ಭೈರಪ್ಪ ಶ್ರೇಷ್ಠ ಕಾದಂಬರಿಕಾರ ಅಲ್ಲ, ಜನಪ್ರಿಯ ಲೇಖಕ: ಕುಂವೀ
Team Udayavani, Jan 30, 2017, 3:45 AM IST
ಬಾಗಲಕೋಟೆ: ಡಾ|ಎಸ್.ಎಲ್ ಭೈರಪ್ಪ ಶ್ರೇಷ್ಠ ಕಾದಂಬರಿಕಾರ ಅಲ್ಲ. ಅವರೊಬ್ಬ ಜನಪ್ರಿಯ ಲೇಖಕ. ಉತ್ತರಕಾಂಡ ಇನ್ನೂ ಅಚ್ಚುಗೊಳ್ಳುವಾಗಲೇ ಮೂರು ಮುದ್ರಣ ಕಂಡಿದೆ ಎಂದು ಅವರು ಹೇಳಿಕೊಳ್ಳುತ್ತಾರೆ. ಅವರ ಕಾದಂಬರಿಗಳು ಸನಾತನ ಧರ್ಮ ಪ್ರಚಾರಕ್ಕಾಗಿ ಇರುವ ಕರಪತ್ರಗಳಂತಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕುಂ.ವೀರಭದ್ರಪ್ಪ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾತಂತ್ರಾéನಂತರ ಈ ದೇಶವನ್ನು ರಾಜಕಾರಣಿಗಳು -ಸಾಹಿತಿಗಳು ಒಡೆದಷ್ಟು ಯಾರೂ ಒಡೆದಿಲ್ಲ ಎಂದು ಭೈರಪ್ಪ ಹೇಳಿದ್ದಾರೆ. ಆದರೆ ಅವರ ಕಾದಂಬರಿಗಳಲ್ಲೇ ಒಡಕು ಹುಟ್ಟಿಸುವ ಅಕ್ಷರಗಳಿವೆ. ರಾಜಕಾರಣಿಗಳ ಬಗ್ಗೆ ಟೀಕಿಸುವ ಭೈರಪ್ಪನವರೇ ಪ್ರಧಾನಿ ಮೋದಿ ಅವರೊಂದಿಗಿದ್ದಾರೆ. ಬಿಜೆಪಿ, ಆರ್ಎಸ್ಎಸ್ನ ಪ್ರಚಾರಕರಂತೆ ವರ್ತಿಸುತ್ತಾರೆ ಎಂದರು. ಭೈರಪ್ಪನವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕೆಂದು ಕೆಲವರು ಹೇಳಿದ್ದಾರೆ. ಅವರು ಕಳಪೆ ಲೇಖಕರಂತೂ ಅಲ್ಲ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದರೆ ಸಂತೋಷ ಎಂದು ಹೇಳಿದರು.
ಕತ್ತೆ ಸಂತತಿ ಸಂರಕ್ಷಿಸಿ:
ಗೋವಿನ ಹಾಲಿನಲ್ಲಿ ಇರುವ ಪೌಷ್ಟಿಕಾಂಶಗಿಂತ, ಕತ್ತೆ ಹಾಲಿನಲ್ಲಿ ಪೌಷ್ಟಿಕಾಂಶ ಹೆಚ್ಚಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಕತ್ತೆಯನ್ನೇಕೆ ರಾಷ್ಟ್ರಪ್ರಾಣಿಯನ್ನಾಗಿ ಮಾಡಬಾರದು ಎಂದು ಕುಂ.ವೀ. ಪ್ರಶ್ನಿಸಿದರು. ಕೆಲವರು ಗೋವನ್ನು ರಾಷ್ಟ್ರ ಪ್ರಾಣಿಯನ್ನಾಗಿ ಮಾಡುತ್ತೇವೆ ಎಂದು ಹೊರಟಿದ್ದಾರೆ. ಗೋವಿನ ಹಾಲಿಗಿಂತ ಕತ್ತೆ ಹಾಲು ಅತ್ಯುತ್ತಮ. ಆದರೆ, ಕತ್ತೆ ಮತ್ತು ಕಾಗೆಯನ್ನು ಸನಾತನ ಸಮಾಜ ಕೀಳಾಗಿ ಕಾಣುತ್ತಾ ಬಂದಿದೆ. ಪಕ್ಷಿಗಳಲ್ಲಿ ಕಾಗೆ, ಪ್ರಾಣಿಗಳಲ್ಲಿ ಕತ್ತೆ ಶ್ರೇಷ್ಠವಾಗಿದೆ. ರಾಜ್ಯದಲ್ಲಿ ಕತ್ತೆ ಸಂತತಿ ಸಂರಕ್ಷಣೆ ಮತ್ತು ಬೆಳವಣಿಗೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