆಂಡ್ ಕೊನೆಯ ಅವಧಿಯ ಆಟವನ್ನು ಮುಂದುವರಿಸುತ್ತಿದೆ.
ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಕುಕ್-ಜೆನ್ನಿಂಗ್ಸ್ ಜೋಡಿ ಮೊದಲ ವಿಕೆಟಿಗೆ 60 ರನ್ ಗಳಿಸಿ ಉತ್ತಮ ಅಡಿಪಾಯ ನಿರ್ಮಿಸಿತು. ಜೆನ್ನಿಂಗ್ಸ್ ಗಳಿಕೆ 23 ರನ್. ಈ ಜೋಡಿಯನ್ನು ಜಡೇಜ ಬೇರ್ಪಡಿಸಿದರು. ಮತ್ತೆ ವನ್ಡೌನ್ನಲ್ಲಿ ಬಂದ ಮೊಯಿನ್ ಅಲಿ ಈ ಬಾರಿ ವಿಫಲರಾಗಲಿಲ್ಲ (50). ದ್ವಿತೀಯ ವಿಕೆಟಿಗೆ 73 ರನ್ ಒಟ್ಟುಗೂಡಿತು. ಸ್ಕೋರ್ 133ಕ್ಕೆ ಏರಿದಾಗ 190 ಎಸೆತಗಳಲ್ಲಿ 71 ರನ್ ಬಾರಿಸಿದ ಕುಕ್ ಬುಮ್ರಾಗೆ ಬೌಲ್ಡ್ ಆದರು.
ಈ ಹಂತದಲ್ಲಿ ಭಾರತದ ಬೌಲರ್ಗಳು ತಿರುಗೇಟು ನೀಡಿದರು. ಇಂಗ್ಲೆಂಡ್ ತೀವ್ರ ಕುಸಿತ ಕಂಡಿತು. ನಾಯಕ ಜೋ ರೂಟ್ ಮತ್ತು ಕೀಪರ್ ಜಾನಿ ಬೇರ್ಸ್ಟೊ ರನ್ ಗಳಿಸುವ ಮೊದಲೇ ನಿರ್ಗಮಿಸಿದರು. ಬುಮ್ರಾ ಮತ್ತು ಇಶಾಂತ್ ಈ ವಿಕೆಟ್ ಉಡಾಯಿಸಿದರು. ಒಂದಕ್ಕೆ 133 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ಇಂಗ್ಲೆಂಡ್ 134ಕ್ಕೆ 4 ವಿಕೆಟ್ ಕಳೆದುಕೊಂಡಿತು.
ಎಲ್ಲರೂ ನಿರೀಕ್ಷೆ ಇರಿಸಿದ್ದು ಆರಂಭಕಾರ ಪೃಥ್ವಿ ಶಾ ಮೇಲೆ. ಆದರೆ ಆಯ್ಕೆಯಾದದ್ದು ಹನುಮ ವಿಹಾರಿ. ಇದು ಓವಲ್ ಟೆಸ್ಟ್ ಪಂದ್ಯದ ಅಚ್ಚರಿ!
ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಭಾರತ 2 ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಸ್ಪಿನ್ನರ್ ಆರ್. ಅಶ್ವಿನ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬದಲು ಹನುಮ ವಿಹಾರಿ ಮತ್ತು ರವೀಂದ್ರ ಜಡೇಜ ಅವಕಾಶ ಪಡೆದರು. ಆಂಧ್ರಪ್ರದೇಶದ 24ರ ಹರೆಯದ ಹನುಮ ವಿಹಾರಿ ಭಾರತದ 292ನೇ ಟೆಸ್ಟ್ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ನಾಯಕ ವಿರಾಟ್ ಕೊಹ್ಲಿಯಿಂದ “ಟೆಸ್ಟ್ ಕ್ಯಾಪ್’ ಪಡೆದರು. ಇಂಗ್ಲೆಂಡ್ ತನ್ನ ಆಡುವ ಬಳಗದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ. ಸೌತಾಂಪ್ಟನ್ ಗೆಲುವಿನ ಬಳಗದೊಂದಿಗೆ ಆಡಲಿಳಿಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