ಹಿರಿಯ ನಟ ಆರ್‌.ಎನ್‌.ಸುದರ್ಶನ್‌ ನಿಧನ


Team Udayavani, Sep 9, 2017, 6:15 AM IST

Sudarshan-2-(3).jpg

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಆರ್‌.ಎನ್‌.ಸುದರ್ಶನ್‌ (78) ಶುಕ್ರವಾರ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಿಲಕನಗರದ ಸಾಗರ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

21ನೇ ವಯಸ್ಸಿಗೆ ಚಿತ್ರರಂಗಕ್ಕೆ ಬಂದ ಸುದರ್ಶನ್‌, 1961ರಲ್ಲಿ ಬಿಡುಗಡೆಯಾದ “ವಿಜಯನಗರದ ವೀರಪುತ್ರ’ ಚಿತ್ರದ ಮೂಲಕ ನಾಯಕರಾಗಿ ನಟಿಸಿದರು. ಈ ಚಿತ್ರದ ವಿಶೇಷತೆಯೆಂದರೆ, ಚಿತ್ರವನ್ನು ಸುದರ್ಶನ್‌ ಅವರ ತಂದೆ ಆರ್‌. ನಾಗೇಂದ್ರ ರಾವ್‌ ನಿರ್ದೇಶಿಸಿ ಒಂದು ಪ್ರಮುಖ ಪಾತ್ರದಲ್ಲಿ ನಟಿಸಿದರೆ, ಅವರ ಸಹೋದರ ಆರ್‌.ಎನ್‌. ಕೃಷ್ಣಪ್ರಸಾದ್‌ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು. ಇನ್ನು ಅವರ ಮತ್ತೂಬ್ಬ ಸಹೋದರರಾದ ಆರ್‌.ಎನ್‌. ಜಯಗೋಪಾಲ್‌ ಹಾಡುಗಳನ್ನು ರಚಿಸಿದ್ದರು. ನಂತರದ ದಿನಗಳಲ್ಲಿ “ಲಕ್ಷ್ಮೀ-ಸರಸ್ವತಿ’, “ಕಾಡಿನ ರಹಸ್ಯ’, “ತಂದೆ-ಮಕ್ಕಳು’, “ನಾಡಿನ ಭಾಗ್ಯ’, “ನಗುವ ಹೂವು’ ಸೇರಿ ಹಲವು ಚಿತ್ರಗಳಲ್ಲಿ ಸುದರ್ಶನ್‌ ನಾಯಕರಾಗಿದ್ದರು.

ಕ್ರಮೇಣ ಪೋಷಕ ಪಾತ್ರಗಳತ್ತ ವಾಲಿದ ಅವರು, “ಪ್ರಚಂಡ ಕುಳ್ಳ’, “ಗುರು ಜಗದ್ಗುರು’, “ಹೃದಯ ಪಲ್ಲವಿ’, “ಸೂಪರ್‌’, “ಮಠ’, “ದಶಮುಖ’, “ಚಾರುಲತಾ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಕೇವಲ ಕನ್ನಡವಷ್ಟೇ ಅಲ್ಲದೇ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದ ಸುದರ್ಶನ್‌ ಅತ್ಯುತ್ತಮ ಗಾಯಕರೂ ಹೌದು. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ “ಶುಭ ಮಂಗಳ’ ಚಿತ್ರದ “ಹೂವೊಂದು ಬಳಿ ಬಂದು …’ಹಾಡು ಅವರ ಸುಶ್ರಾವ್ಯ ಕಂಠದಿಂದ ಮೂಡಿಬಂದದ್ದು ಎನ್ನುವುದು ವಿಶೇಷ. ಕೇವಲ ಸಿನಿಮಾವಷ್ಟೇ ಅಲ್ಲದೇ, ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದ ಸುದರ್ಶನ್‌, ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಇತ್ತೀಚೆಗೆ ಮನೆಯಲ್ಲಿ ಶೌಚಾಲಯಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಬಿದ್ದು, ಮೂಳೆ ಮುರಿದುಕೊಂಡು ಚಿಕಿತ್ಸೆ ಪಡೆಯುತ್ತಿದ್ದರು. ವಯೋಸಹಜ ಖಾಯಿಲೆಗಳಿಂದಾಗಿ ಅವರು ಬಳಲುತ್ತಿದ್ದರು. ಹರಿಶ್ಚಂದ್ರ ಘಾಟ್‌ನ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಮಾಡಲಾಯಿತು. ಸುದರ್ಶನ್‌ ಅವರು ಪತ್ನಿ ಶೈಲಶ್ರೀ, ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಸುದರ್ಶನ್‌ ನನ್ನ  ಒಳ್ಳೆಯ ಸ್ನೇಹಿತ. “ಪ್ರಚಂಡ ಕುಳ್ಳ’ ಚಿತ್ರದ ಯಶಸ್ಸಿನಲ್ಲಿ ಅವನ ಪಾತ್ರವೂ ಮುಖ್ಯವಾಗಿತ್ತು. 
“ಕಿಂಕಿಣಿ ಶರ್ಮ’ ಪಾತ್ರವನ್ನು ಸುದರ್ಶನ್‌ ಗೋಸ್ಕರವೇ ಮಾಡಿದ್ದು. ಆ ಪಾತ್ರ ಅದ್ಭುತವಾಗಿತ್ತು. ಆತನಿಗೆ ನಾಯಕ, ಖಳನಾಯಕ ಎಂಬ ಭಾವನೆ ಇರಲಿಲ್ಲ. ಒಳ್ಳೆಯ ಪಾತ್ರ ಇದ್ದರೆ ಸಾಕಿತ್ತು, ಮಾಡಿಬಿಡುತ್ತಿದ್ದ. ನನ್ನ “ಚಾರುಲತಾ’ ಸಿನಿಮಾದಲ್ಲೂ ನಟಿಸಿದ್ದ. ತಾನೊಬ್ಬ ಕಲಾವಿದನಾಗಿ ಬದುಕಬೇಕೆಂಬ ಆಸೆ ಇಟ್ಟುಕೊಂಡು, ಅಂತೆಯೇ ಬದುಕಿದ. ಒಳ್ಳೆಯ ನಟನನ್ನು ಕಳೆದುಕೊಂಡಂತಾಗಿದೆ.

