ದಿಂಡ ಹಣೆಗೆ ಬಡಿದ ಚೆಂಡು
Team Udayavani, Feb 12, 2019, 12:45 AM IST
ಕೋಲ್ಕತಾ: ಟಿ20 ಕ್ರಿಕೆಟ್ ಪಂದ್ಯದ ವೇಳೆ ಬಂಗಾಲದ ಪೇಸ್ ಬೌಲರ್ ಅಶೋಕ್ ದಿಂಡ ಅವರ ಹಣೆಗೆ ಚೆಂಡು ಬಡಿದ ಘಟನೆ ಸೋಮವಾರ ಸಂಭವಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಗೆ 2 ದಿನಗಳ ವಿಶ್ರಾಂತಿ ಸೂಚಿಸಲಾಗಿದೆ.
ಸೋಮವಾರ “ಈಡನ್ ಗಾರ್ಡನ್ಸ್’ನಲ್ಲಿ ನಡೆದ ಬಂಗಾಲ ಟಿ20 ಅಭ್ಯಾಸ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಬ್ಯಾಟ್ಸ್ಮನ್ ಬೀರೇಂದರ್ ವಿವೇಕ್ ಸಿಂಗ್ ಬಲವಾಗಿ ಬಾರಿಸಿದ ಚೆಂಡನ್ನು ರಿಟರ್ನ್ ಕ್ಯಾಚ್ ಪಡೆಯುವ ವೇಳೆ ಅಶೋಕ್ ದಿಂಡ ಈ ಆಘಾತಕ್ಕೆ ಸಿಲುಕಿದ್ದಾರೆ. ಆಗ ಚೆಂಡು ಅವರ ಕೈಯಿಂದ ಜಾರಿ ಹಣೆಗೆ ಹೋಗಿ ಬಡಿಯಿತು. ಇದರಿಂದ ಗಂಭೀರ ಪೆಟ್ಟೇನೂ ಸಂಭವಿಸಲಿಲ್ಲ. ಆ ಓವರ್ ಪೂರ್ತಿಗೊಳಿಸಿದ ಬಳಿಕ ಅಶೋಕ್ ದಿಂಡ ಡ್ರೆಸ್ಸಿಂಗ್ ರೂಮ್ಗೆ ವಾಪಸಾದರು.
ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕ್ಯಾನಿಂಗ್ ನಡೆಸಲಾಗಿದ್ದು, ವೈದ್ಯರು ದಿಂಡ ಅವರಿಗೆ 2 ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು