ಪ್ರೊ ಕಬಡ್ಡಿ: ತಮಿಳ್-ಹರ್ಯಾಣ ಪಂದ್ಯ ಟೈ
Team Udayavani, Nov 15, 2018, 6:00 AM IST
ಮುಂಬೈ: ಇಲ್ಲಿನ ಎನ್ಎಸ್ಸಿಐ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಆರನೇ ಆವೃತ್ತಿ ಪ್ರೊ ಕಬಡ್ಡಿ ಕೂಟದ ಮುಂಬೈ ಚರಣದ ತಮಿಳ್ ತಲೈವಾಸ್ ಮತ್ತು ಹರ್ಯಾಣ ಸ್ಟೀಲರ್ ನಡುವಿನ ಪಂದ್ಯ 32-32 ಅಂಕಗಳ ರೋಚಕ ಟೈನಲ್ಲಿ ಅಂತ್ಯವಾಯಿತು.
ಬುಧವಾರ ನಡೆದ ಪಂದ್ಯದಲ್ಲಿ ಎರಡು ತಂಡಗಳ ಜಿದ್ದಾಜಿದ್ದಿನ ಸೆಣಸಾಟ ಕೊನೆಗೆ ನೀರಸ ಟೈನಲ್ಲಿ ಅಂತ್ಯವಾಗಿದ್ದು ಉಭಯ ತಂಡದ ಅಭಿಮಾನಿಗಳಿಗೆ ಭಾರೀ ನಿರಾಸೆ ತರಿಸಿತು. ಪಂದ್ಯದ ಆರಂಭದಲ್ಲಿ ತಮಿಳ್ ತಲೈವಾಸ್ 4-1 ಅಂಕಗಳ ಅಂತರದಿಂದ ಮುನ್ನಡೆ ಸಾಧಿಸಿತ್ತು. ಜಸ್ವೀರ್ ಸಿಂಗ್ ಹಾಗೂ ಅಜಯ್ ಠಾಕೂರ್ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟಿದ್ದರು. ಆದರೆ ಹರ್ಯಾಣ ಸ್ಟೀಲರ್ ನಂತರದ ಅವಧಿಯಲ್ಲಿ ಪ್ರಬಲ ಆಟ ಪ್ರದರ್ಶಿಸಿ ಮೇಲುಗೈ ಸಾಧಿಸಿಕೊಂಡಿತು. ಹರ್ಯಾಣ ಪರ ವಿಕಾಸ್ ಕಾಂಡೋಲ (14 ಅಂಕ) ರೈಡಿಂಗ್ನಿಂದ ಏಕೈಕ ಹೋರಾಟ ಪ್ರದರ್ಶಿಸಿದರು. ಹೀಗಾಗಿ ಸ್ಟೀಲರ್ ಟೈ ಸಾಧಿಸಲು ಸಾಧ್ಯವಾಯಿತು.
ಕನ್ನಡಿಗ ಸುಕೇಶ್ ಮಿಂಚು: ತಮಿಳ್ ತಲೈವಾಸ್ ಪರ ಕನ್ನಡಿಗ ಸುಕೇಶ್ ಹೆಗ್ಡೆ (7 ಅಂಕ) ರೈಡಿಂಗ್ ಮೂಲಕ ತಂಡಕ್ಕೆ ನೆರವಾದರು. ಉಳಿದಂತೆ ನಾಯಕ ಅಜಯ್ ಠಾಕೂರ್ (6 ಅಂಕ), ಮಂಜಿತ್ ಚಿಲ್ಲಾರ್ (4 ಅಂಕ) ಹಾಗೂ ಜಸ್ವೀರ್ ಸಿಂಗ್ (4 ಅಂಕ) ಸಾಧಾರಣ ಹೋರಾಟ ಪ್ರದರ್ಶಿಸಲಷ್ಟೇ ಸಾಧ್ಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