ಗೆಲುವಿನ ಯೋಜನೆ ರೂಪಿಸಿದ ಶೇಷ ಭಾರತ


Team Udayavani, Feb 16, 2019, 12:30 AM IST

4.jpg

ನಾಗ್ಪುರ: ರಣಜಿ ಚಾಂಪಿಯನ್‌ ವಿದರ್ಭ ಹಾಗೂ ಶೇಷ ಭಾರತ ತಂಡಗಳ ನಡುವಿನ ಇರಾನಿ ಕಪ್‌ ಪಂದ್ಯ ರೋಚಕ ಘಟ್ಟದತ್ತ ಸಾಗಿದೆ. ಈಗಾಗಲೇ ಮೊದಲ ಇನ್ನಿಂಗ್ಸ್‌ ಹಿನ್ನಡೆಗೆ ಸಿಲುಕಿದ ಶೇಷಭಾರತ ಸ್ಪಷ್ಟ ಗೆಲುವಿನ ಯೋಜನೆಗೆ ಮುಂದಾಗಿದ್ದು, ವಿದರ್ಭ ವಿಜಯಕ್ಕೆ 280 ರನ್ನುಗಳ ಗುರಿ ನೀಡಿದೆ. ವಿದರ್ಭ ಒಂದು ವಿಕೆಟಿಗೆ 37 ರನ್‌ ಮಾಡಿ 4ನೇ ದಿನದಾಟ ಮುಗಿಸಿದೆ. ಶನಿವಾರ ಪಂದ್ಯದ ಅಂತಿಮ ದಿನವಾಗಿದ್ದು, ವಿದರ್ಭ ಉಳಿದ 9 ವಿಕೆಟ್‌ಗಳಿಂದ 243 ರನ್‌ ಗಳಿಸಬೇಕಿದೆ. ಶೇಷಭಾರತ ಈ 9 ವಿಕೆಟ್‌ಗಳನ್ನು ಬೇಗನೇ ಉದುರಿಸಿ ಗೆಲುವು ಸಾಧಿಸೀತೇ ಎಂಬ ಕುತೂಹಲ ಮೇರೆ ಮೀರಿದೆ.

ವಿಹಾರಿ ಬ್ಯಾಟಿಂಗ್‌ ವೈಭವ
ಟೆಸ್ಟ್‌ ಬ್ಯಾಟ್ಸ್‌ಮನ್‌ ಹನುಮ ವಿಹಾರಿ ಅವರ ಅಜೇಯ 180 ರನ್‌ ಶುಕ್ರವಾರದ ಆಟದ ಆಕರ್ಷಣೆಯಾಗಿತ್ತು. ಭರ್ತಿ 300 ಎಸೆತ ಎದುರಿಸಿದ ಅವರು 19 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ ಈ ಬ್ಯಾಟಿಂಗ್‌ ಸಾಹಸಗೈದರು. ನಾಯಕ ಅಜಿಂಕ್ಯ ರಹಾನೆ 87 ರನ್‌ (232 ಎಸೆತ, 6 ಬೌಂಡರಿ, 1 ಸಿಕ್ಸರ್‌) ಮತ್ತು ಶ್ರೇಯಸ್‌ ಅಯ್ಯರ್‌ ಅಜೇಯ 61 ರನ್‌ ಹೊಡೆದರು (52 ಎಸೆತ, 5 ಬೌಂಡರಿ, 4 ಸಿಕ್ಸರ್‌). ವಿಹಾರಿ-ರಹಾನೆ 3ನೇ ವಿಕೆಟಿಗೆ 229 ರನ್‌ ರಾಶಿ ಹಾಕಿದರು.

ಹನುಮ ವಿಹಾರಿ ಮೊದಲ ಇನ್ನಿಂಗ್ಸ್‌ನಲ್ಲಿ 114 ರನ್‌ ಬಾರಿಸಿದ್ದರು. ಇದರೊಂದಿಗೆ ಅವರು ಇರಾನಿ ಕಪ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಕೇವಲ 2ನೇ ಸಾಧಕನಾಗಿ ಮೂಡಿಬಂದರು. ಶಿಖರ್‌ ಧವನ್‌ ಮೊದಲಿಗ. ಅವರು ಜೈಪುರದಲ್ಲಿ ನಡೆದ 2011ರ ಇರಾನಿ ಕಪ್‌ ಪಂದ್ಯದಲ್ಲಿ ಶೇಷಭಾರತದ ಪರ ರಾಜಸ್ಥಾನ ವಿರುದ್ಧ 177 ಮತ್ತು 155 ರನ್‌ ಬಾರಿಸಿದ್ದರು.

ಹನುಮ ವಿಹಾರಿ ಇನ್ನೂ ಒಂದು ಸಾಹಸದಿಂದ ಸುದ್ದಿಯಾಗಿದ್ದಾರೆ. ಅವರು ಇರಾನಿ ಕಪ್‌ನ ಸತತ 3 ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್‌. ಕಳೆದ ವರ್ಷ ವಿದರ್ಭ ವಿರುದ್ಧವೇ ದ್ವಿತೀಯ ಇನ್ನಿಂಗ್ಸ್‌ನಲ್ಲಿ 183 ರನ್‌ ಬಾರಿಸಿದ್ದರು.

