ತವರಿನಲ್ಲಿ ಬೆಂಗಾಲ್ ವಾರಿಯರ್ ಗರ್ಜನೆ
Team Udayavani, Dec 22, 2018, 11:07 AM IST
ಕೋಲ್ಕತಾ: ಶುಕ್ರವಾರದಿಂದ ಮೊದಲ್ಗೊಂಡ ಕೋಲ್ಕತಾ ಚರಣದ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ಆತಿಥೇಯ ಬೆಂಗಾಲ್ ವಾರಿಯರ್ ಗೆಲುವಿನ ಆರಂಭ ಕಂಡುಕೊಂಡಿದೆ. ತೀವ್ರ ಪೈಪೋಟಿಯಿಂದ ಕೂಡಿದ ಮೊದಲ ಮುಖಾಮುಖೀಯಲ್ಲಿ ಬೆಂಗಾಲ್ ವಾರಿಯರ್ 27-24 ಅಂಕಗಳ ಅಂತರದಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿದೆ.
ಇದು ಪ್ರಸಕ್ತ ಕೂಟದಲ್ಲಿ ಬೆಂಗಾಲ್ ಸಾಧಿಸಿದ 9ನೇ ಗೆಲುವು. ಮಾತ್ರವಲ್ಲ ಒಟ್ಟಾರೆ ಅಂಕವನ್ನು 53 ಹೆಚ್ಚಿಸಿಕೊಂಡು ನಾಕೌಟ್ ಹಂತದ ಭರವಸೆಯನ್ನು ಹೆಚ್ಚಿಸಿಕೊಂಡಿತು. ಈಗಗಲೇ ಹೊರಬಿದ್ದ ತಮಿಳ್ಗೆ ಈ ಸೋಲು ಗಾಯದ ಮೇಲೆ ಬರೆ ಎಳೆಯಿತು.
“ನೇತಾಜಿ ಒಳಾಂಗಣ ಕ್ರೀಡಾಂ ಗಣ’ದಲ್ಲಿ ನಡೆದ ಪಂದ್ಯದಲ್ಲಿ ಜಾಂಗ್ ಕುನ್ ಲೀ (12 ಅಂಕ), ಮಣಿಂದರ್ ಸಿಂಗ್ (7 ಅಂಕ) ಬೆಂಗಾಲ್ ಪರ ರೈಡಿಂಗ್ನಲ್ಲಿ ಮಿಂಚಿದರು. ರಾಣಾ ಸಿಂಗ್ (4 ಅಂಕ)ಅದ್ಭುತ ಟ್ಯಾಕಲ್ ಮೂಲಕ ತಲೈವಾಸ್ಗೆ ಸುಸ್ತು ಹೊಡೆಸಿದರು.
ತಮಿಳ್ ತಲೈವಾಸ್ ಪರ ಕನ್ನಡಿಗ ಸುಕೇಶ್ ಹೆಗ್ಡೆ (9 ಅಂಕ) ಮಿಂಚಿನ ರೈಡಿಂಗ್ ಪ್ರದರ್ಶಿಸಿದರು. ಆದರೆ ರಕ್ಷಣಾ ವಿಭಾಗದ ಭಾರೀ ವೈಫಲ್ಯ ತಲೈವಾಸ್ ಆಘಾತ ಅನುಭವಿಸಿತು. ನಾಯಕ ಅಜಯ್ ಠಾಕೂರ್ (5 ಅಂಕ) ಹಾಗೂ ಅತುಲ್ (4 ಅಂಕ) ರೈಡಿಂಗ್ನಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ಸು ಸಾಧಿಸಿದರು. ದಿನದ ಮತ್ತೂಂದು ಪಂದ್ಯದಲ್ಲಿ ಪುನೇರಿ ಪಲ್ಟಾನ್ 35-20ರಿಂದ ತೆಲುಗು ಟೈಟಾನ್ಸ್ಗೆ ಸೋಲುಣಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
AAP ‘ಮಹಾರ್ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?