ಜಮೀನಿನಲ್ಲೂ ಟ್ರ್ಯಾಕ್ಟರ್‌ ವಿಮಾನದ ಉಳುಮೆ


Team Udayavani, Feb 16, 2017, 3:45 AM IST

Air-Tractor-u.jpg

ಬೆಂಗಳೂರು: ಸಾಮಾನ್ಯ ಟ್ರ್ಯಾಕ್ಟರ್‌ಗಳನ್ನು ಬಳಿಸಿ ಬೇಸಾಯ ಮಾಡುವ ವಿಧಾನ ಈಗ ಹಳೆಯದಾಯ್ತು. ಆ ಟ್ರ್ಯಾಕ್ಟರ್‌ ಮಾಡುವ ಬಹುತೇಕ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರದೇಶಗಳಲ್ಲಿ ಕೆಲಸವನ್ನು ಮಾಡಿಮುಗಿಸಲು  ಏರ್‌ ಟ್ರ್ಯಾಕ್ಟರ್‌ ಅನ್ನು ಪರಿಚಯಿಸಲಾಗಿದೆ. 

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2017ರಲ್ಲಿ ಕಾಣಬಹುದಾಗಿದ್ದು ಇದನ್ನು ಆಸ್ಟ್ರೇಲಿಯದ ಕಂಪೆನಿಯೊಂದು ಅಭಿವೃದ್ಧಿಪಡಿಸಿದೆ.ಈ ವಿಮಾನದ ಸಹಾಯದಿಂದ ಬಿತ್ತನೆ, ರಸಗೊಬ್ಬರ ಸಿಂಪರಣೆ, ಬೆಂಕಿ ನಂದಿಸುವುದು, ಕೃಷಿ ಉತ್ಪನ್ನಗಳ ಸಾಗಣೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಬಹುದು. ಕೃಷಿ ಉದ್ದೇಶಗಳಿಗೆ ಪೂರಕವಾಗಿ ವಿಮಾನದ ವಿನ್ಯಾಸ ರೂಪಿಸಲಾಗಿದೆ. ಅಗಲವಾದ ರೆಕ್ಕೆಗಳು, ಅದರ ಒಂದು ಭಾಗದಲ್ಲಿ ಟ್ಯಾಂಕರ್‌ ಹಾಗೂ ತಳಭಾಗದಲ್ಲಿ ಸಿಂಪರಣೆ ಮಾಡುವ ಚಿಕ್ಕ ರಂಧ್ರಗಳಿರುವ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಲ್ಯಾಂಡ್‌ ಮಾಡಬಹುದು. ಒಬ್ಬ ಪೈಲಟ್‌ ಮತ್ತೂಬ್ಬ ಸಹಾಯಕ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದರಲ್ಲಿದೆ. 

ಸಣ್ಣ ರೈತರಿಗೆ ಸೂಕ್ತವಲ್ಲ
ಆದರೆ, ಇದು ಸಣ್ಣ-ಮಧ್ಯಮ ರೈತರಿಗೆ ಅಷ್ಟು ಅನುಕೂಲ ಆಗುವುದಿಲ್ಲ. ನೂರಾರು ಎಕರೆ ಭೂಮಿ ಹೊಂದಿರುವ ರೈತರು ಅಥವಾ ಸರ್ಕಾರದ ಜಮೀನುಗಳಿಗೆ ಹೆಚ್ಚು ನೆರವಾಗಲಿದೆ. ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಜಮೀನುಗಳು, ಉಪ ಅರಣ್ಯ ಪ್ರದೇಶಗಳಲ್ಲಿ ಅದರಲ್ಲೂ ಹತ್ತಾರು ರೈತರು ಸೇರಿಕೊಂಡು ಒಂದು ಸೊಸೈಟಿ ಅಥವಾ ಸಂಘದಡಿ ಈ ಮಾದರಿಯ ವಿಮಾನಗಳ ಮೂಲಕ ಕೃಷಿ ಚಟುವಟಿಕೆಗಳನ್ನು ಮಾಡಬಹುದು. ಕನಿಷ್ಠ ಸಾವಿರ ಎಕರೆ ಭೂಮಿ ಇರುವ ಪ್ರದೇಶದಲ್ಲಿ ಏರ್‌ ಟ್ರ್ಯಾಕ್ಟರ್‌ ಹೇಳಿಮಾಡಿಸಿದ್ದಾಗಿದೆ ಎಂದು ಆಸ್ಟ್ರೇಲಿಯದ ಫೀಲ್ಡ್‌ ಏರ್‌ ಗ್ರೂಪ್‌ ಕಂಪೆನಿಗಳ ವಿಮಾನ ಮಾರುಕಟ್ಟೆ ವ್ಯವಸ್ಥಾಪಕ ಜೇಮ್ಸ್‌ ಒಬ್ರಿಯನ್‌ ತಿಳಿಸಿದ್ದಾರೆ. 

