ಕೇಂದ್ರದಿಂದ ‘ಬರ’ಸಿಡಿಲು : ಬರ ಘೋಷಣೆಗೆ ಕಠಿಣ ಷರತ್ತು
Team Udayavani, Jul 19, 2017, 4:40 AM IST
ಬೆಂಗಳೂರು: ಬರಗಾಲಕ್ಕೆ ತುತ್ತಾದರೆ ಕೇಂದ್ರ ಸರಕಾರದಿಂದ ಬರ ಪರಿಹಾರ ಇನ್ನು ಮುಂದೆ ಸಿಗುವುದು ಅಷ್ಟು ಸುಲಭವಲ್ಲ. ಮಳೆಯ ಕೊರತೆಯಿಂದ ರಾಜ್ಯ ಸರಕಾರ ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡು ವುದಕ್ಕೆ ಕಠಿನ ಷರತ್ತುಗಳನ್ನು ವಿಧಿಸಿ ಹೊಸ ನಿಯಮಾವಳಿಗಳನ್ನು ರಚಿಸಿದೆ. ಕೇಂದ್ರದ ಈ ನಿಯಮಗಳನ್ನು ಪಾಲಿಸಿದರೆ, ರೈತರಿಗೆ ಬರ ಪರಹಾರ ಸಿಗುವುದು ಗಗನ ಕುಸುಮವಾಗಲಿದೆ.
ಕೇಂದ್ರ ಸರಕಾರ ಬರ ಪರಿಹಾರಕ್ಕಾಗಿ ರಚಿಸಿರುವ ಮಾರ್ಗಸೂಚಿಗಳು ಅವೈಜ್ಞಾನಿಕವಾಗಿವೆ ಎಂದು ವಿಶ್ಲೇಷಿಸಲಾಗುತ್ತಿದ್ದು, ಹೊಸ ನಿಯಮಾವಳಿಗಳಿಗಳನ್ನು ರಾಜ್ಯ ಸರಕಾರಕ್ಕೆ ಕಳುಹಿಸಿ ಕೊಟ್ಟಿದ್ದು, ಇದರಲ್ಲಿರುವ ನಿಯಮಾವಳಿಗಳನ್ನು ಗಮನಿಸಿದ ರಾಜ್ಯ ಸರಕಾರಕ್ಕೆ ಈಗ ಶಾಕ್ ಆಗಿದೆ. ಹೊಸ ನಿಬಂಧನೆಗಳನ್ನು ಅನುಸರಿಸಿದರೆ, ನಿಜವಾಗಿಯೂ ಬರ ಪರಿಸ್ಥಿತಿ ತಲೆದೋರಿದರೂ ಕೇಂದ್ರದಿಂದ ಪರಿಹಾರ ಪಡೆಯುವುದು ದುಸ್ತರವಾಗಲಿದೆ ಎಂದು ಸರಕಾರದ ಉನ್ನತ ಅಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ.
ಹೊಸ ನಿಯಮಾವಳಿಯಲ್ಲಿ ಏನಿದೆ ?: ಈ ಹಿಂದೆ 4 ವಾರ ಸತತ ವಾಡಿಕೆಗಿಂತ ಕಡಿಮೆ ಮಳೆ ಬಿದ್ದ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲು ನಿಯಮಗಳಲ್ಲಿ ಅವಕಾಶವಿತ್ತು. ಇದನ್ನು ಮಾರ್ಪಡಿಸಿದ ಕೇಂದ್ರ ಸರಕಾರ ಹೊಸ ನಿಯಮಾವಳಿಯಲ್ಲಿ ಶೇಕಡಾ 50ಕ್ಕಿಂತ ಕಡಿಮೆ ಬಿತ್ತನೆಯಾದ ಪ್ರದೇಶವನ್ನು ಮಾತ್ರ ಬರಪೀಡಿತ ಎಂದು ಘೋಷಣೆ ಮಾಡಲು ಸೂಚಿಸಿದೆ. ಅಷ್ಟೇ ಅಲ್ಲ, ಬರಗಾಲ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಅಂತರ್ಜಲ ಮಟ್ಟ ಕುಸಿದಿರಬೇಕು, ಜಲಾಶಯ ಮತ್ತು ಕೆರೆಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿರಬೇಕು ಎಂದು ತಿಳಿಸಿದೆ.
ಕರ್ನಾಟಕದಲ್ಲಿ ಮಳೆಯ ಅಸಮತೋಲನ ಇದ್ದು, ಬಿತ್ತನೆ ಸಮಯದಲ್ಲಿ ಬಿದ್ದ ಮಳೆ ಫಸಲು ಬೆಳೆಯುವಾಗ ಕೈಕೊಟ್ಟು ಎಷ್ಟೋ ಬಾರಿ ಬೆಳೆ ನಾಶಗೊಂಡು ಬರ ಪರಿಸ್ಥಿತಿ ನಿರ್ಮಾಣವಾದ ಚಿತ್ರಣಗಳು ಸಾಕಷ್ಟಿವೆ. ರಾಜ್ಯದಲ್ಲಿ ಹಲವಾರು ವರ್ಷ ಬರಗಾಲ ತಲೆದೋರಿದೆ. ಕಳೆದ 6 ವರ್ಷದಿಂದ ಸತತ ಬರಗಾಲಕ್ಕೆ ರಾಜ್ಯ ತುತ್ತಾದರೂ ಶೇ. 70ರಿಂದ 80ರಷ್ಟು ಬಿತ್ತನೆಯಾಗಿದೆ. ಆದರೆ, ಬಿತ್ತಿದ ಅನಂತರ ಫಸಲು ಮಾತ್ರ ಕೈ ಸೇರಿಲ್ಲ. ಹೀಗಾಗಿ ಕೇಂದ್ರದ ನಿಯಮಾವಳಿಗಳನ್ನು ಅನ್ವಯಿಸಿ ಬರಗಾಲ ಘೋಷಣೆ ಮಾಡುವುದು ಕಷ್ಟ ಸಾಧ್ಯ.
