ವೀನಸ್‌ ಆಟ ಮುಗಿಸಿದ ಹಾಲೆಪ್‌​​​​​​​


Team Udayavani, Jan 20, 2019, 12:30 AM IST

simona-halep-venus-williams.jpg

ಮೆಲ್ಬರ್ನ್: ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸಿಮೋನಾ ಹಾಲೆಪ್‌ ವಿಲಿಯಮ್ಸ್‌ ಸೋದರಿಯರಲ್ಲಿ ಹಿರಿಯಳಾದ ವೀನಸ್‌ಗೆ ಸೋಲುಣಿಸುವ ಮೂಲಕ ಅಂತಿಮ 16ರ ಸುತ್ತು ಪ್ರವೇಶಿಸಿದ್ದಾರೆ. ಸೋಮವಾರ ಇಲ್ಲಿ ಸೆರೆನಾ ವಿಲಿಯಮ್ಸ್‌ ವಿರುದ್ಧ ಸೆಣಸಲಿದ್ದಾರೆ. ನವೋಮಿ ಒಸಾಕಾ, ಗಾರ್ಬಿನ್‌ ಮುಗುರುಜಾ, ಕ್ಯಾರೋಲಿನಾ ಪ್ಲಿಸ್ಕೋವಾ, ಅನಾಸ್ತಾಸಿಜಾ ಸೆವಸ್ತೋವಾ ವನಿತಾ ಸಿಂಗಲ್ಸ್‌ ವಿಭಾಗದಿಂದ ಮುನ್ನಡೆದವರಲ್ಲಿ ಪ್ರಮುಖರು.

ಕಳೆದ ಸಲದ ಫೈನಲಿಸ್ಟ್‌ ಹಾಲೆಪ್‌ ಶನಿವಾರದ 3ನೇ ಸುತ್ತಿನ ಪಂದ್ಯದಲ್ಲಿ 6-2, 6-3 ಅಂತರದಿಂದ, ಬಹಳ ಸುಲಭದಲ್ಲಿ ವೀನಸ್‌ ಆಟಕ್ಕೆ ತೆರೆ ಎಳೆದರು. “ಈ ವರ್ಷ ನನ್ನ ಅತ್ಯುತ್ತಮ ಪಂದ್ಯವೊಂದನ್ನು ಇಲ್ಲಿ ಆಡಿದೆ’ ಎಂಬುದಾಗಿ ಹಾಲೆಪ್‌ ಪ್ರತಿಕ್ರಿಯಿಸಿದ್ದಾರೆ. ಆದರೆ ಸೆರೆನಾ ವಿರುದ್ಧ ಹಾಲೆಪ್‌ ಕಳಪೆ ದಾಖಲೆ ಹೊಂದಿದ್ದಾರೆ. 9 ಪಂದ್ಯಗಳಲ್ಲಿ ಗೆದ್ದದ್ದು ಒಂದನ್ನು ಮಾತ್ರ.

ಸೆರೆನಾಗೆ ಸುಲಭ ಜಯ
ದಿನದ ಇನ್ನೊಂದು ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ ಉಕ್ರೇನಿನ ಯುವ ಆಟಗಾರ್ತಿ ಡಯಾನಾ ಯಾಸ್ಟ್ರೆಮ್‌ಸ್ಕಾ ವಿರುದ್ಧ 6-2, 6-1 ಅಂತರದಿಂದ ಗೆದ್ದು ಬಂದರು. ಸೆರೆನಾ 1999ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದಾಗ ಆಗಿನ್ನೂ ಯಾಸ್ಟ್ರೆಮ್‌ಸ್ಕಾ ಜನಿಸಿರಲಿಲ್ಲ!

“ನಿನ್ನ ಆಟ ಅಮೋಘವಾಗಿತ್ತು. ಮುಂದೊಂದು ದಿನ ಗೆಲುವು ಕೈಹಿಡಿಯಲಿದೆ. ಬೇಸರಪಡಬೇಡ’ ಎಂದು ಸೆರೆನಾ ಕಣ್ಣೀರಿಡುತ್ತಿದ್ದ ಯಾಸ್ಟ್ರೆಮ್‌ಸ್ಕಾಗೆ ಸಮಾಧಾನ ಮಾಡಿ ಕ್ರೀಡಾಸ್ಫೂರ್ತಿ ಮೆರೆದರು.

