ನೀಗೀತೇ ಭಾರತೀಯರ ಪ್ರಶಸ್ತಿ ಬರಗಾಲ?
Team Udayavani, Oct 23, 2018, 6:00 AM IST
ಪ್ಯಾರಿಸ್: ರವಿವಾರವಷ್ಟೇ ಮುಕ್ತಾಯಗೊಂಡ “ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್’ ಟೂರ್ನಿಯ ಬಳಿಕ ಭಾರತದ ಬ್ಯಾಡ್ಮಿಂಟನ್ ಆಟಗಾರರಿಗೆ ಮತ್ತೂಂದು ಸವಾಲು ಸಿದ್ದವಾಗಿದೆ. ಮಂಗಳವಾರದಿಂದ “ಫ್ರೆಂಚ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ’ ಆರಂಭವಾಗಲಿದ್ದು, ಪ್ರಶಸ್ತಿಯ ತೀವ್ರ ಬರಗಾಲದಲ್ಲಿರುವ ದೇಶದ ತಾರಾ ಆಟಗಾರರಿಗೆ ಏನು ಕಾದಿದೆ ಎಂಬುದೊಂದು ಪ್ರಶ್ನೆ.
ಹಾಲಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್, ಪಿ. ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದು, ಈ ಋತುವಿನ ಮೊದಲ ಪ್ರಮುಖ ಬಿಡಬ್ಲ್ಯುಎಫ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಸತತ ಟೂರ್ನಿಗಳಲ್ಲಿ ಮುಗ್ಗರಿಸುತ್ತ ಬಂದಿರುವ ಭಾರತೀಯ ಆಟಗಾರರಿಗೆ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆಯಿದೆ.
ವಿಶ್ರಾಂತಿ ಇಲ್ಲದೆ ಕಣಕ್ಕೆ
ರವಿವಾರ ಡೆನ್ಮಾರ್ಕ್ ಓಪನ್ ಫೈನಲ್ನಲ್ಲಿ ಸೋತ ಸೈನಾ ನೆಹ್ವಾಲ್ ಹಾಗೂ ಸೆಮಿಫೈನಲ್ ಪ್ರವೇಶಿಸಿದ್ದ ಕೆ. ಶ್ರೀಕಾಂತ್ ಅವರಿಗೆ ಈ ಟೂರ್ನಿಯ ತಯಾರಿಗೆ ಹೆಚ್ಚಿನ ಸಮಯ ದೊರೆತಿಲ್ಲ. ಹೀಗಾಗಿ ಅವರು ವಿಶ್ರಾಂತಿ ಇಲ್ಲದೆ ಒತ್ತಡದಲ್ಲಿ ಆಡಬೇಕಾದ ಪರಿಸ್ಥಿತಿ ಬಂದಿದೆ. ಇತ್ತ ಡೆನ್ಮಾರ್ಕ್ ಓಪನ್ನ ಮೊದಲ ಸುತ್ತಿನಲ್ಲೇ ಅಘಾತ ಅನುಭವಿಸಿದ ಪಿ. ವಿ. ಸಿಂಧು ಫ್ರಾನ್ಸ್ನಲ್ಲಿ ಮತ್ತೆ ಟ್ರ್ಯಾಕ್ಗೆ ಮರಳುಲೇಬೇಕಿದೆ. ಉಳಿದಂತೆ ಬಿ. ಸಾಯಿ ಪ್ರಣೀತ್, ಸಮೀರ್ ವರ್ಮ ಹಾಗೂ ಮಿಶ್ರ ಡಬಲ್ಸ್ ವಿಭಾಗದಲ್ಲಿ ಅಶ್ವಿನಿ ಪೊನ್ನಪ್ಪ-ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಸ್ಪರ್ಧಿಸಲಿದ್ದಾರೆ.
ಪ್ರಶಸ್ತಿ ಉಳಿಸಿಕೊಳ್ಳುವರೇ ಶ್ರೀ?
ಕಳೆದ ವರ್ಷದ ಪುರುಷರ ಸಿಂಗಲ್ಸ್ ನಲ್ಲಿ ಕಿಡಂಬಿ ಶ್ರೀಕಾಂತ್ ಜಪಾನಿನ ಕೆಂಟ ನಿಶಿಮೊಟೊ ಅವರನ್ನು 21-14, 21-13 ಅಂತರದಿಂದ ಮಣಿಸಿ ಪ್ರಶಸ್ತಿ ಎತ್ತಿದ್ದರು. ಇದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗುವರೇ ಎಂಬುದೊಂದು ಕುತೂಹಲ. ಶ್ರೀಕಾಂತ್ ಈ ಸಲ ಆರಂಭಿಕ ಸುತ್ತಿ ನಲ್ಲಿ ಹಾಂಕಾಂಗ್ನ ವಾಂಗ್ ವಿಂಗ್ ಕಿ ವಿನ್ಸೆಂಟ್ ವಿರುದ್ಧ ಆಡಲಿದ್ದಾರೆ. ವನಿತಾ ಸಿಂಗಲ್ಸ್ನಲ್ಲಿ ಸೈನಾ ನೆಹ್ವಾಲ್ ಜಪಾನಿನ ಸಯೇನಾ ಕವಾಕಮಿ ಅವರನ್ನು, ಪಿ.ವಿ. ಸಿಂಧು ಚೀನ ಮೂಲದ ಅಮೆರಿಕನ್ ಆಟಗಾರ್ತಿ ಬೀವೆನ್ ಜಂಗ್ ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ.
ಜಂಗ್ ಕಳೆದ ವಾರವಷ್ಟೇ ಡೆನ್ಮಾರ್ಕ್ನಲ್ಲಿ ಸಿಂಧು ವಿರುದ್ಧ ಗೆಲುವು ದಾಖಲಿಸಿದ್ದರು. ಅದು ಮೊದಲ ಸುತ್ತಿನ ಸ್ಪರ್ಧೆಯಾಗಿತ್ತು. ಇಲ್ಲಿಯೂ ಇವರಿಬ್ಬರು ಮೊದಲ ಸುತ್ತಿ ನ ಲ್ಲಿಯೇ ಎದುರಾಗಿರುವುದು ಕಾಕತಾಳೀಯ. ಡೆನ್ಮಾರ್ಕ್ ಓಪನ್ ಪ್ರಶಸ್ತಿ ಗೆದ್ದ ತೈ ತ್ಸು ಯಿಂಗ್ ಹಾಗೂ ಜಪಾನಿನ ಕೆಂಟೊ ಮೊಮೊಟ ಪ್ಯಾರಿಸ್ ಕೂಟದಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