ಮುಂಬಯಿ ಅಂಡರ್-19 ತಂಡಕ್ಕೆ ಅರ್ಜುನ್ ತೆಂಡುಲ್ಕರ್ ಆಯ್ಕೆ
Team Udayavani, Sep 13, 2018, 6:55 AM IST
ಮುಂಬಯಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ 19 ವರ್ಷ ವಯೋಮಿತಿಯೊಳಗಿನ ಮುಂಬಯಿ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. 6ನೇ ಅಖೀಲ ಭಾರತೀಯ ಕೂಟ ಇದಾಗಿದ್ದು ಬರೋಡಾದಲ್ಲಿ ನಡೆಯಲಿದೆ.
ಮುಂಬಯಿ ತಂಡಕ್ಕೆ ಸುವೆದ್ ಪಾರ್ಕರ್ ಅವರನ್ನು ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಎಂಸಿಎ (ಮುಂಬಯಿ ಕ್ರಿಕೆಟ್ ಸಂಸ್ಥೆ) ಪ್ರಕಟನೆಯಲ್ಲಿ ತಿಳಿಸಿದೆ. ಅರ್ಜುನ್ ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಕ್ರಿಕೆಟ್ ಕೂಟದಲ್ಲಿ ಭಾರತ ಕಿರಿಯರ ತಂಡವನ್ನು ಪ್ರತಿನಿಧಿಸಿದ್ದರು.