ಧೋನಿ, ರೋಹಿತ್‌ ಐಪಿಎಲ್‌ನ ಲಕ್ಕೀ ನಾಯಕರು


Team Udayavani, Mar 20, 2019, 12:30 AM IST

e-20.jpg

12ನೇ ಐಪಿಎಲ್‌ ಪಂದ್ಯಾವಳಿಯ ಆರಂಭಕ್ಕೆ ಇನ್ನುಳಿದಿರುವುದು ಮೂರೇ ದಿನ. 8 ತಂಡಗಳ ನಡುವಿನ ಈ ಚುಟುಕು ಕ್ರಿಕೆಟ್‌ ಕದನದ ಕಾವು ಬೇಸಗೆಯ ಬಿಸಿಯನ್ನೂ ಮೀರಿಸಿದೆ. ಬೆನ್ನಲ್ಲೇ ಪ್ರತಿಷ್ಠಿತ ವಿಶ್ವಕಪ್‌ ಪಂದ್ಯಾವಳಿ ಆರಂಭವಾಗಲಿರುವುದರಿಂದ ಈ ಬಾರಿಯ ಐಪಿಎಲ್‌ಗೆ ಹೆಚ್ಚಿನ ಮಹತ್ವವಿದೆ. ಎಲ್ಲರೂ ಇದನ್ನು ವಿಶ್ವಕಪ್‌ ಅಭ್ಯಾಸದ ದೃಷ್ಟಿಯಿಂದ ನೋಡುತ್ತಿರುವುದೇ ಇದಕ್ಕೆ ಕಾರಣ. ಈ ಸಂದರ್ಭದಲ್ಲಿ 8 ನಾಯಕರ ಕಿರು ಪರಿಚಯವೊಂದನ್ನು ನೀಡಲಾಗಿದೆ. ಇವರಲ್ಲಿ ಈ ವರೆಗೆ ಐಪಿಎಲ್‌ ಕಪ್‌ ಎತ್ತಿದವರು ಮಹೇಂದ್ರ ಸಿಂಗ್‌ ಧೋನಿ ಮತ್ತು ರೋಹಿತ್‌ ಶರ್ಮ ಮಾತ್ರ ಎಂಬುದು ವಿಶೇಷ. ಇಬ್ಬರೂ ತಲಾ 3 ಸಲ ತಮ್ಮ ತಂಡಕ್ಕೆ ಕಿರೀಟ ತೊಡಿಸಿದ್ದಾರೆ. ಉಳಿದವರಿಗೆ ಈ ಸಲ ಅದೃಷ್ಟ ಕೈಹಿಡಿದೀತೇ? ಹೀಗೊಂದು ಕುತೂಹಲ!

ವಿರಾಟ್‌ ಕೊಹ್ಲಿ ಆರ್‌ಬಿ  ಬೆಂಗಳೂರು
ವಿಶ್ವ ಮಟ್ಟದಲ್ಲಿ ನಾಯಕನಾಗಿ ಕೊಹ್ಲಿ ಎಷ್ಟೇ ಸಾಧನೆ ಮಾಡಿರಲಿ, ಐಪಿಎಲ್‌ ಮಟ್ಟಿಗೆ ನತದೃಷ್ಟ ಕಪ್ತಾನನೇ ಆಗಿದ್ದಾರೆ. 2016ರಲ್ಲಿ ಆರ್‌ಸಿಬಿಯನ್ನು ಫೈನಲಿಗೆ ಕೊಂಡೊಯ್ದರೂ ಅಲ್ಲಿ ಸನ್‌ರೈಸರ್ ಹೈದರಾಬಾದ್‌ ವಿರುದ್ಧ ಸಣ್ಣ ಅಂತರದಲ್ಲಿ ಸೋಲಬೇಕಾಯಿತು. ಈ ಬಾರಿ ಆರ್‌ಸಿಬಿ ಹೊಸ ರೂಪ ಪಡೆದಿದ್ದು, “ಕಪ್‌ ನಮ್ದೇ’ ಆದೀತೇ ಎಂಬುದು ಅಭಿಮಾನಿಗಳ ಪ್ರಶ್ನೆ.

