ಐಸಿಸಿ ಪ್ರಶಸ್ತಿಗಳ ಮೇಲೂ ವಿರಾಟ್‌ ಕೊಹ್ಲಿ “ಆಕ್ರಮಣ’


Team Udayavani, Jan 23, 2019, 12:50 AM IST

virat.jpg

ದುಬಾೖ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, 2018-19ರ ಸಾಲಿನಲ್ಲಿ ಪ್ರದರ್ಶಿಸಿದ ಶ್ರೇಷ್ಠ ಆಟಕ್ಕಾಗಿ ನೀಡಲ್ಪಡುವ ಐಸಿಸಿ ವರ್ಷದ ಪ್ರಶಸ್ತಿಗಳಲ್ಲಿ ಪ್ರಮುಖ ಮೂರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಕೊಹ್ಲಿ ಅವರು ಇಂತಹ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎನ್ನುವುದು ಈಗ ಇತಿಹಾಸದಲ್ಲಿ ದಾಖಲಾಗಿದೆ. ಐಸಿಸಿ ವರ್ಷದ ಕ್ರಿಕೆಟಿಗರಿಗೆ ನೀಡಲಾಗುವ ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಪ್ರಶಸ್ತಿ ಜತೆಗೆ ಟೆಸ್ಟ್‌, ಏಕದಿನ ಕ್ರಿಕೆಟಿಗ ಪ್ರಶಸ್ತಿಗಳನ್ನು ಅವರು ಏಕಕಾಲದಲ್ಲಿ ಪಡೆದಿದ್ದಾರೆ. 

ಅಲ್ಲದೇ ಐಸಿಸಿ ಟೆಸ್ಟ್‌ ಹಾಗೂ ಏಕದಿನ ತಂಡಗಳ ನಾಯಕ ರಾಗಿಯೂ ಆಯ್ಕೆಯಾಗಿದ್ದಾರೆ. ಕಳೆದ ವರ್ಷವೂ ಕೊಹ್ಲಿ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದರು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
2018ರಲ್ಲಿ ಆಡಿದ 13 ಟೆಸ್ಟ್‌ಗಳಲ್ಲಿ 5 ಶತಕಗಳೊಂದಿಗೆ 1,322 ರನ್‌ (ಸರಾಸರಿ 55.08 ರನ್‌), ಆಡಿದ 14 ಏಕದಿನ ಪಂದ್ಯಗಳಲ್ಲಿ 6 ಶತಕಗಳೊಂದಿಗೆ 1,202 ರನ್‌ (ಸರಾಸರಿ 133.55 ರನ್‌) ಬಾರಿಸಿದ್ದಾರೆ. ಒಟ್ಟು 10 ಟಿ20 ಪಂದ್ಯಗಳಲ್ಲಿ ಅವರು 211 ರನ್‌ ಬಾರಿಸಿದ್ದಾರೆ.

ಅಲ್ಲದೇ ಅವರ ನಾಯಕತ್ವದಲ್ಲಿ ಕಳೆದ ವರ್ಷ ಭಾರತ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ತಲಾ 1 ಟೆಸ್ಟ್‌ ಪಂದ್ಯ ಗೆದ್ದಿದೆ. ದಕ್ಷಿಣ ಆಫ್ರಿಕಾದಲ್ಲಿ ಟಿ20, ಏಕದಿನ ಸರಣಿ ಗೆದ್ದಿದೆ. ಆಸ್ಟ್ರೇಲಿಯ ದಲ್ಲಂತೂ ಟಿ20 ಸರಣಿ ಸಮಗೊಂಡಿ ದ್ದರೆ, ಏಕದಿನ, ಟೆಸ್ಟ್‌ ಸರಣಿಗಳನ್ನು ಭಾರತ ವಶಪಡಿಸಿಕೊಂಡಿದೆ. ಈ ಸಾಧನೆಗಳು ಕೊಹ್ಲಿ ಬೆನ್ನಿಗೆ ನಿಂತಿವೆ.

ಐಸಿಸಿ ತಂಡಗಳಿಗೂ ನಾಯಕ 
ಐಸಿಸಿ ವರ್ಷದ ಟೆಸ್ಟ್‌ ಹಾಗೂ ಏಕದಿನ ತಂಡಗಳನ್ನು ಈ ವೇಳೆ ಪ್ರಕಟಿಸಲಾಗಿದೆ. ಕೊಹ್ಲಿಯೇ ಎರಡೂ ತಂಡಗಳಿಗೂ ನಾಯಕರಾದ ಅದ್ಭುತ ಸಾಧನೆ ಮಾಡಿದ್ದಾರೆ. ಎರಡೂ ತಂಡಗಳಲ್ಲಿ ಭಾರತದ ಆಟಗಾರರೇ ಮೇಲುಗೈ ಸಾಧಿಸಿದ್ದಾರೆ. ಟೆಸ್ಟ್‌ನಲ್ಲಿ ಕೊಹ್ಲಿ ಜತೆಗೆ ರಿಷಭ್‌ ಪಂತ್‌, ಜಸ್‌ಪ್ರೀತ್‌ ಬುಮ್ರಾ ಇದ್ದಾರೆ. ಏಕದಿನದಲ್ಲಿ ಕೊಹ್ಲಿ ಜತೆಗೆ ರೋಹಿತ್‌ ಶರ್ಮ, ಕುಲದೀಪ್‌ ಯಾದವ್‌, ಬುಮ್ರಾ ಇದ್ದಾರೆ. ಎರಡೂ ತಂಡಗಳಲ್ಲಿ ಕೊಹ್ಲಿ, ಬುಮ್ರಾ ಸ್ಥಾನ ಪಡೆದಿರುವುದು ವಿಶೇಷ.

