ಗುಡಿಬಂಡೆ ಮನಿಯಮ್ಮನ ಸಮಸ್ಯೆ ದಿಲ್ಲಿಯಲ್ಲಿ ಪರಿಹಾರ
Team Udayavani, May 30, 2017, 12:09 PM IST
ಬೆಂಗಳೂರು/ ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಮುನಿಯಮ್ಮ ಎಂಬ ಮಹಿಳೆ ತಮ್ಮ ಜಮೀನಿನ ವಿವಾದ ಪರಿಹರಿಸಿಕೊಳ್ಳಲು ದೆಹಲಿಗೆ ತೆರಳಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರಸಂಗ ನಡೆದಿದೆ.
ಮುನಿಯಮ್ಮ ರೈಲಿನ ಮೂಲಕ ದೆಹಲಿಗೆ ತೆರಳಿ ಕರ್ನಾಟಕ ಭವನದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸದಾ ಬ್ಯುಸಿ ಇರ್ತಾರೆ ಎಂದು ದೆಹಲಿಗೆ
ಬಂದಿರುವುದಾಗಿ ಹೇಳಿಕೊಂಡ ಮುನಿಯಮ್ಮ, ತಮಗೆ ಮಂಜೂರಾಗಿರುವ ನಿವೇಶನ ವಿವಾದದಲ್ಲಿರುವುದರಿಂದ ಬದಲಿ ನಿವೇಶನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಮುನಿಯಮ್ಮನ ಮನವಿ ಪಡೆದ ಸಿಎಂ ಸಿದ್ದರಾಮಯ್ಯ ಭಾವುಕರಾಗಿ, ದೆಹಲಿಗೆ ಯಾರು ಕಳುಹಿಸಿಕೊಟ್ಟಿದ್ದಾರೆ, ಇಲ್ಲಿಗೆ ಬರುವ ಬದಲು ಬೆಂಗಳೂರಿನಲ್ಲಿಯೇ ನನ್ನ ನಿವಾಸಕ್ಕೆ ಬರಬಹುದಿತ್ತಲ್ಲ ಎಂದು ಪ್ರಶ್ನಿಸಿದರು. ದೆಹಲಿಗೆ ಹೋದ್ರೆ ಸಿಗ್ತಾರೆ ಎಂದು ಹೇಳಿದರು. ಅದಕ್ಕೆ ಇಲ್ಲಿಗೆ ಬಂದೆ ಎಂದು ಮುನಿಯಮ್ಮ ಹೇಳಿದರು. ಮುಖ್ಯಮಂತ್ರಿಯವರು ತಕ್ಷಣ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಕಾನಡೆಗೆ ದೂರವಾಣಿ ಮೂಲಕ ಮಾತನಾಡಿ, ಮುನಿಯಮ್ಮಳ ಸಮಸ್ಯೆ ಪರಿಹರಿಸುವಂತೆ ಸೂಚನೆ ನೀಡಿದರು.
ನಂತರ ದೆಹಲಿಯ ಕರ್ನಾಟಕ ಭವನದಲ್ಲಿಯೇ ಮುನಿಯಮ್ಮಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ, ದೆಹಲಿಯಿಂದ ಬೆಂಗಳೂರಿಗೆ ವಾಪಸ್ ತೆರಳಲು ಹಣ ನೀಡಿ ಕಳುಹಿಸಿದ್ದಾರೆ.
ದೆಹಲಿ ಭೇಟಿ ಇದೇ ಮೊದಲಲ್ಲ!
ಈ ಹಿಂದೆಯೂ ಗುಡಿಬಂಡೆ ಮುನಿಯಮ್ಮ ತನ್ನ ಸಂಕಷ್ಟ ಹೇಳಿಕೊಳ್ಳಲು ದೆಹಲಿಗೆ ತೆರಳಿ ಸಂಸದ ಎಂ.ವೀರಪ್ಪ ಮೊಯ್ಲಿ
ಅವರನ್ನು ನಿವಾಸದಲ್ಲಿ ಭೇಟಿ ಮಾಡಿದ್ದಳು ಎನ್ನಲಾಗಿದೆ. ಆದರೆ ಮೊಯ್ಲಿ ಅವರಿಂದ ಸಮಸ್ಯೆಗೆ ಪರಿಹಾರ ಸಿಗದ ಕಾರಣ ಸಿಎಂ ಬಳಿಗೆ ತೆರಳಲು ನಿರ್ಧರಿಸಿದ ಮುನಿಯಮ್ಮ ಸೋಮವಾರ ಕಡೆಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ತನ್ನ ಸಂಕಷ್ಟ ತಿಳಿಸಿದ್ದು, ಜಿÇÉಾಡಳಿತ ಇನ್ನು ಮುಂದಾದರೂ ಸಮಸ್ಯೆಗೆ ಪರಿಹಾರ ಸೂಚಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಮುನಿಯಮ್ಮಗೆ ಸೌಕರ್ಯ: ದೆಹಲಿಗೆ ಬಂದಿದ್ದ ಮುನಿಯಮ್ಮಗೆ ಸಿಎಂ ಸಿದ್ದರಾಮಯ್ಯ ಉಪಾಹಾರ ವ್ಯವಸ್ಥೆ ಜೊತೆಗೆ ಮರಳಿ ರಾಜ್ಯಕ್ಕೆ ತೆರಳಲು ಎÇÉಾ ರೀತಿಯ ವ್ಯವಸ್ಥೆ ಮಾಡುವಂತೆ ಕರ್ನಾಟಕ ಭವನದ ಅಧಿಕಾರಿಗಳಿಗೆ ಸೂಚಿಸಿ¨ªಾರೆ. ಸಮಸ್ಯೆಗೆ ಸಿಎಂ ಸ್ವಂದನೆಗೆ ನೋಡಿ ಹರ್ಷಗೊಂಡ ಮುನಿಯಮ್ಮ ದೆಹಲಿಯಿಂದ ಕರ್ನಾಟಕದತ್ತ ರೈಲಿನ ಮೂಲಕ ಪ್ರಯಾಣ ಬೆಳೆಸಿ¨ªಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