ಮಹೇಂದ್ರ ಸಿಂಗ್‌ ಧೋನಿ ಚೆನ್ನೈ ಸೂಪರ್‌ ಕಿಂಗ್ಸ್‌
ಚೆನ್ನೈ ಫ್ರಾಂಚೈಸಿಯ 2 ವರ್ಷಗಳ ನಿಷೇಧ ಮುಗಿದ ಬೆನ್ನಲ್ಲೇ ಮರಳಿ ನಾಯಕತ್ವ ವಹಿಸಿದ ಧೋನಿ ಸಿ.ಎಸ್‌.ಕೆ.ಯನ್ನು 3ನೇ ಸಲ ಚಾಂಪಿಯನ್‌ ಪಟ್ಟಕ್ಕೇರಿಸಿಯೇ ಬಿಟ್ಟರು. 2010 ಮತ್ತು 2011ರಲ್ಲಿ ಚೆನ್ನೈಗೆ ಟ್ರೋಫಿ ತಂದಿತ್ತ ಹೆಗ್ಗಳಿಕೆಯೂ ಧೋನಿ ಪಾಲಿಗಿದೆ. ಈ ಬಾರಿ ವಿಶ್ವಕಪ್‌ ಅಭ್ಯಾಸಕ್ಕಾಗಿ ಧೋನಿಗೆ ಐಪಿಎಲ್‌ ಹೆಚ್ಚು ಮಹತ್ವದ್ದಾಗಿದೆ. ಚೆನ್ನೈ 4ನೇ ಸಲ ಗೆದ್ದರೆ ಅದೊಂದು ದಾಖಲೆಯಾಗಲಿದೆ.

ರೋಹಿತ್‌ ಶರ್ಮ ಮುಂಬೈ ಇಂಡಿಯನ್ಸ್‌
ಧೋನಿಯಂತೆ 3 ಸಲ ಐಪಿಎಲ್‌ ವಿಜೇತ ತಂಡದ ನಾಯಕನೆಂಬುದು ಮುಂಬೈ ಇಂಡಿಯನ್ಸ್‌ನ ರೋಹಿತ್‌ ಶರ್ಮ ಪಾಲಿನ ಹೆಗ್ಗಳಿಕೆ. ಅವರು ಮುಂಬೈ ತಂಡಕ್ಕೆ ವರ್ಷ ಬಿಟ್ಟು ವರ್ಷ (2013, 2015, 2017) ಕಿರೀಟ ತೊಡಿಸುತ್ತ ಬಂದಿದ್ದಾರೆ. ಈ ಬಾರಿ ಇದೇ ಗೆಲುವಿನ ಸರಪಳಿ ಮುಂದುವರಿದರೆ ಮುಂಬೈ ಇಂಡಿಯನ್ಸ್‌ ಜತೆಗೆ ರೋಹಿತ್‌ ಶರ್ಮ ಕೂಡ ದಾಖಲೆ ಸ್ಥಾಪಿಸಲಿದ್ದಾರೆ. 

ಆರ್‌. ಅಶ್ವಿ‌ನ್‌ ಕಿಂಗ್ಸ್‌ ಇಲೆವೆನ್‌ ಪಂಜಾಬ್‌
ಚೆನ್ನೈ ತಂಡದ ಮಾಜಿ ಆಟಗಾರನಿಗೆ ತವರಿನ ತಂಡದ ನಾಯಕನಾಗುವ ಯೋಗ ಇರಲಿಲ್ಲ. ಕಳೆದ ವರ್ಷ ಪಂಜಾಬ್‌ ಪಾಲಾದೊಡನೆಯೇ ಸಾರಥ್ಯ ಒಲಿದು ಬಂತು. ತಂಡ ಅಮೋಘ ಆರಂಭವನ್ನೂ ಪಡೆಯಿತು. ಆದರೆ ನಡು ಹಾದಿಯಲ್ಲಿ ಮುಳುಗಿತು. 2014ರ ಫೈನಲಿಸ್ಟ್‌ ತಂಡ ವನ್ನು ಅಶ್ವಿ‌ನ್‌ ಮೊದಲ ಸಲ ಚಾಂಪಿಯನ್‌ ಪೀಠದಲ್ಲಿ ಕೂರಿಸಬಲ್ಲರೇ?

 ಶ್ರೇಯಸ್‌ ಅಯ್ಯರ್‌  ಡೆಲ್ಲಿ ಕ್ಯಾಪಿಟಲ್ಸ್‌
ಡೆಲ್ಲಿ ತಂಡದ ಹೆಸರು ಬದಲಾಗಿದೆ. ಅದೃಷ್ಟ ಬದಲಾದೀತೇ ಎಂಬುದು ಸದ್ಯದ ಪ್ರಶ್ನೆ. ಶ್ರೇಯಸ್‌ ಅಯ್ಯರ್‌ ಮುಂಬಯಿಯ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌. ಗಂಭೀರ್‌ ಕಳೆದ ವರ್ಷ ಅರ್ಧದಲ್ಲೇ ನಾಯಕತ್ವದಿಂದ ದೂರ ಸರಿದಾಗ ಡೆಲ್ಲಿ ಡೇರ್‌ಡೆವಿಲ್ಸ್‌ ಸಾರಥ್ಯಕ್ಕೆ ಗೋಚರಿಸಿದವರೇ ಈ ಅಯ್ಯರ್‌. ಹೊಸ “ಡೆಲ್ಲಿ’ಯನ್ನು ಎಷ್ಟು ದೂರ ಕೊಂಡೊಯ್ಯಬಲ್ಲರೋ, ನೋಡಬೇಕು.