ಐಸಿಸಿ ವರ್ಷದ ಏಕದಿನ ತಂಡ
ರೋಹಿತ್‌ ಶರ್ಮ (ಭಾರತ), ಜಾನಿ ಬೇರ್‌ಸ್ಟೋ (ಇಂಗ್ಲೆಂಡ್‌), ವಿರಾಟ್‌ ಕೊಹ್ಲಿ (ಭಾರತ, ನಾಯಕ), ಜೋ ರೂಟ್‌ (ಇಂಗ್ಲೆಂಡ್‌), ರಾಸ್‌ ಟಯ್ಲರ್‌ (ನ್ಯೂಜಿಲ್ಯಾಂಡ್‌), ಜೋಸ್‌ ಬಟ್ಲರ್‌ (ಇಂಗ್ಲೆಂಡ್‌, ವಿಕೆಟ್‌ಕೀಪರ್‌), ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌), ಮುಸ್ತಾಫಿಜುರ್‌ ರಹಮಾನ್‌ (ಬಾಂಗ್ಲಾದೇಶ), ರಶೀದ್‌ ಖಾನ್‌ (ಅಫ್ಘಾನಿಸ್ಥಾನ), ಕುಲದೀಪ್‌ ಯಾದವ್‌ (ಭಾರತ), ಜಸ್‌ಪ್ರೀತ್‌ ಬುಮ್ರಾ (ಭಾರತ).

ಐಸಿಸಿ ವರ್ಷದ ಟೆಸ್ಟ್‌ ತಂಡ 
ಟಾಮ್‌ ಲಾಥಂ (ನ್ಯೂಜಿಲ್ಯಾಂಡ್‌), ದಿಮುತ್‌ ಕರುಣರತ್ನೆ (ಶ್ರೀಲಂಕಾ), ಕೇನ್‌ ವಿಲಿಯಮ್ಸನ್‌ (ನ್ಯೂಜಿಲ್ಯಾಂಡ್‌), ವಿರಾಟ್‌ ಕೊಹ್ಲಿ (ಭಾರತ, ನಾಯಕ), ಹೆನ್ರಿ ನಿಕೋಲ್ಸ್‌ (ನ್ಯೂಜಿಲ್ಯಾಂಡ್‌), ರಿಷಬ್‌ ಪಂತ್‌ (ಭಾರತ, ವಿಕೆಟ್‌ಕೀಪರ್‌), ಜಾಸನ್‌ ಹೋಲ್ಡರ್‌ (ವೆಸ್ಟ್‌ಇಂಡೀಸ್‌), ಕಾಗಿಸೊ ರಬಾಡ (ದಕ್ಷಿಣ ಆಫ್ರಿಕಾ), ನಥನ್‌ ಲಿಯೋನ್‌ (ಆಸ್ಟ್ರೇಲಿಯ), ಜಸ್‌ಪ್ರೀತ್‌ ಬುಮ್ರಾ (ಭಾರತ), ಮೊಹಮ್ಮದ್‌ ಅಬ್ಟಾಸ್‌ (ಪಾಕಿಸ್ಥಾನ).

ರಿಷಭ್‌ ವರ್ಷದ ಉದಯೋನ್ಮುಖ ಆಟಗಾರ
ಭಾರತ ಟೆಸ್ಟ್‌ ತಂಡದಲ್ಲಿ ವಿಕೆಟ್‌ ಕೀಪರ್‌ ಆಗಿರುವ ರಿಷಭ್‌ ಪಂತ್‌ಗೆ ಇನ್ನೂ 21 ವರ್ಷ. ಅವರು ಐಸಿಸಿ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಕೆಲವೇ ತಿಂಗಳ ಹಿಂದೆ ಅವರು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರೂ ಅದ್ಭುತ ಸಾಧನೆ ಮಾಡಿದ್ದಾರೆ. ವಿಕೆಟ್‌ ಕೀಪರ್‌ ಹೊಣೆಯನ್ನು ಸುಂದರವಾಗಿ ನಿಭಾಯಿಸಿದ ಜತೆಗೆ ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯದಲ್ಲಿ ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯದಲ್ಲಿ ಟೆಸ್ಟ್‌ ಶತಕ ಬಾರಿಸಿದ ಭಾರತದ ಮೊದಲ ವಿಕೆಟ್‌ ಕೀಪರ್‌ ಅವರೆನ್ನುವುದು ಗಮನಾರ್ಹ ಸಂಗತಿ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.