ಗೌಡ್ರ ಕುಟುಂಬದಲ್ಲೇ ಭಿನ್ನಮತ ? ರೇವಣ್ಣ ಹೇಳಿದ್ದೇನು?
Team Udayavani, Sep 1, 2017, 3:18 PM IST
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ಸಜ್ಜಾಗುತ್ತಿದ್ದು ಇದೇ ವೇಳೆ ಪಕ್ಷದ ರಾಷ್ಟ್ರಾಧ್ಯಕ್ಷ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದಲ್ಲೇ ಭಿನ್ನಮತ ಕಾಣಿಸಿಕೊಂಡಿದೆ ಎನ್ನುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣವಾಗಿದ್ದು ಎಚ್.ಡಿ.ರೇವಣ್ಣ ಅವರು ಶುಕ್ರವಾರ ನಡೆಸಿರುವ ಪತ್ರಿಕಾ ಗೋಷ್ಠಿ.
ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ ಪುತ್ರ ಪ್ರಜ್ವಲ್ ಸ್ಪರ್ಧೆ ಕುರಿತು ಪ್ರಶ್ನಿಸಿದಾಗ ‘ನಾನೇ ಟಿಕೇಟ್ಗಾಗಿ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಬಳಿ ಅರ್ಜಿ ಹಾಕಿದ್ದೇನೆ. ಇನ್ನು ಅವನ ಸ್ಪರ್ಧೆ ಬಗ್ಗೆ ನಾನೇನು ಹೇಳಲಿ. ಪ್ರಜ್ವಲ್ ಪಕ್ಷದ ಕಾರ್ಯಕರ್ತ. ಅವನು ಯಾರು ಅಭ್ಯರ್ಥಿಯಾಗುತ್ತಾರೋ ಅವರನ್ನು ಗೆಲ್ಲಿಸಲು ಪ್ರಯತ್ನಪಡುತ್ತಾನೆ. ನಾನು ಬೇಕಾದರೂ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ದ’ ಎಂದು ಹತಾಶೆಯ ನುಡಿಗಳನ್ನಾಡಿದರು.
‘ನಾವೇನು ದೇವೇಗೌಡ್ರಿಗೆ ರಾಜಕೀಯ ಮಾಡುವುದು ಕಲಿಸಬೇಕಾಗಿಲ್ಲ’ ಎಂದ ರೇವಣ್ಣ , ‘ಕಳೆದ ಚುನಾವಣೆಯಲ್ಲೇ ಪತ್ನಿ ಭವಾನಿಗೆ ಟಿಕೇಟ್ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಟಿಕೇಟ್ ಸಿಕ್ತಾ’ ಎಂದು ಪತ್ರಕರ್ತರನ್ನೇ ಪ್ರಶ್ನಿಸಿದರು.
ರಾಜಕೀಯ ಜೀವನದಲ್ಲಿ ದೇವಗೌಡ್ರ ಜೊತೆ ಇರ್ತೀನಿ , ಅವ್ರು ಇಲ್ದೆ ಹೊದ್ರೆ ಮನೆಲೇ ಇರ್ತೀನಿ ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!