ಖಾಪ್ರಿ ದೇವರಿಗೆ ಮದ್ಯ ಸಿಗರೇಟಿನ ನೈವೇದ್ಯ!
Team Udayavani, Mar 6, 2017, 3:45 AM IST
ಕಾರವಾರ: ಇಲ್ಲಿನ ಕಾಳಿ ನದಿ ದಂಡೆಯ ಸಮೀಪ ಖಾಪ್ರಿ ದೇವರ ಜಾತ್ರೆ ಭಾನುವಾರ ಶ್ರದ್ದಾ ಭಕ್ತಿಯಿಂದ ನಡೆಯಿತು. ಕಾರವಾರ, ಗೋವಾ ಹಾಗೂ ಮಹಾರಾಷ್ಟ್ರದಿಂದ ಆಗಮಿಸಿದ ಸಾವಿರಾರು ಭಕ್ತರು ಮದ್ಯ ಸಿಗರೇಟಿನ ನೈವೇದ್ಯ ಅರ್ಪಿಸಿ ಹರಕೆ ತೀರಿಸಿಕೊಂಡರು.
ಪಾಶ್ಚಿಮಾತ್ಯರು ಭಾರತಕ್ಕೆ ಬಂದ ವೇಳೆ ದ.ಆಫ್ರಿಕಾದ ಖಾಪ್ರಿ ಎಂಬ ವ್ಯಕ್ತಿ ಇಲ್ಲಿನ ಕಾಳಿ ನದಿ ತೀರದಲ್ಲಿ ನೆಲೆಸಿ ಜನರ ನೆರವಾಗಿ ದೇವಮಾನವನಾದ. ಆತನ ಬಳಿಕ ಅವನನ್ನೇ ಹೋಲುವ ಶಿಲೆಯೊಂದು ನದಿಯಲ್ಲಿ ದೊರೆಯಿತು. ದೇವಾಲಯ ನಿರ್ಮಿಸಿದ ಜನರು, ಆತನು ಬಳಸುತ್ತಿದ್ದ ವಸ್ತುಗಳನ್ನು ಅರ್ಪಿಸುವ ಪ್ರತೀತಿಯನ್ನು ರೂಢಿಸಿಕೊಂಡಿರುವುದು ಸ್ಥಳ ಮಹಿಮೆ.