ಸಿಂಗಾಪುರ ವಿರುದ್ಧ ಸೋತ ಭಾರತ
Team Udayavani, Mar 21, 2019, 12:30 AM IST
ಹಾಂಕಾಂಗ್: ಏಶ್ಯನ್ ಮಿಕ್ಸೆಡ್ ಟೀಮ್ ಬ್ಯಾಡ್ಮಿಂಟನ್ ಕೂಟದಲ್ಲಿ ಎಚ್.ಎಸ್. ಪ್ರಣಯ್ ಮತ್ತು ಪುರುಷರ ಡಬಲ್ಸ್ ಜೋಡಿ ಎಂ.ಆರ್. ಅರ್ಜುನ್-ಶ್ಲೋಕ್ ರಾಮಚಂದ್ರನ್ ಅವರ ಅತ್ಯುತ್ತಮ ಪ್ರದರ್ಶನದ ನಡುವೆಯೂ ಭಾರತ “ಬಿ’ ಗುಂಪಿನಲ್ಲಿ ಸಿಂಗಾಪುರ ವಿರುದ್ಧದ ಪಂದ್ಯವನ್ನು 2-3 ಅಂತರದಲ್ಲಿ ಕಳೆದುಕೊಂಡಿದೆ.
ಭಾರತ 5 ಪಂದ್ಯಗಳ ಈ ಸ್ಪರ್ಧೆಯನ್ನು ಉತ್ತಮ ರೀತಿಯಲ್ಲಿ ಆರಂಭಿಸುವಲ್ಲಿ ಎಡವಿತು. ಮೊದಲ ಪಂದ್ಯದಲ್ಲಿ ಮಿಕ್ಸೆಡ್ ಡಬಲ್ಸ್ ಜೋಡಿ ಎಂ.ಆರ್. ಅರ್ಜುನ್-ಋತುಪರ್ಣ ಪಾಂಡ 16-21, 13-21 ಗೇಮ್ಗಳಿಂದ ಸಿಂಗಾಪುರದ ಡೆನ್ನು ಬಾವಾ ಕ್ರಿಸ್ನಂಟಾ-ಟಾನ್ ವಿಯೀ ಹುನ್ ಜೋಡಿ ವಿರುದ್ಧ ಸೋತಿತು. ಅನಂತರ ನಡೆದ ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಎಚ್.ಎಸ್. ಪ್ರಣಯ್ ಭಾರತಕ್ಕೆ ಸಂಭ್ರಮ ಮೂಡಿಸಿದರು. ಅವರು 21-18, 12-21, 21-17 ಗೇಮ್ಗಳಿಂದ ಥಾಯ್ಲೆಂಡ್ ಮಾಸ್ಟರ್ ಚಾಂಪಿಯನ್ ಕೀನ್ ಯೂವ್ ಲೊಹ್ಗೆ ಸೋಲುಣಿಸಿದರು.
ಬಳಿಕ ಅರ್ಜುನ್-ಶ್ಲೋಕ್ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಲೊಹ್ ಕೀನ್ ಹಿನ್-ಕ್ರಿಸ್ನಂಟಾ ಅವರನ್ನು 21-16, 21-18 ನೇರ ಗೇಮ್ಗಳಿಂದ ಸೋಲಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು.
ವನಿತಾ ಸ್ಪರ್ಧೆಯಲ್ಲಿ ವಿಫಲ
ವನಿತಾ ಸಿಂಗಲ್ಸ್ ಮತ್ತು ಡಬಲ್ಸ್ ಸ್ಪರ್ಧೆಯಲ್ಲಿ ಭಾರತ ಗೆಲುವು ಸಾಧಿಸಲು ವಿಫಲವಾಯಿತು. ಸಿಂಗಲ್ಸ್ ಸ್ಪರ್ಧೆಯಲ್ಲಿ ಯುವ ಆಟಗಾರ್ತಿ ಅಶ್ಮಿತಾ ಚಾಲಿಹಾ ಭಾರೀ ಹೋರಾಟದ ಬಳಿಕ 21-17, 12-21, 16-21 ಗೇಮ್ಗಳಿಂದ ಯೋ ಜಿಯಾ ಮಿನ್ ವಿರುದ್ಧ ಸೋತರು. ವನಿತಾ ಡಬಲ್ಸ್ ಸ್ಪರ್ಧೆಯಲ್ಲಿ ಆರತಿ ಸಾರಾ ಸುನೀಲ್-ಋತುಪರ್ಣ ಪಾಂಡ ಜೋಡಿ ಪುಟ್ರಿ ಸಾರಿ ಡೆವಿ ಸಿಟ್ರಾ-ಲಿಮ್ ಮಿಂಗ್ ಹುಯಿ ಎದುರು 24-22, 15-21, 16-21 ಗೇಮ್ಗಳಿಂದ ಮುಗ್ಗರಿಸಿದರು.
ಈ ಸೋಲಿನಿಂದ ಭಾರತ “ಬಿ’ ಗುಂಪಿನಲ್ಲಿ ಕೆಳ ಸ್ಥಾನದಲ್ಲಿದೆ. ಚೈನೀಸ್ ತೈಪೆ ಮತ್ತು ಸಿಂಗಾಪುರ ಅಗ್ರ ಎರಡು ಸ್ಥಾನದಲ್ಲಿದೆ. ಗುರುವಾರ ಭಾರತ ತಂಡ ಚೈನೀಸ್ ತೈಪೆಯನ್ನು ಎದುರಿಸಲಿದೆ. ಇಲ್ಲಿ ಜಯ ಸಾಧಿಸುವುದು ಭಾರತಕ್ಕೆ ಅನಿವಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