ಯೂತ್‌ ಒಲಿಂಪಿಕ್ಸ್‌: 5 ಸಾವಿರ ಮೀ. ನಡಿಗೆ; ಪನ್ವಾರ್‌ಗೆ ಬೆಳ್ಳಿ


Team Udayavani, Oct 17, 2018, 8:05 AM IST

z-41.jpg

ಹೊಸದಿಲ್ಲಿ: ಭಾರತದ ಸೂರಜ್‌ ಪನ್ವಾರ್‌ ಅವರು ಯೂತ್‌ ಒಲಿಂಪಿಕ್‌ ಗೇಮ್ಸ್‌ನ ಪುರುಷರ 5 ಸಾವಿರ ಮೀ. ನಡಿಗೆ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಪದಕ ಖಾತೆ ತೆರೆಯಿತು. ಪನ್ವಾರ್‌ ಎರಡನೇ ಸುತ್ತಿನ ಸ್ಪರ್ಧೆಯಲ್ಲಿ 20 ನಿಮಿಷ ಮತ್ತು 35.87 ಸೆ.ನಲ್ಲಿ ಗುರಿ ತಲುಪಿ ಸಮಗ್ರವಾಗಿ ಎರಡನೇ ಸ್ಥಾನ ಪಡೆದರು. ಹೊಸ ಮಾದರಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಫೈನಲ್ಸ್‌ ಇರುವುದಿಲ್ಲ. 

ಎರಡು ಸುತ್ತುಗಳಲ್ಲಿ  ಸ್ಪರ್ಧೆ
ಆ್ಯತ್ಲೆಟಿಕ್ಸ್‌ನ ಎಲ್ಲ ಸ್ಪರ್ಧೆಗಳು (4 ಕಿ.ಮೀ. ಕ್ರಾಸ್‌ ಕಂಟ್ರಿ ಹೊರತು ಪಡಿಸಿ) ಎರಡು ಸುತ್ತುಗಳಲ್ಲಿ ನಡೆಯಲಿವೆ. ಎರಡೂ ಸುತ್ತುಗಳ ಫ‌ಲಿತಾಂಶ ಪರಿಶೀಲಿಸಿ ವಿಜೇತರ ಪಟ್ಟಿ ಪ್ರಕಟಿಸಲಾಗುತ್ತದೆ. 17ರ ಹರೆಯದ ಪನ್ವಾರ್‌ ಮೊದಲ ಸುತ್ತಿನಲ್ಲಿ 20:23.30ಸೆ.ನಲ್ಲಿ ಗುರಿ ತಲುಪಿ ದ್ವಿತೀಯ ಸ್ಥಾನ ಪಡೆದಿದ್ದರು. ಇಕ್ವಾಡೋರ್‌ನ ಪಾಟಿನ್‌ ಆಸ್ಕರ್‌ ಮೊದಲ ಸ್ಥಾನ (20:13.69 ಸೆ.) ಪಡೆದಿದ್ದರು. ಆಸ್ಕರ್‌ ದ್ವಿತೀಯ ಸುತ್ತಿನಲ್ಲಿ ದ್ವಿತೀಯ ಸ್ಥಾನ (20:38.17 ಸೆ. ) ಪಡೆದರೂ ಒಟ್ಟಾರೆ ನಿರ್ವಹಣೆಯ ಆಧಾರದಲ್ಲಿ ಚಿನ್ನ ಗೆದ್ದರು.ಪನ್ವಾರ್‌ 2 ಸುತ್ತುಗಳ ಹೋರಾಟ ದಲ್ಲಿ ಒಟ್ಟು 40:59.17 ಸೆ. ತೆಗೆದುಕೊಂಡಿದ್ದರು. ಇದು ಆಸ್ಕರ್‌ ತೆಗೆದುಕೊಂಡ ಸಮಯಕ್ಕಿಂತ (40:51.86 ಸೆ.) 7 ನಿಮಿಷ ಹೆಚ್ಚು. ಹಾಗಾಗಿ ಪನ್ವಾರ್‌ ಬೆಳ್ಳಿ ಪಡೆದರೆ ಪ್ಯೂರ್ಟೊರಿಕೊದ ಜಾನ್‌ ಮೊರೆಯು ಕಂಚು ಗೆದ್ದರು.

ಇದು ಈ ಬಾರಿಯ ಗೇಮ್ಸ್‌ನ ಆ್ಯತ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಮತ್ತು ಸಮಗ್ರವಾಗಿ ಮೂರನೇ ಪದಕವಾಗಿದೆ. 2010ರ ಉದ್ಘಾಟನಾ ಯೂತ್‌ ಒಲಿಂಪಿಕ್ಸ್‌ನಲ್ಲಿ ಪುರುಷರ ಡಿಸ್ಕಸ್‌ನಲ್ಲಿ ಅರ್ಜುನ್‌ ಮತ್ತು 400 ಮೀ. ಹರ್ಡಲ್ಸ್‌ನಲ್ಲಿ ದುಗೇìಶ್‌ ಕುಮಾರ್‌ ತಲಾ ಬೆಳ್ಳಿಯ ಪದಕ ಜಯಿಸಿದ್ದರು. ಈಗ ಇನ್ನೊಂದು ಬೆಳ್ಳಿಯ ಪದಕವೇ ಸೇರ್ಪಡೆಯಾಗಿದೆ.

ಶ್ರೇಷ್ಠ ಅನುಭವ
ಇದೊಂದು ಶ್ರೇಷ್ಠ ಅನುಭವ. ಪದಕ ಗೆದ್ದಿರುವುದಕ್ಕೆ ಸಂತೋಷವಾಗುತ್ತಿದೆ. ಗೇಮ್ಸ್‌ಗಾಗಿ ಕಠಿನ ಅಭ್ಯಾಸ ನಡೆಸಿದ್ದೆ. ಇದು ನನ್ನ ಪಾಲಿನ ಮೊದಲ ಪದಕವಾಗಿದೆ. ನನ್ನ ಮುಂದಿನ ಗೋಲು ಸೀನಿಯರ್‌ ಮಟ್ಟದಲ್ಲೂ ಇನ್ನಷು ಉತ್ತಮ ಸಾಧನೆ ಗೈದು ಪದಕ ಗೆಲ್ಲಲು ಪ್ರಯತ್ನಿಸುವುದು ಆಗಿದೆ. 
ಸೂರಜ್‌ ಪನ್ವಾರ್‌

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.