ಪುನರುಜ್ಜೀವನಕ್ಕೆ ರಾಷ್ಟ್ರೀಯ ಜಲನೀತಿ ಅತ್ಯಗತ್ಯ
Team Udayavani, Sep 9, 2017, 7:00 AM IST
ಮೈಸೂರು: ನದಿ ನೀರು ಹಂಚಿಕೆಗಾಗಿ ರಾಜ್ಯ-ರಾಜ್ಯಗಳ ನಡುವೆ ನಡೆಯುತ್ತಿರುವ ಜಗಳ ತಪ್ಪಿಸಲು, ನದಿಗಳನ್ನು ರಕ್ಷಿಸುವುದೊಂದೇ ಮಾರ್ಗ. ಇದಕ್ಕಾಗಿ ನದಿಗಳ ಪುನರುಜ್ಜೀವನಕ್ಕಾಗಿ ರಾಷ್ಟ್ರೀಯ ಜಲ ನೀತಿ ರೂಪಿಸಬೇಕಾದ ಅಗತ್ಯವಿದೆ ಎಂದು ಸದ್ಗುರು ಜಗ್ಗಿ ವಾಸುದೇವ್ ಪ್ರತಿಪಾದಿಸಿದರು.
ಕನ್ಯಾಕುಮಾರಿಯಿಂದ ಹಿಮಾಲಯದವರೆಗೆ “ನದಿಗಳನ್ನು ರಕ್ಷಿಸಿ’ ರಾಷ್ಟ್ರಯಾತ್ರೆ ಕೈಗೊಂಡಿರುವ ಸದ್ಗುರು, ಶುಕ್ರವಾರ
ಮೈಸೂರು ತಾಲೂಕಿನ ಮೀನಾಕ್ಷಿಪುರದಲ್ಲಿ ಕೆಆರ್ಎಸ್ ಜಲಾಶಯದ ಹಿನ್ನೀರಿಗೆ ಬಾಗಿನ ಅರ್ಪಿಸಿದ ನಂತರ ನಡೆದ
ಕರ್ನಾಟಕ-ತಮಿಳುನಾಡು ರೈತರನ್ನೊಳಗೊಂಡ ಕಾವೇರಿ ನದಿ ತೀರದ ರೈತರ ಸಭೆಯಲ್ಲಿ ಮಾತನಾಡಿದರು.
ತಮಿಳುನಾಡು ಕೃಷಿ ವಿವಿಯ ವಿಜ್ಞಾನಿಗಳು ಸೇರಿ ಸುಮಾರು 27 ಮಂದಿ ಜಲ ಮತ್ತು ಪರಿಸರ ವಿಜಾnನಿಗಳ ಜತೆ ಚರ್ಚಿಸಿ ನಮ್ಮ ಜಲನೀತಿ ಹೇಗಿರಬೇಕೆಂಬ ಕರಡು ಸಿದಟಛಿಪಡಿಸಲಾಗುತ್ತಿದೆ. ಅಕ್ಟೋಬರ್ 2ರಂದು ದೆಹಲಿಯಲ್ಲಿ
ನಮ್ಮ ರಾಷ್ಟ್ರಯಾತ್ರೆ ಸಂಪನ್ನಗೊಳ್ಳುವ ದಿನ ಕರಡು ನೀತಿಯನ್ನು ಪ್ರಧಾನಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದರು.
ನದಿ ನೀರು ಹಂಚಿಕೊಳ್ಳುವುದಷ್ಟೆ ಜಲ ನೀತಿಯಲ್ಲ. ನದಿಗಳಲ್ಲಿ ಎಷ್ಟು ನೀರು ಇರಬೇಕು ಎಂಬುದು ಕೂಡ ನೀತಿಯೇ ಎಂದು ಪ್ರತಿಪಾದಿಸಿದ ಅವರು, ಕಾವೇರಿ ಕೊಳ್ಳದ ರಾಜ್ಯಗಳ ಜನತೆ ಈ ವಿಷಯದಲ್ಲಿ ಭಾವನಾತ್ಮಕವಾಗಿ ಹೆಚ್ಚು ಮಾತನಾಡುತ್ತಿರುವುದರಿಂದ ಕರ್ನಾಟಕ-ತಮಿಳುನಾಡು ರಾಜ್ಯಗಳಲ್ಲಿ ಜಗಳಗಳಾಗುತ್ತಿವೆ.
ಜಗಳಗಳಾಗುವುದರಿಂದ ರಕ್ತ ಹರಿಯುತ್ತದೆಯೇ ಹೊರತು, ನೀರು ಹರಿಯುವುದಿಲ್ಲ. ನಮಗೆಷ್ಟು- ನಿಮಗೆಷ್ಟು ಅನ್ನುವ
ಬದಲು, 50 ವರ್ಷಗಳ ಹಿಂದೆ ಕಾವೇರಿಯಲ್ಲಿ ಎಷ್ಟು ನೀರಿತ್ತು ಎಂದು ತಿಳಿದುಕೊಂಡರೆ ಜಗಳ ಬರಲ್ಲ. ಇದಕ್ಕಾಗಿ ಕಾವೇರಿ ನದಿ ಪಾತ್ರದ ರೈತರ ಸಂಘ ರಚನೆ ಮಾಡಿ, ನೀರು ಹಂಚಿಕೆ ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು. ಅಣ್ಣ-ತಮ್ಮಂದಿರ ನಡುವೆಯೇ ಆಸ್ತಿಗಾಗಿ ಜಗಳವಾಗುತ್ತೆ. ಕಾವೇರಿಯಲ್ಲಿ ನೀರು ಕಡಿಮೆಯಾಗಿರುವುದರಿಂದ ಕರ್ನಾಟಕ-ತಮಿಳುನಾಡು ಮಧ್ಯೆ ಜಗಳವಾಗುತ್ತಿದೆ. ನದಿಯಲ್ಲಿ ನೀರು ಹೆಚ್ಚು ಹರಿದರೆ ಜಗಳವೇ ಆಗಲ್ಲ ಎಂದರು. ದೇಶದ 16 ರಾಜ್ಯಗಳಲ್ಲಿ ವ್ಯವಸಾಯವೇ ಪ್ರಧಾನವಾಗಿರುವುದರಿಂದ ನದಿಗಳನ್ನು ರಕ್ಷಿಸಿಕೊಳ್ಳಲೇಬೇಕಿದೆ ಎಂದು ಹೇಳಿದರು.
ನದಿಗಳನ್ನು ರಕ್ಷಿಸಿ ಆಂದೋಲನದ ಭಾಗವಾಗಿ ಸಾರ್ವಜನಿಕರು 8000980009ಗೆ ಮಿಸ್ಡ್ ಕಾಲ್ಕೊಡುವ ಮೂಲಕ ಆಂದೋಲನಕ್ಕೆ ಬೆಂಬಲ ಸೂಚಿಸುವಂತೆ ಕೋರಲಾಗಿತ್ತು, ನಮ್ಮ ನಿರೀಕ್ಷೆಗೂ ಮೀರಿ ಸಾರ್ವಜನಿಕರಿಂದ ಪ್ರತಿಕ್ರಿಯೆ ಬರುತ್ತಿದ್ದು, ಪ್ರತಿ ನಿತ್ಯ 2-3 ಲಕ್ಷ ಮಿಸ್ಡ್ಕಾಲ್ ಬರುತ್ತಿದೆ.
– ಸದ್ಗುರು ಜಗ್ಗಿ ವಾಸುದೇವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