ಭಾರತಕ್ಕೆ ಸುಲಭ ತುತ್ತಾದ ಬಾಂಗ್ಲಾ


Team Udayavani, Sep 23, 2018, 6:00 AM IST

ap9222018000003b.jpg

ದುಬಾೖ: ಏಶ್ಯ ಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಗೆಲುವಿನ ಓಟ ಮುಂದುವರಿಸಿರುವ ಭಾರತ, ಶುಕ್ರವಾರ ರಾತ್ರಿಯ ಸೂಪರ್‌ ಫೋರ್‌ ಹಂತದ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಘಾತಕ ಬೌಲಿಂಗ್‌ ಹಾಗೂ ನಾಯಕ ರೋಹಿತ್‌ ಶರ್ಮ ಅವರ ಆಕರ್ಷಕ ಬ್ಯಾಟಿಂಗ್‌ ಭಾರತದ ಗೆಲುವಿನಲ್ಲಿ ಪ್ರಧಾನ ಪಾತ್ರ ವಹಿಸಿತು. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಬಾಂಗ್ಲಾದೇಶ 49.1 ಓವರ್‌ಗಳಲ್ಲಿ 173 ರನ್ನುಗಳ ಸಣ್ಣ ಮೊತ್ತಕ್ಕೆ ಕುಸಿದರೆ, ಭಾರತ 36.2 ಓವರ್‌ಗಳಲ್ಲಿ 3 ವಿಕೆಟಿಗೆ 174 ರನ್‌ ಬಾರಿಸಿ ಗೆಲುವು ಸಾಧಿಸಿತು.

ಆಗ ಕಪ್ತಾನ ರೋಹಿತ್‌ ಶರ್ಮ 83 ರನ್‌ ಗಳಿಸಿ ಅಜೇಯರಾಗಿದ್ದರು (104 ಎಸೆತ, 5 ಬೌಂಡರಿ, 3 ಸಿಕ್ಸರ್‌). ಶಿಖರ್‌ ಧವನ್‌ 47 ಎಸೆತಗಳಿಂದ 40 ರನ್‌ ಹೊಡೆದರು (4 ಬೌಂಡರಿ, 1 ಸಿಕ್ಸರ್‌). ಇವರಿಬ್ಬರಿಂದ ಮೊದಲ ವಿಕೆಟಿಗೆ 14.2 ಓವರ್‌ಗಳಿಂದ 61 ರನ್‌ ಒಟ್ಟುಗೂಡಿತು.

ಅಂಬಾಟಿ ರಾಯುಡು ಕೇವಲ 13 ರನ್‌ ಮಾಡಿ ನಿರ್ಗಮಿಸಿದರೆ, ಧೋನಿ ಈ ಕೂಟದಲ್ಲಿ ಮೊದಲ ಸಲ ಖಾತೆ ತೆರೆದು 33 ರನ್‌ ಹೊಡೆದರು (37 ಎಸೆತ, 3 ಬೌಂಡರಿ). ಭಾರತದ ಗೆಲುವಿಗೆ ಇನ್ನೇನು ಕೇವಲ 4 ರನ್‌ ಬೇಕೆನ್ನುವಾಗ ಧೋನಿ ವಿಕೆಟ್‌ ಉರುಳಿತು.

ಇದಕ್ಕೂ ಮುನ್ನ ರವೀಂದ್ರ ಜಡೇಜ (29ಕ್ಕೆ 4), ಭುವನೇಶ್ವರ್‌ ಕುಮಾರ್‌ (32ಕ್ಕೆ 3) ಮತ್ತು ಜಸ್‌ಪ್ರೀತ್‌ ಬುಮ್ರಾ (37ಕ್ಕೆ 3) ಘಾತಕ ಬೌಲಿಂಗ್‌ ಸಂಘಟಿಸಿ ಬಾಂಗ್ಲಾವನ್ನು ಕಟ್ಟಿಹಾಕಿದ್ದರು.

