ಪರಿಪೂರ್ಣ ಅಂತ್ಯ: ರೂಟ್‌


Team Udayavani, Sep 13, 2018, 6:00 AM IST

ap9112018000206b.jpg

ಲಂಡನ್‌: ಅಲಸ್ಟೇರ್‌ ಕುಕ್‌ ಅವರಿಗೆ ಗೆಲುವಿನ ವಿದಾಯ ಮತ್ತು ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಅಂತಿಮ ವಿಕೆಟ್‌ ಕಿತ್ತು ಟೆಸ್ಟ್‌ ಇತಿಹಾಸದ ಶ್ರೇಷ್ಠ ವೇಗದ ಬೌಲರ್‌ ಎಂದೆನಿಸಿಕೊಂಡ ಈ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ 4-1 ಗೆಲುವಿನೊಂದಿಗೆ ಪರಿಪೂರ್ಣ ರೀತಿಯಲ್ಲಿ ಅಂತ್ಯಗೊಂಡಿದೆ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ಹೇಳಿದ್ದಾರೆ. 

ಲಂಡನ್‌ನಲ್ಲಿ ಮಂಗಳವಾರ ಮುಗಿದ ಐದನೇ ಟೆಸ್ಟ್‌ ಪಂದ್ಯವನ್ನು 118 ರನ್ನುಗಳಿಂದ ಗೆದ್ದ ಇಂಗ್ಲೆಂಡ್‌ ಸರಣಿಯನ್ನು 4-1 ಅಂತರದಿಂದ ತನ್ನದಾಗಿಸಿಕೊಂಡಿದೆ.

ಕೌಂಟಿಯಲ್ಲಿ ಆಡಲು ನಿರಾಕರಿಸಿ ಟೀಕೆಗಳನ್ನು ಎದುರಿಸಿದ್ದ ಲೆಗ್‌ ಸ್ಪಿನ್ನರ್‌ ಅದಿಲ್‌ ರಶೀದ್‌ ಅಪಾಯಕಾರಿ ಕೆಎಲ್‌ ರಾಹುಲ್‌ ಅವರ ವಿಕೆಟನ್ನು ಹಾರಿಸುವ ಮೂಲಕ ಇಂಗ್ಲೆಂಡ್‌ ಗೆಲುವಿಗೆ ಚಾಲನೆ ನೀಡಿದರು. ರಾಹುಲ್‌ ಮತ್ತು ಪಂತ್‌ ಜತೆಯಾಟ ಮುರಿದ ಬಳಿಕ ಭಾರತ ಹಠಾತ್‌ ಕುಸಿಯಿತು.

ವಿದಾಯ ಪಂದ್ಯದಲ್ಲಿ ಇಂಗ್ಲೆಂಡ್‌ ಗೆಲ್ಲುವ ಮೂಲಕ  ಕುಕ್‌ ಸಂಭ್ರಮಪಟ್ಟರೆ ಜಿಮ್ಮಿ ಶ್ರೇಷ್ಠ ವೇಗದ ಬೌಲರ್‌ ಎಂದೆನಿಸಿಕೊಂಡಿದ್ದಾರೆ. ಇದರ ನಡುವೆ ಇಂಗ್ಲೆಂಡ್‌ ಸರಣಿ ಗೆದ್ದಿರುವುದು ಅವರಿಬ್ಬರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ರೂಟ್‌ ತಿಳಿಸಿದರು.

ಓವಲ್‌ ಟೆಸ್ಟ್‌ ಆಡಲು ಬಂದಾಗ ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಬಗ್ಗೆ ಇಂಗ್ಲೆಂಡಿಗೆ ಒತ್ತಡವಿತ್ತು ಮತ್ತು ವಿಕೆಟ್‌ಕೀಪಿಂಗ್‌ ಕುರಿತು ಗೊಂದಲವಿತ್ತು. ಆದರೆ ಎಲ್ಲವೂ ಸುಗಮವಾಗಿ ಸಾಗಿದೆ. ಭಾರತ ಪ್ರತಿಹೋರಾಟ ನೀಡಿದರೂ ಅಸಾಧ್ಯ ಗೆಲುವಿನಿಂದ ದೂರ ಉಳಿಯಿತು ಎಂದು ರೂಟ್‌ ನುಡಿದರು.

ರಶೀದ್‌ ಅವರ ದಾಳಿ ಅತ್ಯದ್ಭುತವಾಗಿತ್ತು. ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದ ರಾಹುಲ್‌ಗೆ ಇದರಿಂದ ತೀವ್ರ ಆಘಾತವಾಗಿತ್ತು. ಈ ಎಸೆತವನ್ನು ಶೇನ್‌ ವಾರ್ನ್ ಅವರ ಬಾಲ್‌ ಆಫ್ ದಿ ಸೆಂಚುರಿಗೆ ಹೋಲಿಸಲಾಗಿದೆ. 1993ರ ಆ್ಯಷಸ್‌ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಮೈಕ್‌ ಗ್ಯಾಟಿಂಗ್‌ ಅವರ ವಿಕೆಟನ್ನು ಹಾರಿಸಿದ ವಾರ್ನ್ ಎಸೆತವನ್ನು ಬಾಲ್‌ ಆಫ್ ದಿ ಸೆಂಚುರಿ ಎಂದು ಬಣ್ಣಿಸಲಾಗಿತ್ತು.

ಇದೊಂದು ರಶೀದ್‌ ಅವರ ಅದ್ಭುತ ಎಸೆತವಾಗಿತ್ತು. ಈ ಎಸೆತ ತೀಕ್ಷ್ಣವಾಗಿತ್ತು. ಹಾಗಾಗಿ ಅವರು ನಮ್ಮ ತಂಡದಲ್ಲಿದ್ದಾರೆ. ಪಂದ್ಯವನ್ನು ಅಥವಾ ಪರಿಸ್ಥಿತಿಯನ್ನು ತಿರುಗಿಸಬಲ್ಲ ಸಾಮರ್ಥ್ಯ ಅವರಲ್ಲಿದೆ ಎಂದು ರೂಟ್‌ ತಿಳಿಸಿದರು.

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

Virat Kohli Fan: ಕೊಹ್ಲಿ ಕಾಲಿಗೆರಗಿದ ಅಭಿಮಾನಿಗೆ ಭದ್ರತಾ ಸಿಬಂದಿಯಿಂದ ಹಲ್ಲೆ?

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

MS Dhoni Catch: 42ರ ಧೋನಿಯ ಡೈವಿಂಗ್‌ ಕ್ಯಾಚ್‌!

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

Ipl: ಪಂತ್‌ ಪಡೆಗೆ ರಾಜಸ್ಥಾನ್‌ ರಾಯಲ್ಸ್‌ ಚಾಲೆಂಜ್‌

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

IPL 2024: ಧೋನಿ ಸೂಚನೆಯಂತೆ ಆಡಿದೆ: ರಿಝ್ವಿ

ipl: ರನ್‌ ಪರ್ವತ ಏರಿದ ಹೈದರಾಬಾದ್‌, ಆರ್‌ಸಿಬಿ ದಾಖಲೆ ಪತನ

Ipl: ರನ್‌ ಪರ್ವತ ಏರಿದ ಹೈದರಾಬಾದ್‌, ಆರ್‌ಸಿಬಿ ದಾಖಲೆ ಪತನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.