ಬೌಲರ್‌ಗಳಿಗೆ ನೆರವಾದೀತೇ ಟ್ರ್ಯಾಕ್‌?
ವಿಹಾರಿ ಹಾಗೂ ಶೇಷಭಾರತದ ಬ್ಯಾಟಿಂಗ್‌ ಪರಾಕ್ರಮ ಗಮನಿಸಿದಾಗ ನಾಗ್ಪುರ ಟ್ರ್ಯಾಕ್‌ ಬೌಲರ್‌ಗಳಿಗೆ ವಿಶೇಷ ನೆರವು ನೀಡದಿರುವುದು ಗೋಚರಕ್ಕೆ ಬರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಆಡಿದರೆ ವಿದರ್ಭ ಗೆಲುವನ್ನು ಒಲಿಸಿಕೊಳ್ಳಲೂಬಹುದು. ಆದರೆ ಈಗಾಗಲೇ ಇನ್ನಿಂಗ್ಸ್‌ ಮುನ್ನಡೆ ಗಳಿಸಿರುವ ವಿದರ್ಭಕ್ಕೆ ಜಯ ಅನಿವಾರ್ಯವೇನಲ್ಲ. ಪಂದ್ಯವನ್ನು ಡ್ರಾ ಮಾಡಿಕೊಂಡರೂ ಅದು ಇರಾನಿ ಕಪ್‌ ಅನ್ನು ತನ್ನಲ್ಲೇ ಉಳಿಸಿಕೊಳ್ಳಲಿದೆ.

ಆದರೆ ಶೇಷಭಾರತಕ್ಕೆ ಗೆದ್ದರಷ್ಟೇ ಕಪ್‌ ಒಲಿಯಲಿದೆ. ಈ ಕಾರಣಕ್ಕಾಗಿಯೇ ಅದು ದಿಟ್ಟ ಡಿಕ್ಲರೇಷನ್‌ ಮಾಡಿದ್ದು, ಗ್ಯಾಂಬ್ಲಿಂಗ್‌ಗೆ ಮುಂದಾಗಿದೆ. ಇನ್ನಿಂಗ್ಸ್‌ ಹಿನ್ನಡೆ ಅನುಭವಿಸಿ ರುವುದರಿಂದ ಗೆದ್ದರೆ ಬೋನಸ್‌ ಎಂಬುದು ರಹಾನೆ ಬಳಗದ ಲೆಕ್ಕಾಚಾರ. ವಿದರ್ಭ ನಾಯಕ ಫೈಜ್‌ ಫ‌ಜಲ್‌ (0) ಅವರನ್ನು ರಜಪೂತ್‌ 3ನೇ ಎಸೆತದಲ್ಲೇ ಕೆಡವಿದ್ದಾರೆ. ಆರ್‌. ಸಂಜಯ್‌ 17 ಮತ್ತು ಅಥರ್ವ ತಾಯೆ 16 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಸಂಕ್ಷಿಪ್ತ ಸ್ಕೋರ್‌ 
ಶೇಷಭಾರತ-330 ಮತ್ತು 3 ವಿಕೆಟಿಗೆ 374 ಡಿಕ್ಲೇರ್‌ (ವಿಹಾರಿ ಔಟಾಗದೆ 180, ರಹಾನೆ 87, ಅಯ್ಯರ್‌ ಔಟಾಗದೆ 61, ಸರ್ವಟೆ 141ಕ್ಕೆ 2). ವಿದರ್ಭ-425 ಮತ್ತು ಒಂದು ವಿಕೆಟಿಗೆ 37.

ಕಪ್ಪುಪಟ್ಟಿ  ಧರಿಸಿ ಆಡಿದ ಕ್ರಿಕೆಟಿಗರು
ಗುರುವಾರ ಜಮ್ಮು-ಕಾಶ್ಮೀರದ ಅವಂತಿ ಪೋರಾದಲ್ಲಿ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇರಾನಿ ಟ್ರೋಫಿ ಪಂದ್ಯದ ಶುಕ್ರವಾರದ ಆಟದ ವೇಳೆ ಎರಡೂ ತಂಡಗಳ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಲಿಳಿದರು. ಅಂಪಾಯರ್‌ಗಳೂ ಕಪ್ಪುಪಟ್ಟಿ ಧರಿಸಿದ್ದರು. ಉಗ್ರರ ಈ ದುಷ್ಕೃತ್ಯವನ್ನು ಕ್ರೀಡಾಪಟುಗಳಾದ ವಿರಾಟ್‌ ಕೊಹ್ಲಿ, ವೀರೇಂದ್ರ ಸೆಹವಾಗ್‌, ಸಾನಿಯಾ ಮಿರ್ಜಾ, ವಿಜೇಂದರ್‌ ಸಿಂಗ್‌ ಮೊದಲಾದವರು ಖಂಡಿಸಿದ್ದಾರೆ.

ಟಾಪ್ ನ್ಯೂಸ್

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ

ಪ್ರಧಾನಮಂತ್ರಿ ಸ್ಥಾನಕ್ಕೆ “ಇಂಡಿಯ’ ರಾಹುಲ್‌ ಗಾಂಧಿಯನ್ನು ಪರಿಗಣಿಸಿಲ್ಲ: ಪಿಣರಾಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.