ಅನುಜ್ ದೇಢಾಗೆ ಆಜೀವ ನಿಷೇಧ
Team Udayavani, Feb 14, 2019, 12:50 AM IST
ಹೊಸದಿಲ್ಲಿ: ಮಾಜಿ ಕ್ರಿಕೆಟಿಗ ಅಮಿತ್ ಭಂಡಾರಿ ಮೇಲೆ ಹಲ್ಲೆ ಮಾಡಿದ ಕ್ರಿಕೆಟಿಗ ಅನುಜ್ ದೇಢಾ ಅವರಿಗೆ ದಿಲ್ಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಶ್ ಆಜೀವ ನಿಷೇಧ ಹೇರಿದೆ.
ಎರಡು ದಿನಗಳ ಹಿಂದೆ ಅನುಜ್ ದೇಢಾ, ಆತನ ಸಹೋದರ ನರೇಶ್ ಸೇರಿದಂತೆ ಗೂಂಡಾಗಳ ಪಡೆಯೊಂದು ಭಂಡಾರಿ ಮೇಳೆ ಹಲ್ಲೆ ನಡೆಸಿತ್ತು. ಇವರಿಬ್ಬರನ್ನು ಈಗಾಗಲೇ ಬಂಧಿಸಿರುವ ದಿಲ್ಲಿ ಪೊಲೀಸರು ಇನ್ನುಳಿದವರಿಗಾಗಿ ಹುಡುಕಾಟ ನಡೆಸುತ್ತಿದೆ.
“ಅನುಜ್ ದೇಢಾ ಅವರಿಗೆ ಆಜೀವ ನಿಷೇಧ ಹೇರಲಾಗಿದೆ. ದಿಲ್ಲಿ ತಂಡದ ಆಯ್ಕೆಗಾರರು, ಡಿಡಿಸಿಎನ ಅಪೆಕ್ಸ್ ಮಂಡಳಿಯ ಸದಸ್ಯ ಗೌತಮ್ ಗಂಭೀರ್ ಅವರೊಂದಿಗೆ ಸಭೆಯಲ್ಲಿ ಚರ್ಚೆಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಡಿಡಿಸಿಎ ಅಧ್ಯಕ್ಷ ರಜತ್ ಶರ್ಮ ಹೇಳಿದ್ದಾರೆ.