ಇರಾನಿ ಕಪ್‌: ವಿದರ್ಭ ಚಾಂಪಿಯನ್‌


Team Udayavani, Feb 17, 2019, 12:30 AM IST

v-23.jpg

ನಾಗ್ಪುರ: ರಣಜಿ ಟ್ರೋಫಿಯನ್ನು ತನ್ನಲ್ಲಿ ಉಳಿಸಿಕೊಂಡಿರುವ ವಿದರ್ಭ ತಂಡ “ಇರಾನಿ ಕಪ್‌’ ಕೂಡ ಜಯಿಸಿ ಸಂಭ್ರಮಿಸಿದೆ. 
ಶೇಷ ಭಾರತ ಜಯದ ಕನಸನ್ನು ನುಚ್ಚು ನೂರು ಮಾಡಿದ ವಿದರ್ಭ ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ವಿದರ್ಭ ತಂಡ ಎರಡು ಬಾರಿ ಇರಾನಿ ಕಪ್‌ ಗೆದ್ದ ಮೂರನೇ ತಂಡವಾಗಿದೆ. ಈ ಮೊದಲು ಮುಂಬಯಿ ಮತ್ತು ಕರ್ನಾಟಕ ಎರಡು ಬಾರಿ ಪ್ರಶಸ್ತಿ ಜಯಿಸಿತ್ತು. ಶೇಷ ಭಾರತ ಸತತ ಎರಡನೇ ಸಲ ಟ್ರೋಫಿ ಕಳೆದುಕೊಂಡು ನಿರಾಸೆ ಅನುಭವಿಸಿತು. ಗೆಲ್ಲಲು 280 ರನ್‌ ಗುರಿ ಹೊಂದಿದ್ದ ವಿದರ್ಭ ಕೊನೆಯ ದಿನ 5 ವಿಕೆಟಿಗೆ 269 ರನ್‌ ಮಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 

ವಿದರ್ಭ ಸಂಘಟಿತ ಬ್ಯಾಟಿಂಗ್‌
4ನೇ ದಿನದ ಅಂತ್ಯಕ್ಕೆ ವಿದರ್ಭ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟಿಗೆ 37 ರನ್‌ ಗಳಿಸಿತ್ತು. ಅಂತಿಮ ದಿನವಾದ ಶನಿವಾರ ಬ್ಯಾಟಿಂಗ್‌ ಮುಂದುವರಿಸಿದ ರಘುನಾಥ್‌ ಸಂಜಯ್‌ ಹಾಗೂ ಅಥರ್ವ ಟೈಡೆ ತಂಡವನ್ನು ಆಧರಿಸಿದರು. ಇವರಿಬ್ಬರು ಸೇರಿಕೊಂಡು 2ನೇ ವಿಕೆಟಿಗೆ 116 ರನ್‌ ಜತೆಯಾಟ ನಿರ್ವಹಿಸಿದರು. 131 ಎಸೆತ ಎದುರಿಸಿದ ರಘುನಾಥ್‌ ಸಂಜಯ್‌ 42 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿತ್ತು. ಅಥರ್ವ ಟೈಡೆ 185 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನಿಂದ 72 ದಾಖಲಿಸಿದರು. ಇವರಿಬ್ಬರು ಶೇಷ ಭಾರತ ಬೌಲರ್‌ಗಳನ್ನು ಅಳೆದು ತೂಗಿ ಚೆಂಡಾಡಿದರು. ಹೀಗಾಗಿ ವಿದರ್ಭ ಚೇತರಿಸಿಕೊಳ್ಳುತ್ತ ಸಾಗಿತು. ತಂಡದ ಮೊತ್ತ 116 ರನ್‌ ಆಗಿದ್ದಾಗ  ಅರ್ಧಶತಕದ ಹೊಸ್ತಿಲಲ್ಲಿದ್ದ ರಘುನಾಥ್‌ ಸಂಜಯ್‌ ಔಟಾದರು. 146 ರನ್‌ ಗಳಿಸಿದ್ದಾಗ ಅಥರ್ವ ಟೈಡೆ ಕೂಡ ಪೆವಿಲಿಯನ್‌ ಸೇರಿಕೊಂಡರು. ಈ ಎರಡೂ ವಿಕೆಟ್‌ ಅನ್ನು ರಾಹುಲ್‌ ಚಹರ್‌ ಉರುಳಿಸಿದರು.

