ಅಂಬಾರಿ ಹೊರಲು ಭೀಮ ಶಕ್ತನಲ್ಲ


Team Udayavani, Sep 10, 2017, 6:00 AM IST

bheema.jpg

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನ ಆನೆಯ ಉತ್ತರಾಧಿಕಾರಿ ಎಂದು ಬಿಂಬಿಸಲಾಗಿರುವ “ಭೀಮ’ ಅಂಬಾರಿ ಹೊರಬೇಕಾದರೆ ಇನ್ನೂ 15 ವರ್ಷ ಕಾಯಬೇಕು ಎನ್ನುತ್ತಾರೆ ದಸರಾ ಗಜಪಡೆಯ ಮಾವುತರು.

ಆನೆ ದ್ರೋಣನ ನಂತರ 14 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಬಲರಾಮ ಆನೆ ಸುಮಾರು 20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. 1978ರಲ್ಲಿ ಕೊಡಗು ಜಿಲ್ಲೆ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿರುವ ಅಂದಾಜು 59 ವರ್ಷ ವಯಸ್ಸಿನ ಈ ಆನೆಯು ತುಂಬಾ ಬಲಶಾಲಿಯಾಗಿದೆ. ಅಂಬಾರಿ ಆನೆ ಅರ್ಜುನನನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. 2012ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ನಿರ್ವಹಿಸುತ್ತಿದೆ.

57 ವರ್ಷದ ಅರ್ಜುನನಿಗೆ ಕೇವಲ 17 ವರ್ಷ ವಯಸ್ಸಿನ ಭೀಮ ಆನೆ ಉತ್ತರಾಧಿಕಾರಿ, ಮುಂದಿನ ವರ್ಷವೇ ಅಂಬಾರಿ ಹೊತ್ತು ಬಿಡುತ್ತದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಆನೆಚೌಕೂರು ವಲಯದ ಭೀಮನಕಟ್ಟೆ ಬಳಿ ಅನಾಥವಾಗಿದ್ದ ಆನೆ ಮರಿಯನ್ನು ತಂದು ಮತ್ತಿಗೋಡು ಆನೆ ಶಿಬಿರದಲ್ಲಿ ಸಾಕಲಾಗಿದ್ದು, ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಕರೆತರಲಾಗಿದೆ. 

2800 ಕೆ.ಜಿ ತೂಕವಿರುವ ಭೀಮ, 750 ಕೆಜಿ ತೂಕದ ಅಂಬಾರಿ ಹೊರುವುದೆಂದರೇನು? ಅದರ ಮೂಳೆ ಬಲಿಯುವುದು ಬೇಡವಾ? ಎಂದು ಮಾವುತರು ಪ್ರಶ್ನಿಸುತ್ತಾರೆ. ಆನೆಯ ಮೂಳೆ ಬಲಿತು ಅದು ಭಾರ ಹೊರುವಂತಾಗಲು ಕನಿಷ್ಠ 30 ರಿಂದ 35 ವರ್ಷ ವಯಸ್ಸಾದರೂ ಆಗಬೇಕು. ಆ ಲೆಕ್ಕ ನೋಡಿದರೆ ಭೀಮ ಆನೆ ಇನ್ನೂ 15 ವರ್ಷ ಕಾಲ ದಸರಾಗೆ ಬರಬೇಕು. ಆ ನಂತರ ಅಂಬಾರಿ ಆನೆಯ ಉತ್ತರಾಧಿಕಾರಿಯನ್ನಾಗಿ ಯೋಚನೆ ಮಾಡಬಹುದು. ಹಾಗೆ ನೋಡಿದರೆ ಬಲರಾಮ ಇನ್ನೂ ಆರೋಗ್ಯವಾಗಿ ಗಟ್ಟಿ ಮುಟ್ಟಾಗಿ ಇದ್ದಾನೆ ಎನ್ನುತ್ತಾರೆ.

