ಪೃಥ್ವಿ ಹೊರಕ್ಕೆ ಮಾಯಾಂಕ್, ಪಾಂಡ್ಯ ಒಳಕ್ಕೆ
Team Udayavani, Dec 18, 2018, 6:15 AM IST
ಪರ್ಥ್: ಪೂರ್ಣ ಆಸ್ಟ್ರೇಲಿಯ ಸರಣಿಯಿಂದಲೇ ಆರಂಭಿಕ ಬ್ಯಾಟ್ಸ್ಮನ್ ಪೃಥ್ವಿ ಶಾ ಹೊರಕ್ಕೆ ಬಿದ್ದಿದ್ದಾರೆ.ಅಭ್ಯಾಸ ಪಂದ್ಯದ ವೇಳೆ ಗಾಯಗೊಂಡಿದ್ದ ಪೃಥ್ವಿ ಶಾ ಕೊನೆಗೂ ಚೇತರಿಕೆ ಕಾಣದ ಕಾರಣಕ್ಕೆ ಟೀಂ ಇಂಡಿಯಾದಲ್ಲಿ ಕರ್ನಾಟಕ ಆರಂಭಿಕ ಬ್ಯಾಟ್ಸ್ಮನ್ ಮಾಯಾಂಕ್ ಅಗರ್ವಾಲ್ಗೆ ಸ್ಥಾನ ನೀಡಲಾಗಿದೆ.
ಪ್ರಸಕ್ತ ಗುಜರಾತ್ ವಿರುದ್ಧ ರಣಜಿ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿದ್ದ ಮಾಯಾಂಕ್ಗೆ ಸೋಮವಾರ ರಾಷ್ಟ್ರೀಯ ತಂಡದಿಂದ ದಿಢೀರ್ ಕರೆ ಬಂದಿದೆ. ಈ ಹಿಂದೆ ವೆಸ್ಟ್ ಇಂಡೀಸ್ ವಿರುದ್ಧದ ತವರಿನಲ್ಲಿ ನಡೆದ ಸರಣಿಗೆ ಮಾಯಾಂಕ್ ಆಯ್ಕೆಯಾಗಿದ್ದರು. ಆದರೆ ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಇವರಿಗೆ ಸ್ಥಾನ ದೊರಕುವ ನಿರೀಕ್ಷೆ ಹೆಚ್ಚಿದೆ.
ಪೃಥ್ವಿ ಹೊರಬಿದ್ದಿರುವುದು,ಕೆ.ಎಲ್.ರಾಹುಲ್ – ಮುರಳಿ ವಿಜಯ್ ಜೋಡಿ ಆರಂಭಿಕರಾಗಿ ವಿಫಲರಾಗಿರುವುದು ಗಮನಿಸಿದಾಗ ಮಾಯಾಂಕ್ಗೆ ಇನಿಂಗ್ಸ್ ಭಾರತದ ಆರಂಭಿಸುವ ಅವಕಾಶ ಸಿಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಮೊದಲ ಟೆಸ್ಟ್ ಆಡುವ ಮೂಲಕ ಪಾದಾರ್ಪಣೆ ಮಾಡುವ ಹುಮ್ಮಸ್ಸಿನಲ್ಲಿರುವ ಮಾಯಾಂಕ್ಗೆ ಅವಕಾಶ ಸಿಗಲಿದೆಯೇ ಎನ್ನುವುದು ಸದ್ಯದ ಕುತೂಹಲ. ಆಸ್ಟ್ರೇಲಿಯ ಪಿಚ್ ವೇಗದ ಬೌಲಿಂಗ್ಗೆ ಹೆಚ್ಚಿನ ನೆರವು ನೀಡುತ್ತಿರುವುದರಿಂದ ವೇಗಿ ಹಾರ್ದಿಕ್ ಪಾಂಡ್ಯಗೂ ತಂಡವನ್ನು ಕೂಡಿಕೊಳ್ಳುವಂತೆ ಕರೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್