ಕೇಂದ್ರ ಸರಕಾರ ರಚಿಸಿದ ಹೊಸ ನಿಯಮಾವಳಿಗಳು 2017ರ ಮುಂಗಾರು ಮತ್ತು ಅನಂತರದ ಅವಧಿಗೆ ಅನ್ವಯವಾಗಲಿದೆ. ಈ ಬಾರಿ ಶೇ. 60ರಷ್ಟು ಮಳೆ ವಿಫಲವಾದಲ್ಲಿ ಮಾತ್ರ ಅಂತಹ ಪ್ರದೇಶಗಳನ್ನು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆಗೆ ಪರಿಗಣಿಸುವಂತೆ ಕೇಂದ್ರ ಸರಕಾರ ನಿಯಮಾವಳಿಯಲ್ಲಿ ರಾಜ್ಯ ಸರಕಾರಕ್ಕೆ ಸೂಚಿಸಿದೆ. ಇಲ್ಲಿಯವರೆಗೆ ಶೇ. 33 ಬೆಳೆ ಹಾನಿಯಾಗಿದ್ದರೆ, ಬರ ಪರಿಹಾರ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ನಿಯಮಗಳಲ್ಲಿ ಶೇ. 50ರಷ್ಟು ಬೆಳೆ ಹಾನಿಯಾದರೆ ಮಾತ್ರ ಪರಿಹಾರಕ್ಕೆ ಪರಿಗಣಿಸುವಂತೆ ಸೂಚಿಸಲಾಗಿದೆ.
ಬರ ಘೋಷಣೆಗೆ ಹೊಸ ನಿಮಯ
– ಶೇ. 50ಕ್ಕಿಂತ ಕಡಿಮೆ ಬಿತ್ತನೆಯಾಗಿರಬೇಕು.
– ಶೇ. 60ರಷ್ಟು ಮಳೆ ಕಡಿಮೆಯಾಗಿರಬೇಕು.
– ಅಂತರ ಜಲ ಮಟ್ಟ ಕುಸಿದಿರಬೇಕು.
– ಜಲಾಶಯಗಳು ಮತ್ತು ಕೆರೆಗಳ ನೀರಿನ ಪ್ರಮಾಣ ಕಡಿಮೆಯಾಗಿರಬೇಕು.
– ಶೇ. 50ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರಬೇಕು.
– ಬರ ಪೀಡಿತ ಪ್ರದೇಶದ ಶೇ. 10ರಷ್ಟು ಸಮೀಕ್ಷೆ ಫೋಟೊ ತೆಗೆದು ಕಳುಹಿಸಬೇಕು.
ಹಳೆ ನಿಯಮಗಳು
– ಸತತ ನಾಲ್ಕು ವಾರ ವಾಡಿಕೆಗಿಂತ ಕಡಿಮೆ ಮಳೆ
– ಶೇ. 33ರಷ್ಟು ಬೆಳೆ ಹಾನಿಯಾದರೂ ಪರಿಹಾರ
– ಶೇ. 50 ಮಣ್ಣಿನ ತೇವಾಂಶ ಕಡಿಮೆ ಇರಬೇಕು.
ಕೇಂದ್ರ ಸರಕಾರದ ಹೊಸ ಮಾರ್ಗಸೂಚಿ ಪ್ರಕಾರ ಬರ ಘೋಷಣೆ ಮಾಡುವುದು ಕಷ್ಟವಾಗಲಿದೆ. ಯಾವ ರಾಜ್ಯವೂ ಈ ನಿಯಮದಡಿ ಬರ ಘೋಷಣೆಗೆ ಅವಕಾಶ ದೊರೆಯುವುದು ಅನುಮಾನ. ತೀವ್ರ ಬರಗಾಲವಿದ್ದರೆ ಮಾತ್ರ ಅದನ್ನು ಬರ ಪೀಡಿತ ಎಂದು ಘೋಷಣೆ ಮಾಡಬೇಕೆಂದು ಹೇಳಲಾಗಿದೆ. ಇದನ್ನು ಅನುಸರಿಸಿದರೆ, ಕೇಂದ್ರದಿಂದ ಬರ ಪರಿಹಾರ ದೊರೆಯುವುದು ಕಷ್ಟ’.
– ಬಿ.ಎಸ್. ಶ್ರೀನಿವಾಸ ರೆಡ್ಡಿ, ನಿರ್ದೇಶಕರು. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ.
– ಶಂಕರ ಪಾಗೋಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ
ನಾಡಿದ್ದಿನಿಂದ 5 ದಿನ ರಾಜ್ಯಕ್ಕೆ ಬಿಜೆಪಿ ದಿಗ್ಗಜ ನಾಯಕರ ದಂಡು
Temperature; ರಾಜ್ಯದಲ್ಲಿ ಮತ್ತೆ ದಿಢೀರ್ ಏರಿದ ತಾಪಮಾನ
ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
ಮಂಡ್ಯದಲ್ಲಿ ಐಸ್ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ
Panaji: ಸರಕಾರದ ಆ್ಯಪ್ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ
Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ
Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ
Bengaluru: ಅತಿಕ್ರಮಿಸಿ ಏರ್ಪೋರ್ಟ್ನಲ್ಲಿ ವಿಡಿಯೋ: ಯುಟ್ಯೂಬರ್ ಬಂಧನ