ಕಾಡಾನೆಯನ್ನು ಹಿಡಿದು ತಂದು ಪಳಗಿಸಲು ಕ್ರಾಲ್‌ನಲ್ಲಿ ಹಾಕಿದ ನಂತರ ಸೂಕ್ಷ್ಮ ಜೀವಿಗಳಾದ ಆನೆಗಳು ಬಹುಬೇಗ ಮನುಷ್ಯರ ಮಾತನ್ನು ಕೇಳಲಾರಂಭಿಸುತ್ತವೆ, ಉಟ್‌ ಎಂದರೆ ಎದ್ದೇಳು, ಮತ್‌ ಎಂದರೆ ಮುಂದೆ ಹೋಗು, ದೃಕ್‌ ಎಂದರೆ ಸೊಂಡಿಲು ಎತ್ತಿ ಆರ್ಶೀವಾದ ಮಾಡುವ ಭಾಷಾ ಸೂಚಕಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಆದರೆ, ಮಾವುತರು ಆನೆಗಳ ಜತೆ ಮಾತನಾಡುವುದಕ್ಕಿಂತ ಸನ್ನೆಯ ಮೂಲಕವೇ ಅವುಗಳ ಜತೆ ವ್ಯವಹರಿಸುವುದು ಹೆಚ್ಚು ಎನ್ನುತ್ತಾರೆ ಮಾವುತರು. ಆನೆಯ ಮೇಲೆ ಕುಳಿತ ಮಾವುತ, ಆನೆಯ ಕಿವಿಯ ಹಿಂಭಾಗ ಕಾಲಿನಿಂದ ನೀಡುವ ಸೂಚನೆಗಳನ್ನು ಆನೆ ಚಾಚು ತಪ್ಪದೆ ಪಾಲಿಸುತ್ತದೆ. ಕಿವಿಯ ಹಿಂಭಾಗದ ಕಾಲಿನ ಬೆರಳಿನಿಂದ ಒಂದು ಸುತ್ತು ಹಾಕಿದರೆ, ಆನೆ ತನ್ನ ಶರೀರವನ್ನು ಒಂದು ಸುತ್ತು ಹಾಕಿ ನಿಂತು ಕೊಳ್ಳುತ್ತದೆ. ಹೀಗಾಗಿ ಕಾಲಿನ ಹೆಬ್ಬೆರಳಿನಲ್ಲಿ ಬಲಕ್ಕೆ ಉಜ್ಜಿದರೆ ಬಲಕ್ಕೆ, ಎಡಕ್ಕೆ ಉಜ್ಜಿದರೆ ಎಡಕ್ಕೆ ಚಲಿಸುತ್ತದೆ ಎನ್ನುತ್ತಾರೆ.

ಆನೆಯೇನು ಇಂಥವರೇ ಮಾವುತ- ಕಾವಾಡಿ ಬೇಕು ಎಂದು ಕೇಳುವುದಿಲ್ಲ. ಯಾರೇ ಅದನ್ನು ಮುತುವರ್ಜಿಯಿಂದ ನೋಡಿಕೊಂಡರೂ ಅವರ ಆದೇಶಗಳನ್ನು ಚಾಚೂ ತಪ್ಪದೇ ಪಾಲಿಸುತ್ತದೆ ಎನ್ನುತ್ತಾರೆ.

ಹೀಗಾಗಿ ಅಂಬಾರಿ ಆನೆಯ ಮಾವುತನ ವಿಚಾರದಲ್ಲಿ ವಿನು-ಸಣ್ಣಪ್ಪ (ಮಹೇಶ) ಯಾರು ಮುನ್ನಡೆಸಬೇಕು ಎಂಬ ಪ್ರಶ್ನೆ ಬರುವುದೇ ಇಲ್ಲ. ಹಿಂದೆ ಅಂಬಾರಿ ಆನೆ ದ್ರೋಣ ಇದ್ದಾಗ ಭೋಜ, ಗೋಪಾಲ ಮೊದಲಾದ ಮಾವುತರು 10-12 ವರ್ಷ ಅಂಬಾರಿ ಆನೆಯನ್ನು ಮುನ್ನಡೆಸಿದವರಿದ್ದಾರೆ. ಹೀಗಾಗಿ ಅಂಬಾರಿ ಆನೆಯನ್ನು ಯಾರು ಮುನ್ನಡೆಸಬೇಕು ಎಂಬುದು ದೊಡ್ಡ ವಿಚಾರವೇ ಅಲ್ಲ ಎನ್ನುತ್ತಾರೆ ದಸರಾ ಗಜಪಡೆಯ ಬಹುತೇಕ ಮಾವುತರುಗಳು.

– ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.