ದುಷ್ಕರ್ಮಿಗಳ ದಾಳಿ:ವೈಟ್ಫೀಲ್ಡ್ನಲ್ಲಿ ಯುವಕನ ಮರ್ಮಾಂಗ,ನಾಲಿಗೆ ಕಟ್
Team Udayavani, Mar 18, 2017, 12:15 PM IST
ಬೆಂಗಳೂರು : ವೈಟ್ ಫೀಲ್ಡ್ ಬಳಿಯ ಇಮ್ಮಡಿ ಹಳ್ಳಿಯಲ್ಲಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಎಳೆದೊಯ್ದು ನಾಲಿಕೆ ಕತ್ತರಿಸಿ, ಮರ್ಮಾಂಗಕ್ಕೂ ಇರಿದ ಬೆಚ್ಚಿ ಬೀಳಿಸುವ ಕ್ರೂರ ಘಟನೆ ಗುರುವಾರ ಮಧ್ಯರಾತ್ರಿ ನಡೆದಿದೆ
ನಾಲ್ವರು ಮುಸುಕುಧಾರಿಗಳು ಒಡಿಶಾ ಮೂಲದ ಬಿಜು ನಾಯಕ್(21) ಯುವಕನನ್ನು ಮನೆಯಿಂದ ದೂರಕ್ಕೆ ಎಳೆದೊಯ್ದು ಮೊದಲು ಮರ್ಮಾಂಗವನ್ನು ಇರಿದಿದ್ದು, ಬೊಬ್ಬಿಟ್ಟಾಗ ನಾಲಿಗೆಯನ್ನು ಕತ್ತರಿಸಿ ಪರಾರಿಯಾಗಿದ್ದಾರೆ.
ಬಿಜುಗೆ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಾಲಿಗೆ ಸಂಪೂರ್ಣ ತುಂಡಾಗಿರುವ ಹಿನ್ನಲೆ ಯಾವುದೇ ಹೇಳಿಕೆ ಪಡೆಯಲು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.
ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿಸಿಪಿ ನಾರಾಯಣ್ ನೇತೃತ್ವದಲ್ಲಿ ತನಿಖೆ ಮುಂದುವರೆದಿದೆ.