ಸ್ಕೋರ್‌ಪಟ್ಟಿ
ಬಾಂಗ್ಲಾದೇಶ    49.1 ಓವರ್‌ಗಳಲ್ಲಿ 173
ಭಾರತ
ರೋಹಿತ್‌ ಶರ್ಮ    ಔಟಾಗದೆ    83
ಶಿಖರ್‌ ಧವನ್‌    ಎಲ್‌ಬಿಡಬ್ಲ್ಯು ಶಕಿಬ್‌    40
ಅಂಬಾಟಿ ರಾಯುಡು    ಸಿ ರಹೀಂ ಬಿ ರುಬೆಲ್‌    13
ಎಂ.ಎಸ್‌. ಧೋನಿ    ಸಿ ಮಿಥುನ್‌ ಬಿ ಮೊರ್ತಜ    33
ದಿನೇಶ್‌ ಕಾರ್ತಿಕ್‌    ಔಟಾಗದೆ    1
ಇತರ        4
ಒಟ್ಟು  (36.2 ಓವರ್‌ಗಳಲ್ಲಿ 3 ವಿಕೆಟಿಗೆ)        174
ವಿಕೆಟ್‌ ಪತನ: 1-61, 2-106, 3-170.
ಬೌಲಿಂಗ್‌:
ಮಶ್ರಫೆ ಮೊರ್ತಜ        5-0-30-1
ಮೆಹಿದಿ ಹಸನ್‌ ಮಿರಾಜ್‌        10-0-38-0
ಮುಸ್ತಫಿಜುರ್‌ ರೆಹಮಾನ್‌        7-0-40-0
ಶಕಿಬ್‌ ಅಲ್‌ ಹಸನ್‌        9.2-0-44-1
ರುಬೆಲ್‌ ಹೊಸೇನ್‌        5-0-21-1
ಪಂದ್ಯಶ್ರೇಷ್ಠ: ರವೀಂದ್ರ ಜಡೇಜ