ಎರಡು ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಶೇಷ ಭಾರತದ ಗೆಲುವಿನ ಕನಸು ಚಿಗುರೊಡೆಯಿತು. 3ನೇ ವಿಕೆಟಿಗೆ ಬಂದ ಕನ್ನಡಿಗ ಗಣೇಶ್‌ ಸತೀಶ್‌ (87 ರನ್‌) ಹಾಗೂ ಮೋಹಿತ್‌ ಕಾಳೆ (37 ರನ್‌) ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಬ್ಯಾಟಿಂಗ್‌ ಆಸರೆಯಾದರು. ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ 87 ರನ್‌ ಕಲೆ ಹಾಕಿದರು. ಮೋಹಿತ್‌ ಕಾಳೆ ಧರ್ಮೇಂದ್ರ ಸಿನ್ಹ ಜಡೇಜ ಎಸೆತದಲ್ಲಿ ಔಟಾದರು. ಅರ್ಧಶತಕ ಗಳಿಸಿದ್ದ ಗಣೇಶ್‌ ಸತೀಶ್‌ ಕೂಡ ಔಟಾದರು. ಈ ಹಂತದಲ್ಲಿ ವಿದರ್ಭ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಆದರೆ ಕೊನೆ ನಿಮಿಷಗಳಲ್ಲಿ ಗೆಲುವಿಗಾಗಿ ಪ್ರಯತ್ನ ಪಡುವ ಎಲ್ಲ ಅವಕಾಶಗಳಿದ್ದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದುಕೊಂಡಿದ್ದರಿಂದ ವಿದರ್ಭ ಟ್ರೋಫಿ ಉಳಿಸಿಕೊಳ್ಳುವುದಕ್ಕಾಗಿ ಡ್ರಾ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಕೇವಲ 11 ರನ್‌ ಅಂತರದಿಂದ ವಿದರ್ಭ ಗೆಲುವನ್ನು ಕಳೆದುಕೊಂಡಿತು. ಅಕ್ಷಯ್‌ ವಡ್ಕರ್‌ 10 ರನ್‌ ಗಳಿಸಿ ಅಜೇಯರಾಗಿ ಉಳಿದರು. ಶೇಷ ಭಾರತ ಪರ ರಾಹುಲ್‌ ಚಹರ್‌ (116ಕ್ಕೆ2) ವಿಕೆಟ್‌ ಕಬಳಿಸಿ ಶ್ರೇಷ್ಠ ಬೌಲರ್‌ ಎನಿಸಿಕೊಂಡರು. 

ಹುತಾತ್ಮರ ಕುಟುಂಬಕ್ಕೆ  ಪ್ರಶಸ್ತಿ ಹಣ ನೀಡಿದ ವಿದರ್ಭ
ನಾಗ್ಪುರ: ಇರಾನಿ ಕಪ್‌ ಪ್ರಶಸ್ತಿ ಸಮಾರಂಭದಲ್ಲಿ 2ನೇ ಬಾರಿಗೆ ಪ್ರಶಸ್ತಿ ಜಯಿಸಿದ ರಣಜಿ ಚಾಂಪಿಯನ್‌ ವಿದರ್ಭ ತಂಡ ಪ್ರಶಸ್ತಿಯ ಒಟ್ಟು ಮೊತ್ತವನ್ನು ಮೃತ ಯೋಧ ಕುಟುಂಬಕ್ಕೆ ನೀಡುವುದಾಗಿ ಹೇಳಿ ದೇಶಪ್ರೇಮ ಮೆರೆದಿದೆ. ವಿದರ್ಭಕ್ಕೆ ಒಟ್ಟು 10 ಲಕ್ಷ ರೂ. ಪ್ರಶಸ್ತಿ ಮೊತ್ತ ದೊರೆಯಲಿದೆ. ಅವಂತಿಪೋರಾದಲ್ಲಿ ಉಗ್ರರ ಕೃತ್ಯಕ್ಕೆ 42 ಸಿಆರ್‌ಸಿಎಫ್ ಯೋಧರು ಬಲಿಯಾಗಿದ್ದು, ಇಡಿ ದೇಶವೇ ಮೌನಕ್ಕೆ ಶರಣಾಗಿದೆ. ಫೆ. 15ರ ದಿನದಾಟದ ವೇಳೆ ಕೈಗೆ ಕಪ್ಪು ಪಟ್ಟಿ ಕಟ್ಟಿ ಆಡಿದ ವಿದರ್ಭ, ಶೇಷ ಭಾರತ ತಂಡಗಳೂ ಮೃತ ಯೋಧರಿಗೆ ಸಂತಾಪ ಸೂಚಿಸಿದ್ದವು. “ಪ್ರಶಸ್ತಿ ಮೊತ್ತವನ್ನು ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವುದಾಗಿ ತೀರ್ಮಾನಿಸಿದ್ದೇವೆ. ತಮ್ಮ ಕಡೆಯಿಂದ ಒಂದು ಚಿಕ್ಕ ಸಹಾಯ’ ಎಂದು ವಿದರ್ಭ ತಂಡದ ನಾಯಕ ಫೈಜ್‌ ಫ‌ಜಲ್‌ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌- ಶೇಷ ಭಾರತ 330 ಮತ್ತು 3 ವಿಕೆಟಿಗೆ 374 ಡಿಕ್ಲೇರ್‌ (ಹನುಮ ವಿಹಾರಿ ಔಟಾಗದೆ 180, ಶ್ರೇಯಸ್‌ ಅಯ್ಯರ್‌ ಔಟಾಗದೆ 61, ಸರ್ವಟೆ 141ಕ್ಕೆ 2), ವಿದರ್ಭ- 425 ಮತ್ತು 5 ವಿಕೆಟಿಗೆ 269 (ಗಣೇಶ್‌ ಸತೀಶ್‌ 87, ಅಥರ್ವ ಟೈಡೆ 72, ಸಂಜಯ್‌ ರಘುನಾಥ್‌ 42, ರಾಹುಲ್‌ ಚಹರ್‌ 116ಕ್ಕೆ 2).  
ಪಂದ್ಯ ಶ್ರೇಷ್ಠ: ಅಕ್ಷಯ್‌ ಕರ್ಣೇವಾರ್‌

ಟಾಪ್ ನ್ಯೂಸ್

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.