ತಮಿಳ್‌ ತಲೈವಾಸ್‌ಗೆ ಮತ್ತೂಮ್ಮೆ ಗೂಳಿ ಗುದ್ದು


Team Udayavani, Oct 18, 2018, 9:34 AM IST

20.jpg

ಸೋನೆಪತ್‌ (ಹರ್ಯಾಣ): ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್‌ ಅಬ್ಬರ ಮುಂದುವರಿದಿದ್ದು, ಮತ್ತೂಮ್ಮೆ  ತಮಿಳ್‌ ತಲೈವಾಸ್‌ಗೆ ಗುದ್ದಿದೆ. ಬುಧವಾರ ನಡೆದ ಮೊದಲ ಮುಖಾಮುಖಿಯಲ್ಲಿ ಬುಲ್ಸ್‌ 44-35 ಅಂತರದಿಂದ ಗೆದ್ದು ಬೀಗಿತು. ಇದಕ್ಕೂ ಮೊದಲು ಚೆನ್ನೈ ಚರಣದ ಮೊದಲ ಪಂದ್ಯದಲ್ಲೂ ತಲೈವಾಸ್‌ ವಿರುದ್ಧ ಗೆಲುವು ಸಾಧಿಸಿತ್ತು. ಇದು ಬುಲ್ಸ್‌ಗೆ ಈ ಕೂಟದಲ್ಲಿ ಒಲಿದ ಸತತ 2ನೇ ಗೆಲುವು. ಇನ್ನೊಂದೆಡೆ ತಮಿಳ್‌ ತಲೈವಾಸ್‌ ನಿರಂತರ 5ನೇ ಸೋಲು ಅನುಭವಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ ಹರ್ಯಾಣವನ್ನು 42-32 ಅಂತರದಿಂದ ಸೋಲಿಸಿ 3ನೇ ಜಯ ಸಾಧಿಸಿತು. ಹರ್ಯಾಣಕ್ಕಿದು 5ನೇ ಸೋಲು.

ಮೆರೆದ ಪವನ್‌, ಕಾಶಿಲಿಂಗ್‌ ಅಡಕೆ 
ಬೆಂಗಳೂರು ಬುಲ್ಸ್‌ ಪಾಲಿಗೆ ಪವನ್‌ ಸೆಹ್ರಾವತ್‌ (16 ಅಂಕ) ಹಾಗೂ ಕಾಶಿಲಿಂಗ್‌ ಅಡಕೆ (12 ಅಂಕ) ಅವರ ಅತ್ಯುತ್ತಮ ಮಟ್ಟದ ರೈಡಿಂಗ್‌ ವರವಾಗಿ ಪರಿಣಮಿಸಿತು. ಇವರಿಬ್ಬರು ಸೇರಿಕೊಂಡು ತಲೈವಾಸ್‌ ಕೋಟೆಯನ್ನು ಛಿದ್ರಗೊಳಿಸಿದರು.  ಪವನ್‌ 10 ಬಾರಿ ಟಚ್‌ ಪಾಯಿಂಟ್‌, 4 ಸಲ ಬೋನಸ್‌ ಪಾಯಿಂಟ್‌ ತಂದರು. ಅದ್ಭುತ ಟ್ಯಾಕ್ಲಿಂಗ್‌ ಮಾಡುವ ಮೂಲಕವೂ 2 ಅಂಕ ಸೇರಿಸಿದ  ಅವರು ಬೆಂಗಳೂರು ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಪವನ್‌ಗೆ ಮತ್ತೂಂದು ತುದಿಯಲ್ಲಿ ಶ್ರೇಷ್ಠ ರೈಡಿಂಗ್‌ ನಿರ್ವಹಣೆ ನೀಡುವ ಮೂಲಕ ಕಾಶಿಲಿಂಗ್‌ ಅಡಕೆ  ನೆರವಾದರು. ಕಾಶಿಲಿಂಗ್‌ ಟಚ್‌ ಪಾಯಿಂಟ್‌ ಮೂಲಕ 8 ಅಂಕ, ಬೋನಸ್‌ ಮೂಲಕ 8 ಅಂಕ ಕೊಡಿಸಿದರು. ಜತೆಗೆ 2 ಟ್ಯಾಕಲ್‌ ಕೂಡ ನಡೆಸಿದರು. 

ಅಜಯ್‌ ಆಟ ವ್ಯರ್ಥ
ಅಜಯ್‌ ಠಾಕೂರ್‌ ಕಳೆದ ಎಲ್ಲ ಪಂದ್ಯಗಳಲ್ಲಿ ಭರ್ಜರಿ ಆಟವಾಡಿದ್ದಾರೆ. ಈ ಪಂದ್ಯದಲ್ಲೂ ಅತ್ಯುತ್ತಮ ರೈಡಿಂಗ್‌ ನಿರ್ವಹಿಸಿದರು. ಆದರೆ ಇದರಿಂದ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ. ಒಟ್ಟಾರೆ 15 ರೈಡಿಂಗ್‌ನಿಂದ ಅವರು 7 ಟಚ್‌ ಪಾಯಿಂಟ್‌, 2 ಬೋನಸ್‌ ಪಾಯಿಂಟ್‌ ಸಹಿತ 9 ಅಂಕ ಗಳಿಸಿದರು. ಹೆಚ್ಚುವರಿ ಆಟಗಾರನಾಗಿ ಬಂದ ಅತುಲ್‌ ರೈಡಿಂಗ್‌ನಿಂದ ಒಟ್ಟಾರೆ 6 ಅಂಕ ಗಳಿಸಿದರು.

ಟಾಪ್ ನ್ಯೂಸ್

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

1-wqeweeqwqewq

MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

rape

Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್‌ ಅಲ್ಲ: ರಾಜಸ್ಥಾನಿ ಮಹಿಳೆ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-kkr

Kolkata Raiders ಕೋಚ್‌ ಬಗ್ಗೆ ಆಟಗಾರ ಡೇವಿಡ್‌ ವೀಸ್‌ ಆರೋಪ

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ

Anant KUmar Hegde

Uttara Kannada BJP; ಅನಂತ್‌ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.