– ದ್ವಾರಕೀಶ್‌, ನಟ -ನಿರ್ಮಾಪಕ-ನಿರ್ದೇಶಕ

ನಾನು ಕಂಡಂತೆ ಎಂದಿಗೂ ಸುದರ್ಶನ್‌ ಅವರೊಬ್ಬರನ್ನೇ ನೋಡಿಲ್ಲ. ಅವರ ಜತೆ ಪತ್ನಿ ಶೈಲಜಾ ಇರುತ್ತಿದ್ದರು. ಅವರು ಆದರ್ಶ ದಂಪತಿಗಳಾಗಿದ್ದರು. ಸಿನಿಮಾ ಇರಲಿ, ಕಿರುತೆರೆ ಇರಲಿ, ನಟನೆ ಮಾಡೋರು. ಬದುಕನ್ನು ತುಂಬ ಪ್ರೀತಿಸುತ್ತಿದ್ದರು. ತಂದೆಯನ್ನು ಕಳೆದುಕೊಂಡ ನೋವು ನಮಗಾಗಿದೆ. ಅವರ ಕುಟುಂಬವೇ ಕಲಾಕುಟುಂಬವಾಗಿತ್ತು. ಕನ್ನಡ ಚಿತ್ರರಂಗಕ್ಕೆ ಅವರ ಕುಟುಂಬದ ಕೊಡುಗೆ ಅಪಾರ.
– ಜಯಮಾಲ, ನಟಿ

ಸುದರ್ಶನ್‌ ನಾಲ್ಕು ಭಾಷೆಯಲ್ಲಿ ನಟಿಸಿದ್ದ  ಶ್ರೇಷ್ಠ ಕಲಾವಿದ.  “ವಿಜಯನಗರ ವೀರಪುತ್ರ’ ಸಿನಿಮಾದ ನಟನೆ ಇಂದಿಗೂ ಮರೆಯಲು ಸಾಧ್ಯವಿಲ್ಲ. ಇಡೀ ಕುಟುಂಬವೇ ಸಿನಿಮಾರಂಗಕ್ಕೆ ಮೀಸಲಾಗಿತ್ತು. ಅವರು  ನಟನಷ್ಟೇ ಅಲ್ಲ, ಒಳ್ಳೇ ಗಾಯಕರೂ ಹೌದು.  ಕೊನೆಯ ದಿನಗಳವರೆಗೂ ನಟಿಸುತ್ತಲೇ ಇದ್ದರು. ಸರಳವಾಗಿ ಬದುಕಿದ ಸುದರ್ಶನ್‌ ಇಲ್ಲ ಎಂಬ ನೋವು ಕನ್ನಡ ಚಿತ್ರರಂಗಕ್ಕಿದೆ.
– ಸಾ.ರಾ. ಗೋವಿಂದು, ಫಿಲ್ಮ್ ಚೇಂಬರ್‌ ಅಧ್ಯಕ್ಷ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.