ಒಸಾಕಾ, ಮುಗುರುಜಾ ಓಟ
ಯುಎಸ್‌ ಓಪನ್‌ ಚಾಂಪಿಯನ್‌, ಜಪಾನಿನ 17ರ ಹರೆಯದ ಆಟಗಾರ್ತಿ ನವೋಮಿ ಒಸಾಕಾ 3 ಸೆಟ್‌ಗಳ ಕಾದಾಟದ ಬಳಿಕ 3ನೇ ಸುತ್ತು ದಾಟುವಲ್ಲಿ ಯಶಸ್ವಿಯಾದರು. ಶನಿವಾರದ “ಆಲ್‌ ಏಶ್ಯನ್‌’ ಪಂದ್ಯದಲ್ಲಿ ಅವರು ಥೈವಾನ್‌ನ ಸೀ ಸು ವೀ ವಿರುದ್ಧ 7-5, 4-6, 6-1 ಅಂತರದ ಗೆಲುವು ಸಾಧಿಸಿದರು. ಮುಂದಿನ ಎದುರಾಳಿ ಲಾತ್ವಿಯಾದ ಅನಾಸ್ತಾಸಿಜಾ ಸೆವಸ್ತೋವಾ. ಅವರು ಚೀನದ ವಾಂಗ್‌ ಕ್ವಿಯಾಂಗ್‌ ವಿರುದ್ಧ 6-3, 6-3 ಅಂತರದಿಂದ ಗೆದ್ದರು.ಸ್ಪೇನಿನ ಗಾರ್ಬಿನ್‌ ಮುಗುರುಜಾ ಸ್ವಿಸ್‌ ಆಟಗಾರ್ತಿ ಟೈಮಿಯಾ ಬಕ್ಸಿನ್‌ಸ್ಕಿ ವಿರುದ್ಧ 7-6 (7-5), 6-2 ಅಂತರದಿಂದ ಜಯ ಸಾಧಿಸಿ 4ನೇ ಸುತ್ತು ತಲುಪಿದರು.

ಮಿಕ್ಸೆಡ್‌ ಡಬಲ್ಸ್‌
ಪೇಸ್‌ ಜಯ, ಬೋಪಣ್ಣ ಪರಾಭವ

ಆಸ್ಟ್ರೇಲಿಯನ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಶನಿವಾರ ಭಾರತ ಮಿಶ್ರ ಫ‌ಲ ಅನುಭವಿಸಿದೆ. ಲಿಯಾಂಡರ್‌ ಪೇಸ್‌ ಜಯ ಸಾಧಿಸಿದರೆ, ರೋಹನ್‌ ಬೋಪಣ್ಣ ಪರಾಭವಗೊಂಡರು.ತವರಿನ ಸಮಂತಾ ಸ್ಟೋಸರ್‌ ಜತೆಗೂಡಿ ಆಡುತ್ತಿರುವ ಲಿಯಾಂಡರ್‌ ಪೇಸ್‌ ನೆದರ್ಲೆಂಡ್‌ನ‌ ವೆಸ್ಲಿ ಕೂಲ್‌ಹೋಫ್-ಜೆಕ್‌ ಗಣರಾಜ್ಯದ ಕ್ವೆಟಾ ಪೆಶೆR ವಿರುದ್ಧ 6-4, 7-5 ಅಂತರದಿಂದ ಜಯ ಸಾಧಿಸಿದರು. ಆದರೆ ದಿಟ್ಟ ಹೋರಾಟ ಪ್ರದರ್ಶಿಸಿಯೂ ರೋಹನ್‌ ಬೋಪಣ್ಣ-ಚೀನದ ಯಾಂಗ್‌ ಜೊಕ್ಸುವಾನ್‌ ಜೋಡಿ ರಾಬರ್ಟ್‌ ಫ‌ರ (ಕೊಲಂಬಿಯಾ)-ಅನ್ನಾ ಲೆನಾ ಗ್ರೋನ್‌ಫೆಲ್ಡ್‌ (ಜರ್ಮನಿ) ವಿರುದ್ಧ 6-3, 3-6, 6-10 ಅಂತರದಿಂದ ಪರಾಭವಗೊಂಡರು.

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.