ಸಾವಿರ ಎಕರೆ ಭೂಮಿಗೆ ನೀರು ಅಥವಾ ರಸಗೊಬ್ಬರ ಸಿಂಪರಣೆಯನ್ನು ಏರ್‌ ಟ್ರ್ಯಾಕ್ಟರ್‌ 3ರಿಂದ 4 ತಾಸುಗಳಲ್ಲಿ ಮಾಡಿಮುಗಿಸುತ್ತದೆ. ಪ್ರತಿ ಗಂಟೆಗೆ 190 ಲೀ. ಇಂಧನ ಇದಕ್ಕೆ ಬೇಕಾಗುತ್ತದೆ. ಇಷ್ಟೇ ವಿಸ್ತೀರ್ಣದಲ್ಲಿ ಇದೇ ಕೆಲಸವನ್ನು ಮಾಡಲು 15ರಿಂದ 20 ಟ್ರ್ಯಾಕ್ಟರ್‌ಗಳು ಬೇಕಾಗುತ್ತದೆ. ಜತೆಗೆ 40ಕ್ಕೂ ಹೆಚ್ಚು ಕೂಲಿಕಾರ್ಮಿಕರು ಬೇಕಾಗುತ್ತದೆ. ಇದಕ್ಕೆ ಇಡೀ ದಿನ ವ್ಯಯಮಾಡಬೇಕಾಗುತ್ತದೆ. 1,600 ಲೀ.ನಿಂದ 2 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್‌ ಇದರಲ್ಲಿದೆ. ಅದರಲ್ಲಿ ನೀರು ಅಥವಾ ರಸಗೊಬ್ಬರ ಸಿಂಪರಣೆ ಮಾಡಬಹುದು ಎನ್ನುತ್ತಾರೆ ಜೇಮ್ಸ್‌ ಒಬ್ರಿಯನ್‌. 

ಶೇ. 30ರಷ್ಟು ಇಳುವರಿ ಹೆಚ್ಚು
ಸಾಮಾನ್ಯವಾಗಿ ಟ್ರ್ಯಾಕ್ಟರ್‌ ಅನ್ನು ಜಮೀನಿನಲ್ಲಿ ತೆಗೆದುಕೊಂಡು ಹೋಗುವುದರಿಂದ ಬೆಳೆದುನಿಂತ ಬೆಳೆ ಹಾಳಾಗುವುದು, ಬೆಳೆಗೆ ರೋಗ ತಗುಲಿ ನಷ್ಟವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ, ಏರ್‌ ಟ್ರ್ಯಾಕ್ಟರ್‌ ಜಮೀನಿ ಮೇಲಿನಿಂದ ಕೃಷಿ ಚಟುವಟಿಕೆ ನಡೆಸುವುದರಿಂದ ಶೇ. 30ರಷ್ಟು ಇಳುವರಿ ಹೆಚ್ಚು ಬರಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. 

ಆಸ್ಟ್ರೇಲಿಯದಲ್ಲಿ 200 ಏರ್‌ ಟ್ರ್ಯಾಕ್ಟರ್‌ಗಳನ್ನು ಕೃಷಿ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಒಂದು ಏರ್‌ ಟ್ರ್ಯಾಕ್ಟರ್‌ ಬೆಲೆ  4,00,000 ಅಮೆರಿಕ ಡಾಲರ್‌(2,67,57,302 ರೂ.) ಶುರುವಾಗುತ್ತದೆ.  ಅಲ್ಲಿ ಈ ವಿಮಾನದಿಂದ ಹತ್ತಿ, ಗೋಧಿ, ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಭಾರತದ ಕೃಷಿ ಚಟುವಟಿಕೆಗಳಿಗೂ ಇದನ್ನು ಬಳಸಲು ಅವಕಾಶ ಇದೆ. ಈ ಸಂಬಂಧ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆದಿದ್ದು, ಪೂರಕ ಸ್ಪಂದನೆಯೂ ದೊರಕಿದೆ ಎಂದು ಅವರು ಹೇಳಿದರು. 

ವಿಮಾನಕ್ಕೆ ಪ್ರತ್ಯೇಕ ಇಂಧನ ಬೇಕಾಗುತ್ತದೆ. ಆದರೆ, ಇದು ಸೇರಿದಂತೆ ಸಬ್ಸಿಡಿ ಮತ್ತಿತರ ಸೌಲಭ್ಯಗಳನ್ನು ಇಲ್ಲಿನ ಸರ್ಕಾರ ಪೂರೈಸಬೇಕಾಗುತ್ತದೆ. ವಿಮಾನ ತರಬೇತುದಾರ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಕಂಪನಿ ನೀಡುತ್ತದೆ. 

– ವಿಜಯಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.