ಬಂಗಾಲವನ್ನು ಬಗ್ಗುಬಡಿದ ಕರ್ನಾಟಕ
Team Udayavani, Feb 23, 2019, 12:30 AM IST
ಕಟಕ್: ಸಯ್ಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ದಾಖಲಿಸಿದೆ. ಮೊದಲ ಪಂದ್ಯದಲ್ಲಿ ಅಸ್ಸಾಂಗೆ ಸೋಲುಣಿಸಿದ್ದ ಮನೀಷ್ ಪಾಂಡೆ ಪಡೆ, ಶುಕ್ರವಾರದ ದ್ವಿತೀಯ ಪಂದ್ಯದಲ್ಲಿ ಬಂಗಾಲವನ್ನು 9 ವಿಕೆಟ್ಗಳಿಂದ ಭರ್ಜರಿಯಾಗಿ ಮಣಿಸಿತು.
ಕಟಕ್ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬಂಗಾಲ 19.4 ಓವರ್ಗಳಲ್ಲಿ 131 ರನ್ನುಗಳಿಗೆ ಕುಸಿದರೆ, ಕರ್ನಾಟಕ 15.5 ಓವರ್ಗಳಲ್ಲಿ ಒಂದೇ ವಿಕೆಟಿಗೆ 134 ರನ್ ಪೇರಿಸಿ ಗೆದ್ದು ಬಂದಿತು. ರವಿವಾರ ನಡೆಯುವ “ಡಿ’ ವಿಭಾಗದ ತನ್ನ 3ನೇ ಪಂದ್ಯದಲ್ಲಿ ಕರ್ನಾಟಕ ತಂಡ ದುರ್ಬಲ ಅರುಣಾಚಲ ಪ್ರದೇಶ ವಿರುದ್ಧ ಆಡಲಿದೆ.
ಕದಂ-ಶರತ್ ಶತಕದ ಜತೆಯಾಟ
ಅಭಿಮನ್ಯು ಮಿಥುನ್ (22ಕ್ಕೆ 3), ವಿನಯ್ ಕುಮಾರ್ (18ಕ್ಕೆ 2) ಮತ್ತು ಮನೋಜ್ ಭಾಂಡಗೆ (18ಕ್ಕೆ 2) ಬಂಗಾಲವನ್ನು ಸಾಮಾನ್ಯ ಮೊತ್ತಕ್ಕೆ ಹಿಡಿದು ನಿಲ್ಲಿಸಿದ ಬಳಿಕ ಆರಂಭಿಕರಾದ ರೋಹನ್ ಕದಂ ಮತ್ತು ಬಿ.ಆರ್. ಶರತ್ ಜೋಡಿಯ ಬ್ಯಾಟಿಂಗ್ ವೈಭವ ಮೊದಲ್ಗೊಂಡಿತು. ಬಂಗಾಲ ಬೌಲರ್ಗಳ ಮೇಲೇರಿ ಹೋದ ಇವರಿಬ್ಬರೂ ಸ್ಫೋಟಕ ಆಟದ ಮೂಲಕ ರಂಜಿಸತೊಡಗಿದರು. ಈ ಬ್ಯಾಟಿಂಗ್ ಆರ್ಭಟ ಕಂಡಾಗ ಇವರಿಬ್ಬರೇ ಸೇರಿಕೊಂಡು ಕರ್ನಾಟಕವನ್ನು ಗೆಲ್ಲಿಸುವ ಸಾಧ್ಯತೆಯೂ ಗೋಚರಿಸಿತ್ತು.
ರೋಹನ್-ಶರತ್ 14.3 ಓವರ್ಗಳ ಪ್ರಚಂಡ ಜತೆಯಾಟದಲ್ಲಿ 117 ರನ್ ಪೇರಿಸಿ ದರು. ಆಗ 37 ಎಸೆತಗಳಿಂದ 50 ರನ್ (9 ಬೌಂಡರಿ) ಹೊಡೆದ ಶರತ್ ಔಟಾದರು. ಈ ಏಕೈಕ ಯಶಸ್ಸು ಪ್ರದಿಪ್ತ ಪ್ರಾಮಾಣಿಕ್ ಪಾಲಾ ಯಿತು. ರೋಹನ್ ಕದಂ ಔಟಾಗದೆ 81 ರನ್ ಬಾರಿಸಿದರು. 55 ಎಸೆತ ಎದುರಿಸಿದ ಕದಂ 10 ಬೌಂಡರಿ ಜತೆಗೆ 2 ಸಿಕ್ಸರ್ ಬಾರಿಸಿ ಮೆರೆದರು.
ಬಂಗಾಲ ಪರ ಆರಂಭಕಾರ ಶ್ರೀವತ್ಸ ಗೋಸ್ವಾಮಿ 40, ನಾಯಕ ಮನೋಜ್ ತಿವಾರಿ 36 ರನ್ ಹೊಡೆದರು.
ಮೊದಲ ಪಂದ್ಯದಲ್ಲಿ ದುರ್ಬಲ ಮಿಜೋರಂ ಮೇಲೆ ಸವಾರಿ ಮಾಡಿದ ಬಂಗಾಲ 159 ರನ್ನುಗಳ ಬೃಹತ್ ಗೆಲುವು ದಾಖಲಿಸಿತ್ತು.
ಸಂಕ್ಷಿಪ್ತ ಸ್ಕೋರ್: ಬಂಗಾಲ-19.4 ಓವರ್ಗಳಲ್ಲಿ 131 (ಗೋಸ್ವಾಮಿ 40, ತಿವಾರಿ 36, ಮಿಥುನ್ 22ಕ್ಕೆ 3, ವಿನಯ್ 18ಕ್ಕೆ 2, ಭಾಂಡಗೆ 18ಕ್ಕೆ 2). ಕರ್ನಾಟಕ-15.5 ಓವರ್ಗಳಲ್ಲಿ ಒಂದು ವಿಕೆಟಿಗೆ 134 (ಕದಂ ಔಟಾಗದೆ 81. ಶರತ್ 50).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