ಭಾರತಕ್ಕೆ ಇಂದು ಪಾಕಿಸ್ಥಾನ ಎದುರಾಳಿ 


Team Udayavani, Nov 11, 2018, 6:05 AM IST

pti11102018000070b.jpg

ಪ್ರೊವಿಡೆನ್ಸ್‌: ತನ್ನ “ಪವರ್‌ ಪ್ಯಾಕ್ಡ್’ ಪರಾಕ್ರಮದ ಮೂಲಕ ಅಪಾಯಕಾರಿ ನ್ಯೂಜಿಲ್ಯಾಂಡನ್ನು 34 ರನ್ನುಗಳಿಂದ ಕೆಡವಿದ ಭಾರತ, ರವಿವಾರದ ತನ್ನ 2ನೇ ಟಿ20 ವಿಶ್ವಕಪ್‌ ಲೀಗ್‌ ಪಂದ್ಯದಲ್ಲಿ ಪಾಕಿಸ್ಥಾನವನ್ನು ಎದುರಿಸಲಿದೆ.

ಕಿವೀಸ್‌ ಎದುರಿನ ಪರಾಕ್ರಮವೇ ಮುಂದುವರಿದರೆ ಪಾಕ್‌ ಪಡೆ ಭಾರತಕ್ಕೆ ಸುಲಭದ ತುತ್ತಾಗುವುದರಲ್ಲಿ ಅನುಮಾನವಿಲ್ಲ. ಶುಕ್ರವಾರದ ಆರಂಭದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ 52 ರನ್ನುಗಳಿಂದ ಸೋತ ಒತ್ತಡ ಕೂಡ ಪಾಕ್‌ ಮೇಲಿದೆ. ಮಿಥಾಲಿ ರಾಜ್‌ ಕ್ರೀಸ್‌ ಇಳಿಯದೆಯೇ ಭಾರತ ದೊಡ್ಡ ಮೊತ್ತ ಪೇರಿಸಿತ್ತು ಎಂಬುದನ್ನು ಮರೆಯುವಂತಿಲ್ಲ.

ಕಳೆದ ಸಲ ಸೋತಿದ್ದ ಭಾರತ!
2016ರ ತವರಿನ ವಿಶ್ವಕಪ್‌ನಲ್ಲಿ ಭಾರತದ ವನಿತೆಯರು ಪಾಕಿಸ್ಥಾನ ವಿರುದ್ಧ ಆಘಾತಕಾರಿ ಸೋಲಿಗೆ ತುತ್ತಾಗಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳುವ ಯೋಜನೆ ಕೂಡ ಕೌರ್‌ ಬಳಗದ ಮುಂದಿದೆ. ಅಂದು “ಫಿರೋಜ್‌ ಶಾ ಕೋಟ್ಲಾ’ ಪಂದ್ಯದಲ್ಲಿ ಪಾಕ್‌ ಡಿ-ಎಲ್‌ ನಿಯಮದಂತೆ 2 ರನ್‌ ಜಯ ಸಾಧಿಸಿತ್ತು. ಭಾರತ 7ಕ್ಕೆ 96 ರನ್‌ ಗಳಿಸಿದರೆ, ಮಳೆ ಬಂದು ಪಂದ್ಯ ನಿಂತಾಗ ಪಾಕಿಸ್ಥಾನ 16 ಓವರ್‌ಗಳಲ್ಲಿ 6 ವಿಕೆಟಿಗೆ 77 ರನ್‌ ಗಳಿಸಿತ್ತು.

ಆದರೆ ದಿಲ್ಲಿ ಸೋಲಿನ ಬಳಿಕ ಎಚ್ಚೆತ್ತುಕೊಂಡ ಭಾರತ, 2 ಏಶ್ಯ ಕಪ್‌ ಆವೃತ್ತಿಗಳಲ್ಲಿ ಪಾಕಿಸ್ಥಾನವನ್ನು 3 ಸಲ ಎದುರಿಸಿ ಎಲ್ಲದರಲ್ಲೂ ಜಯಭೇರಿ ಮೊಳಗಿಸಿತ್ತು. ರವಿವಾರವೂ ನೆಚ್ಚಿನ ತಂಡವಾಗಿ ಕಣಕ್ಕಿಳಿಯಲಿದೆ.

