ಏನ್ರಿ ಹುಚ್ಚಾಟ; ಪ್ರಥಮ್ ಗೆ ನ್ಯಾಯಾಧೀಶರ ತರಾಟೆ, ಜಾಮೀನು ಮಂಜೂರು
Team Udayavani, Jul 24, 2017, 4:00 PM IST
ಬೆಂಗಳೂರು: ಕಿರುತೆರೆ ನಟ ಭುವನ್ ತೊಡೆ ಕಚ್ಚಿದ್ದ ಪ್ರಕರಣದಲ್ಲಿ ಬಿಗ್ ಬಾಸ್ ವಿನ್ನರ್ ಖ್ಯಾತಿಯ ಪ್ರಥಮ್ ಗೆ 2ನೇ ಎಸಿಜೆಎಂ ನ್ಯಾಯಾಲಯ ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಸಹನಟ ಭುವನ್ ಗೆ ಕಚ್ಚಿದ್ದ ಪ್ರಕರಣದಲ್ಲಿ ಪ್ರಥಮ್ ಇಂದು ನ್ಯಾಯಾಲಯಕ್ಕೆ ಶರಣಾಗಿದ್ದ. ಏನ್ರಿ ಇದು ನಿಮ್ಮ ಹುಚ್ಚಾಟ ಪ್ರಥಮ್ ಎಂದು ನ್ಯಾಯಾಧೀಶರು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ನ್ಯಾಯಾಧೀಶ ಪ್ರಥ್ವೀರಾಜ್ ವರ್ಣಿಕರ್ ಅವರು, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತೆ, ನೀವೇನ್ರಿ ಹೀಗೆ? ಸಮಾಜಕ್ಕೆ ನಿಮ್ಮಿಂದ ಉತ್ತಮ ಸಂದೇಶ ರವಾನೆಯಾಗಬೇಕು. ಆದರೆ ನೀವೇನ್ರಿ…ಏನಿದು ನಿಮ್ಮ ಹುಚ್ಚಾಟ ಪ್ರಥಮ್ ಎಂದು ಪ್ರಶ್ನಿಸಿದ್ದರು.
ಸಹನಟ ಭುವನ್ ಗೆ ಕಚ್ಚಿದ ಪ್ರಕರಣದಲ್ಲಿ 5 ಸಾವಿರ ರೂ ಮೊತ್ತದ ನಗದು ಶ್ಯೂರಿಟಿ ನೀಡಲು ಹೇಳಿ ನ್ಯಾಯಾಧೀಶರು ಷರತ್ತುಬದ್ಧ ಜಾಮೀನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State government: ರಾಜ್ಯ ಸರಕಾರಕ್ಕೆ ಎನ್ಸಿಬಿ ನೋಟಿಸ್?
Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