ದಿನೇಶ್‌ ಕಾರ್ತಿಕ್‌  ಕೋಲ್ಕತಾ ನೈಟ್‌ರೈಡರ್
ಅನುಭವಿ ವಿಕೆಟ್‌ ಕೀಪರ್‌. ಆದರೆ ಅನುಭವಿ ನಾಯಕನಲ್ಲ. ಕಳೆದ ವರ್ಷ ಗೌತಮ್‌ ಗಂಭೀರ್‌ ಹಿಂದೆ ಸರಿದ ಬಳಿಕ ಕೆಕೆಆರ್‌ ನಾಯಕನಾಗುವ ಅವಕಾಶ ಲಭಿಸಿತು. ತಂಡ ಅಗ್ರ ಮೂರರಲ್ಲಿ ಒಂದೆನಿಸಿದ್ದು ಸಾಮಾನ್ಯ ಸಾಧನೆಯೇನಲ್ಲ. ಈ ಸಲ ಎಲ್ಲರಂತೆ ವಿಶ್ವಕಪ್‌ಗೆ ಸ್ಥಾನ ಸಂಪಾದಿಸುವ ವೈಯಕ್ತಿಕ ಗುರಿಯನ್ನು ಕಾರ್ತಿಕ್‌ ಕೂಡ ಹೊಂದಿದ್ದಾರೆ. ಅದೃಷ್ಟ ತೂಗುಯ್ನಾಲೆಯಲ್ಲಿದೆ!

ಕೇನ್‌ ವಿಲಿಯಮ್ಸ್‌ ಸನ್‌ರೈಸರ್  ಹೈದರಾಬಾದ್‌ಇವರು  ವಾರ್ನರ್‌ ನಿಷೇಧದಿಂದ ಸನ್‌ರೈಸರ್ ನಾಯಕರಾದವರು. ಕಳೆದ ಋತುವಿನಲ್ಲಿ ತಂಡವನ್ನು ಫೈನಲ್‌ ತನಕ ಮುನ್ನಡೆಸಿದ ಸಾಹಸಿ. ಆದರೆ 2ನೇ ಸಲ ಪ್ರಶಸ್ತಿ ಸುತ್ತಿಗೆ ಏರಿದ ಹೈದರಾಬಾದ್‌ ತಂಡ ಚೆನ್ನೈಗೆ ಶರಣಾಗಬೇಕಾಯಿತು. ವಿಲಿಯಮ್ಸನ್‌ ಬ್ಯಾಟಿಂಗ್‌ ಮೂಲಕವೂ ಮಿಂಚಿದ್ದರು. ಈ ಬಾರಿಯೂ ಉತ್ತಮ ಫಾರ್ಮ್ನಲ್ಲಿದ್ದಾರೆ.

ಅಜಿಂಕ್ಯ ರಹಾನೆ  ರಾಜಸ್ಥಾನ್‌ ರಾಯಲ್ಸ್‌ 
ಸ್ಟೀವ್‌ ಸ್ಮಿತ್‌ಗೆ ನಿಷೇಧ ಹೇರಿದ್ದರಿಂದ ಕಳೆದ ವರ್ಷ ಅಜಿಂಕ್ಯ ರಹಾನೆ ರಾಜಸ್ಥಾನ್‌ ರಾಯಲ್ಸ್‌ ನಾಯಕರಾದರು. ಈ ವರ್ಷವೂ ಮುಂದುವರಿಯಲಿದ್ದಾರೆ. ಭಾರತದ ಟೆಸ್ಟ್‌ ತಂಡದ ಉಪನಾಯಕತ್ವದ ಅನುಭವ ಇದೆ. ನಿಷೇಧದ ಬಳಿಕ ವಾಪಸಾದ ರಾಜಸ್ಥಾನ್‌ ತಂಡ ಕಳೆದ ವರ್ಷ ರಹಾನೆ ನಾಯಕತ್ವದಲ್ಲೇ ಪ್ಲೇ-ಆಫ್ಗೆ ನೆಗೆದಿತ್ತು.

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.