ಹರ್ಮನ್‌ಪ್ರೀತ್‌ ಮತ್ತು ಜೆಮಿಮಾ ಜಬರ್ದಸ್ತ್ ಬ್ಯಾಟಿಂಗ್‌ ಮೂಲಕ ಕಿವೀಸ್‌ ರೆಕ್ಕೆ ಕತ್ತರಿಸುವಲ್ಲಿ ಭಾರತ ಯಶಸ್ವಿಯಾಗಿತ್ತು. ಆದರೆ ಅಲ್ಲಿ ವಿಫ‌ಲರಾದ ಅಗ್ರ ಕ್ರಮಾಂಕದ ಆಟಗಾರ್ತಿಯರು ಪಾಕ್‌ ವಿರುದ್ಧ ತಮ್ಮ ಫಾರ್ಮ್ ಪ್ರದರ್ಶಿಸಬೇಕಾದ ಅಗತ್ಯವಿದೆ.

ಸ್ಪಿನ್‌ ಮ್ಯಾಜಿಕ್‌ ನಿರೀಕ್ಷೆ
ಪ್ರೊವಿಡೆನ್ಸ್‌ ಅಂಗಳ ಸ್ಪಿನ್‌ ಹಾಗೂ ನಿಧಾನ ಗತಿಯ ಬೌಲರ್‌ಗಳಿಗೆ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಆಫ್ ಸ್ಪಿನ್ನರ್‌ಗಳಾದ ದೀಪ್ತಿ ಶರ್ಮ, ಡಿ. ಹೇಮಲತಾ, ಲೆಗ್‌ಸ್ಪಿನ್ನರ್‌ ಪೂನಂ ಯಾದವ್‌, ಎಡಗೈ ಸ್ಪಿನರ್‌ ರಾಧಾ ಯಾದವ್‌ ಅವರ ಮ್ಯಾಜಿಕ್‌ ಮತ್ತೂಮ್ಮೆ ನಡೆಯಬಹುದು. ಕಿವೀಸ್‌ ವಿರುದ್ಧ ಬಿದ್ದ 9 ವಿಕೆಟ್‌ಗಳಲ್ಲಿ ಎಂಟನ್ನು ಸ್ಪಿನ್ನರ್‌ಗಳೇ ಬುಟ್ಟಿಗೆ ಹಾಕಿಕೊಂಡಿದ್ದರು. ಆದರೆ ಪಾಕಿಸ್ಥಾನ ಸ್ಪಿನ್‌ ನಿಭಾವಣೆಯಲ್ಲಿ ಹೆಚ್ಚಿನ ಪರಿಣತಿ ಹೊಂದಿರುವುದರಿಂದ ಹೆಚ್ಚುವರಿ ಸೀಮರ್‌ ಮಾನ್ಸಿ ಜೋಶಿ ಅಥವಾ ಪೂಜಾ ವಸ್ತ್ರಾಕರ್‌ ಅವಕಾಶ ಪಡೆಯಲೂಬಹುದು.

ಪಾಕಿಸ್ಥಾನ ತಂಡದಲ್ಲೂ ಕೆಲವು ಮಂದಿ ಅಪಾಯಕಾರಿ ಕ್ರಿಕೆಟಿಗರಿದ್ದಾರೆ. ನಾಯಕಿ ಜವೇರಿಯಾ ಖಾನ್‌, ಹಿರಿಯ ಸ್ಪಿನ್ನರ್‌ ಸನಾ ಮಿರ್‌, ಆಲ್‌ರೌಂಡರ್‌ ಬಿಸ್ಮಾ ಮರೂಫ್ ಬಗ್ಗೆ ಭಾರತ ಎಚ್ಚರಿಕೆಯಿಂದ ಇರಬೇಕಾಗುತ್ತದೆ.

ಇಂದಿನ ಪಂದ್ಯಗಳು
1. ಭಾರತ-ಪಾಕಿಸ್ಥಾನ
ಆರಂಭ: ರಾತ್ರಿ 8.30
2. ಆಸ್ಟ್ರೇಲಿಯ -ಅಯರ್‌ಲ್ಯಾಂಡ್‌
ಆರಂಭ: ನಡುರಾತ್ರಿ ಬಳಿಕ 1.30

ಟಾಪ್ ನ್ಯೂಸ್

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

7-uv-fusion

UV Fusion: ಚುಕ್ಕಿ ತಾರೆ ನಾಚುವಂತೆ ಒಮ್ಮೆ ನೀ ನಗು

6-fusion

Yugadi: ಯುಗಾದಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.