ಎಕ್ಸ್‌ಟ್ರಾ ಇನ್ನಿಂಗ್ಸ್‌
ಭಾರತ-ಬಾಂಗ್ಲಾದೇಶ

* ರೋಹಿತ್‌ ಶರ್ಮ ಏಶ್ಯ ಕಪ್‌ನಲ್ಲಿ ಸತತ 2 ಅರ್ಧ ಶತಕ ಹೊಡೆದ 5ನೇ, ಭಾರತದ 2ನೇ ನಾಯಕನೆನಿಸಿದರು. ಇದಕ್ಕೂ ಮುನ್ನ ಮಹೇಂದ್ರ ಸಿಂಗ್‌ ಧೋನಿ 2008ರ ಕೂಟದಲ್ಲಿ ಪಾಕಿಸ್ಥಾನ ವಿರುದ್ಧ 76, ಶ್ರೀಲಂಕಾ ವಿರುದ್ಧ 67 ರನ್‌ ಹೊಡೆದಿದ್ದರು.
* ರವೀಂದ್ರ ಜಡೇಜ ಸತತ 2 ಏಶ್ಯ ಕಪ್‌ ಪಂದ್ಯಗಳಲ್ಲಿ 4 ವಿಕೆಟ್‌ ಹಾರಿಸಿದನ ಭಾರತದ ಮೊದಲ, ವಿಶ್ವದ 3ನೇ ಬೌಲರ್‌ ಎನಿಸಿದರು. ಜಡೇಜ ಕೊನೆಯ ಸಲ ಏಶ್ಯ ಕಪ್‌ ಪಂದ್ಯವಾಡಿದ್ದು 2014ರಲ್ಲಿ, ಅಫ್ಘಾನಿಸ್ಥಾನ ವಿರುದ್ಧ. ಆ ಪಂದ್ಯದಲ್ಲಿ 30 ರನ್ನಿಗೆ 4 ವಿಕೆಟ್‌ ಉರುಳಿಸಿದ್ದರು. ಉಳಿದಿಬ್ಬರು ಬೌಲರ್‌ಗಳೆಂದರೆ ಶ್ರೀಲಂಕಾದ ಅಜಂತ ಮೆಂಡಿಸ್‌ ಮತ್ತು ಲಸಿತ ಮಾಲಿಂಗ.
* ರವೀಂದ್ರ ಜಡೇಜ 29 ರನ್ನಿಗೆ 4 ವಿಕೆಟ್‌ ಕಿತ್ತರು. ಇದು ಏಶ್ಯ ಕಪ್‌ನಲ್ಲಿ ಎಡಗೈ ಸ್ಪಿನ್ನರ್‌ ಓರ್ವನ ಅತ್ಯುತ್ತಮ ಪ್ರದರ್ಶನ. ಈ ಸಂದರ್ಭದಲ್ಲಿ ಜಡೇಜ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿದರು. 2014ರಲ್ಲಿ ಅಫ್ಘಾನಿಸ್ಥಾನ ವಿರುದ್ಧ ಅವರು 30 ರನ್‌ ವೆಚ್ಚದಲ್ಲಿ 4 ವಿಕೆಟ್‌ ಉರುಳಿಸಿದ್ದು ದಾಖಲೆಯಾಗಿತ್ತು.
* ರವೀಂದ್ರ ಜಡೇಜ 72.1 ಓವರ್‌ಗಳ ಬಳಿಕ “ಲಿಸ್ಟ್‌ ಎ’ ಕ್ರಿಕೆಟ್‌ನಲ್ಲಿ ಮೊದಲ ವಿಕೆಟ್‌ ಉರುಳಿಸಿದರು. ಇದಕ್ಕೂ ಮುನ್ನ 2017ರ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊನೆಯ ವಿಕೆಟ್‌ ಉರುಳಿಸಿದ್ದರು. ಕಾಕತಾಳೀಯವೆಂದರೆ, ಈ ಎರಡೂ ವಿಕೆಟ್‌ ಶಕಿಬ್‌ ಅಲ್‌ ಹಸನ್‌ ಅವರದಾಗಿತ್ತು!
* ಶಿಖರ್‌ ಧವನ್‌ ಏಕದಿನ ಪಂದ್ಯವೊಂದರಲ್ಲಿ 4 ಕ್ಯಾಚ್‌ ಪಡೆದ ಭಾರತದ 7ನೇ ಕ್ಷೇತ್ರರಕ್ಷಕನೆನಿಸಿದರು. ವಿವಿಎಸ್‌ ಲಕ್ಷ್ಮಣ್‌ 2004ರಲ್ಲಿ ಕೊನೆಯ ಸಲ ಈ ಸಾಧನೆ ಮಾಡಿದ್ದರು. ಉಳಿದ ಭಾರತೀಯ ಸಾಧಕರೆಂದರೆ ಗಾವಸ್ಕರ್‌, ಅಜರುದ್ದೀನ್‌, ತೆಂಡುಲ್ಕರ್‌, ದ್ರಾವಿಡ್‌ ಮತ್ತು ಕೈಫ್.
* ರೋಹಿತ್‌ ಶರ್ಮ 2015ರ ಬಳಿಕ ಬಾಂಗ್ಲಾದೇಶ ವಿರುದ್ಧ 108.75 ಬ್ಯಾಟಿಂಗ್‌ ಸರಾಸರಿ ದಾಖಲಿಸಿದ್ದಾರೆ. ಈ ಅವಧಿಯ 6 ಇನ್ನಿಂಗ್ಸ್‌ಗಳಲ್ಲಿ ಅವರು 435 ರನ್‌ ಗಳಿಸಿದ್ದಾರೆ. ಇದರಲ್ಲಿ 2 ಶತಕ, 2 ಅರ್ಧ ಶತಕಗಳಿವೆ.
* 2010ರ ಬಳಿಕ, ಏಶ್ಯದಲ್ಲಿ ಆಡಲಾದ ಪಂದ್ಯದಲ್ಲಿ ಭಾರತದ ಇಬ್ಬರು ಆರಂಭಿಕ ಪೇಸ್‌ ಬೌಲರ್‌ಗಳು ತಲಾ 3 ವಿಕೆಟ್‌ ಕಿತ್ತರು. ಅಂದು ನ್ಯೂಜಿಲ್ಯಾಂಡ್‌ ವಿರುದ್ಧದ ಡಂಬುಲ ಪಂದ್ಯದಲ್ಲಿ ಈ ಸಾಧನೆ ದಾಖಲಾಗಿತ್ತು. ಅಂದು ಆಶಿಷ್‌ ನೆಹ್ರಾ 4, ಪ್ರವೀಣ್‌ ಕುಮಾರ್‌ 3 ವಿಕೆಟ್‌ ಸಂಪಾದಿಸಿದ್ದರು.

ಟಾಪ್ ನ್ಯೂಸ್

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.