ವನಿತಾ ಟಿ20 ರ್ಯಾಂಕಿಂಗ್: ರೋಡ್ರಿಗಸ್, ಮಂಧನಾ 4 ಸ್ಥಾನ ಏರಿಕೆ
Team Udayavani, Feb 13, 2019, 12:30 AM IST
ದುಬಾೖ: ನ್ಯೂಜಿಲ್ಯಾಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ವೈಟ್ವಾಶ್ಗೆ ಒಳಗಾಗಿದ್ದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪ್ರಕಟಿಸಿದ ನೂತನ ವನಿತಾ ಟಿ20 ರ್ಯಾಂಕಿಂಗ್ನಲ್ಲಿ ಭಾರತೀಯ ವನಿತೆಯರು ಗಮನಾರ್ಹ ನಿರ್ವಹಣೆ ದಾಖಲಿಸಿದ್ದಾರೆ. ಬ್ಯಾಟ್ಸ್ವುಮನ್ ರ್ಯಾಂಕಿಂಗ್ನಲ್ಲಿ ಭಾರತದ ಜೆಮಿಮಾ ರೋಡ್ರಿಗಸ್ ಮತ್ತು ಸ್ಮತಿ ಮಂಧನಾ ಅನುಕ್ರಮವಾಗಿ 2ನೇ ಹಾಗೂ 6ನೇ ಸ್ಥಾನ ಗಳಿಸಿ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧದ 3 ಪಂದ್ಯಗಳ ಸರಣಿಯಲ್ಲಿ 132 ರನ್ ಗಳಿಸಿದ ರೋಡ್ರಿಗಸ್ 2ನೇ ಸ್ಥಾನಕ್ಕೆ ಏರಿದ್ದಾರೆ. ಕಳೆದ ವಾರ ಬಿಡುಗಡೆಯಾದ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ಕ್ಕೇರಿದ್ದ ಸ್ಮತಿ ಮಂಧನಾ ಟಿ20 ರ್ಯಾಂಕಿಂಗ್ನಲ್ಲಿ 4 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನಕ್ಕೆ ಜಿಗಿದಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿ ಎನಿಸಿಕೊಂಡಿರುವ ಮಂಧನಾ 2 ಅರ್ಧಶತಕ ಬಾರಿಸಿದ್ದರು.
ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್ ರಾಧಾ ಯಾದವ್ 18 ಸ್ಥಾನಗಳ ಜಿಗಿತ ಕಂಡು ಅಗ್ರ 10 ಬೌಲರ್ಗಳ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದಾರೆ. ದೀಪ್ತಿ ಶರ್ಮಾ 5 ಸ್ಥಾನಗಳ ಏರಿಕೆ ಕಂಡು 14ನೇ ಸ್ಥಾನಕ್ಕೆ ಬಂದಿದ್ದಾರೆ.
ನ್ಯೂಜಿಲ್ಯಾಂಡ್ ತಂಡದಲ್ಲಿ ಸೋಫಿ ಡಿವೈನ್ 11ನೇ ಸ್ಥಾನದಿಂದ 8ನೇ ಸ್ಥಾನಕ್ಕೇರಿದ್ದರೆ, ನಾಯಕಿ ಆ್ಯಮಿ ಸ್ಯಾಟರ್ವೆàಟ್ 23ರಿಂದ 17ನೇ ಸ್ಥಾನ ಗಳಿಸಿದ್ದಾರೆ. ಬೌಲರ್ಗಳಲ್ಲಿ ಲೀ ಟಹುಹು 5 ಸ್ಥಾನಗಳ ಏರಿಕೆ ಕಂಡು 11ನೇ ಸ್ಥಾನದಲ್ಲಿದ್ದಾರೆ.
ಡೊಟಿನ್ಗೆ ಅಗ್ರಸ್ಥಾನ
ವಿಂಡೀಸ್ನ ಡಿಯಾಂಡ್ರ ಡೊಟಿನ್ ಅಲ್ರೌಂಡರ್ ವಿಭಾಗದಲ್ಲಿ ಅಗ್ರಸ್ಥಾನ ಸಂಪಾದಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಡೊಟಿನ್ 3ನೇ ಸ್ಥಾನ ಸಂಪಾದಿಸಿದ್ದರೆ, ಬೌಲಿಂಗ್ ವಿಭಾಗದಲ್ಲಿ 29ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ಥಾನದ ನಾಯಕಿ ಬಿಸ್ಮಾ ಮರೂಫ್ ಬ್ಯಾಟಿಂಗ್ ವಿಭಾಗದಲ್ಲಿ 15ನೇ ಸ್ಥಾನ ಸಂಪಾದಿಸಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಸನಾ ಮಿರ್ 28ನೇ ಸ್ಥಾನ ಗಳಿಸಿದ್ದಾರೆ.
ನಂ. 4ರಲ್ಲಿ ಭಾರತ
ತಂಡಗಳ ರ್ಯಾಂಕಿಂಗ್ನಲ್ಲಿ ನ್ಯೂಜಿ ಲ್ಯಾಂಡ್ ತಂಡ ಇಂಗ್ಲೆಂಡನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದೆ. ಆಸ್ಟ್ರೇಲಿಯ ಅಗ್ರಸ್ಥಾನ ವನ್ನು ಉಳಿಸಿಕೊಂಡಿದೆ. ಭಾರತ, ವೆಸ್ಟ್ ಇಂಡೀಸ್ ತಂಡ 4 ಹಾಗೂ 5ನೇ ಸ್ಥಾನದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