ಸಾಲಬಾಧೆಯಿಂದ ಮೂವರು ಆತ್ಮಹತ್ಯೆ
Team Udayavani, Aug 7, 2017, 7:45 AM IST
ಬೆಂಗಳೂರು: ಸಾಲಬಾಧೆಯಿಂದ ಮತ್ತೆ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾ ವತಿ
ತಾಲೂಕಿನ ಮೈಲಾಪುರ ಗ್ರಾಮದ ರೈತ ಅಂದಾನಗೌಡ ಪೊಲೀಸ್ ಪಾಟೀಲ್(45) ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸುಟ್ಟಗಾಯಗಳಿಂದ ಅಸ್ವಸ್ಥರಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಭಾನುವಾರ ಅಸುನೀಗಿದರು. ಇವರಿಗೆ ಸುಮಾರು 25 ಲಕ್ಷ ರೂ.ಸಾಲವಿತ್ತು. ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಈರಪ್ಪ ಕಲ್ಲಪ್ಪ ಕಡಕೋಳ (32) ಎಂಬುವರು ಶನಿವಾರ ರಾತ್ರಿ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 6 ಎಕರೆ ಜಮೀನಿದ್ದು, 19.75 ಲಕ್ಷ ರೂ. ಸಾಲವಿತ್ತು. ಧಾರವಾಡ ತಾಲೂಕಿನ ರಾಮಾಪುರದಲ್ಲಿ ಶ್ರೀಕಾಂತ ನಾಗಪ್ಪ ಮಾನಿ (32)
ಎಂಬುವರು ಭಾನುವಾರ ತಮ್ಮ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಗೆ 3.70 ಲಕ್ಷ ರೂ. ಸಾಲವಿತ್ತು. ಮುಂಗಾರು ಮಳೆ ಸರಿಯಾಗಿ ಆಗದೇ ಇರುವುದರಿಂದ ಜಮೀನಿನಲ್ಲಿ ಇವರು ಬಿತ್ತನೆ ಮಾಡಿರಲಿಲ್ಲ.