ಹಾರ್ದಿಕ್-ರಾಹುಲ್ ಪ್ರಕರಣ: ಬಿಸಿಸಿಐ ಅಧಿಕಾರಿಗಳ ನಡುವೆ ಭಿನ್ನಮತ?
Team Udayavani, Jan 13, 2019, 12:55 AM IST
ಮುಂಬಯಿ: ಕಾಫಿ ವಿತ್ ಕರಣ್ ಟೀವಿ ಶೋನಲ್ಲಿ ಮಹಿಳೆಯರ ವಿರುದ್ಧ ಅಸಭ್ಯ ಹೇಳಿಕೆ ನೀಡಿದ ಆರೋಪ ಎದುರಿಸುತ್ತಿರುವ ಹಾರ್ದಿಕ್ ಪಾಂಡ್ಯ-ಕೆ.ಎಲ್. ರಾಹುಲ್ ಪ್ರಕರಣ ಈಗ ಬಿಸಿಸಿಐ ಆಡಳಿತಾಧಿಕಾರಿಗಳ ನಡುವೆಯೇ ಭಿನ್ನಮತ ಸೃಷ್ಟಿಸಿದೆಯೇ? ಹೌದು ಎನ್ನುತ್ತದೆ ಒಂದು ವರದಿ.
ಈ ಇಬ್ಬರೂ ಕ್ರಿಕೆಟಿಗರ ವಿಚಾರಣೆಯನ್ನು ಬೇಗ ಮುಗಿಸಿ ಮತ್ತೆ ಅವರು ತಂಡಕ್ಕೆ ಮರಳುವಂತೆ ಮಾಡುವುದು ಮುಖ್ಯ ಆಡಳಿತಾಧಿಕಾರಿ ವಿನೋದ್ ರಾಯ್ ಇಂಗಿತವಾಗಿತ್ತು. ಅಲ್ಲದೇ ವಿಚಾರಣೆಯನ್ನು ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ನಡೆಸುವುದಾಗಿಯೂ ತೀರ್ಮಾನಿಸಲಾಗಿತ್ತು. ಈ ಎರಡೂ ಪ್ರಸ್ತಾವಕ್ಕೆ ಸಹ ಆಡಳಿತಾಧಿಕಾರಿ ಡಯಾನಾ ಎಡುಲ್ಜಿ ವಿರೋಧಿಸಿದ್ದಾರೆ ಎನ್ನಲಾಗಿದೆ.
ಬದಲಿ ಆಟಗಾರರಿಗೆ ಅನುಮತಿ
ಆಸ್ಟ್ರೇಲಿಯದಿಂದ ಭಾರತಕ್ಕೆ ಮರಳಿರುವ ಇಬ್ಬರ ಬದಲಿಗೆ ಬೇರೆ ಆಟಗಾರರನ್ನು ಸೇರಿಸಿಕೊಳ್ಳುವುದಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಆದರೂ ಇಬ್ಬರ ವಿಚಾರಣೆಯನ್ನು ಬೇಗ ಮುಗಿಸಲು ವಿನೋದ್ ಬಯಸಿದ್ದರು. ಇಬ್ಬರ ಕಾರಣಕ್ಕೆ ತಂಡದ ಬಲ ಕುಸಿಯಬಾರದೆನ್ನುವುದು ಅವರ ಉದ್ದೇಶವಾಗಿತ್ತು. ಆದರೆ ತರಾತುರಿಯಲ್ಲಿ ವಿಚಾರಣೆ ನಡೆಸುವುದಕ್ಕೆ ಡಯಾನಾ ಒಪ್ಪಿಲ್ಲ. ಹೀಗೆ ಮಾಡಿದರೆ ಪ್ರಕರಣ ಮುಚ್ಚಿ ಹಾಕಲು, ಬಿಸಿಸಿಐ ಯತ್ನಿಸುತ್ತಿದೆ ಎಂಬ ಅಭಿಪ್ರಾಯ ಬರುತ್ತದೆ ಎಂದು ಡಯಾನ ಹೇಳಿದ್ದಾರೆ ಎನ್ನಲಾಗಿದೆ.
ಕಳಂಕಿತರಿಂದ ವಿಚಾರಣೆ ಬೇಡ
ಇನ್ನೊಂದು ಕಡೆ, 2 ತಿಂಗಳ ಹಿಂದೆ ಮೀ ಟೂ ಪ್ರಕರಣದಡಿ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿ ವಿಚಾರಣೆ ನಡೆಸುವುದೆಂದು ತೀರ್ಮಾನವಾಗಿತ್ತು ಎನ್ನಲಾಗಿದೆ. ಕಳಂಕಿತ ವ್ಯಕ್ತಿ ವಿಚಾರಣೆ ನಡೆಸಿದರೆ ತಪ್ಪು ಅಭಿಪ್ರಾಯ ಬರುತ್ತದೆ. ಆದ್ದರಿಂದ ವಿಚಾರಣೆಯನ್ನು ಆಡಳಿತಾಧಿಕಾರಿಗಳೇ ನಡೆಸಬೇಕೆಂದು ಡಯಾನಾ ಒತ್ತಾಯಿಸಿದ್ದಾರೆ. ಈ ಹಿಂದೆಯೂ ಕೆಲ ಪ್ರಕರಣದಲ್ಲಿ ವಿನೋದ್ ರಾಯ್ ನಿಲುವುಗಳಿಗೆ ಡಯಾನಾ ವ್ಯತಿರಿಕ್ತವಾಗಿ ನಡೆದುಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ
DCvsGT; ಪಂತ್ ನಾಯಕತ್ವಕ್ಕೆ ಅಗ್ನಿಪರೀಕ್ಷೆ: ತವರಿನ “ಕೋಟ್ಲಾ’ದಲ್ಲಿ ಗುಜರಾತ್ ಎದುರಾಳಿ
ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?