ಭುಗಿಲೆದ್ದ ಕೈ ಭಿನ್ನಮತ: ನಾಯಕರ ವಿರುದ್ಧ ಡಿ.ಕೆ.ಸುರೇಶ್ ಕಿಡಿ
Team Udayavani, Sep 20, 2017, 4:20 PM IST
ಬೆಂಗಳೂರು : ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ಸಚಿವ ಡಿ.ಕೆ.ಶಿವಕುಮಾರ್ ಸಹೋದರ, ಸಂಸದ ಡಿ.ಕೆ.ಸುರೇಶ್ ಬುಧವಾರ ಸುದ್ದಿಗೋಷ್ಠಿ ನಡೆಸಿ ಪಕ್ಷದ ನಾಯಕರ ವಿರುದ್ಧವೇ ಕಿಡಿ ಕಾರಿದ್ದಾರೆ.
ಬಿಬಿಎಂಪಿ ಮೇಯರ್ ಆಯ್ಕೆ ವಿಚಾರಕ್ಕೆ ಸಂಬಂಧಿಸಿ ಪಕ್ಷದ ನಾಯಕರ ತೀರ್ಮಾನದ ವಿರುದ್ಧ ಬಹಿರಂಗ ಅಸಮಾಧಾನ ಹೊರ ಹಾಕಿದ ಸುರೇಶ್ ‘ಇದೇ 26 ರಂದು ಮೇಯರ್ ಚುನಾವಣೆ ನಡೆಯಲಿದ್ದು ಪ್ರಬಲ ಅಭ್ಯರ್ಥಿಗಳು ಮೇಯರ್ ಆಗುತ್ತಾರೆ. ಆದರೆ ನಮ್ಮ ಕ್ಷೇತ್ರದ ವ್ಯಾಪ್ತಿಯ ಕೆಲ ಕ್ಷೇತ್ರಗಳ ಅಭಿವೃದ್ಧಿಯೇ ಆಗಿಲ್ಲ, ಸರ್ಕಾರ ಮತ್ತು ಎಲ್ಲಾ ಮೇಯರ್ಗಳು ಈ ಕ್ಷೇತ್ರಗಳನ್ನು ಮರೆತಿದ್ದಾರೆ. ನಮ್ಮ ಕ್ಷೇತ್ರ ವಾಪ್ತಿಯ ಪರಿಶಿಷ್ಟ ಜಾತಿಗೆ ಸೇರಿರುವ ವೇಲು ನಾಯಕ್ ಮತ್ತು ಅಂಜನಪ್ಪ ಇಬ್ಬರ ಪೈಕಿ ಒಬ್ಬರಿಗೆ ಮೇಯರ್ ಸ್ಥಾನ ನೀಡಬೇಕು.ಈ ಬಗ್ಗೆ ಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಿಗೆ ಮನವಿ ಮಾಡುತ್ತೇನೆ’ ಎಂದರು.
ಮೇಯರ್ ಚುನಾವಣೆ ಗೆ ಸಂಬಂಧಿಸಿ ನಮಗೆ ಜವಾಬ್ದಾರಿ ನೀಡಿದರೆ ಜೆಡಿಎಸ್ ನಾಯಕರೊಂದಿಗೆ ನಾವೇ ಮಾತುಕತೆ ನಡೆಸುವುದಾಗಿ ಅಸಮಾಧಾನ ಹೊರಹಾಕಿದರು.
‘ಅತ್ತರೆ ಮಾತ್ರ ಹಾಲು ಕೊಡುವುದು ಅಂದಂಗೆ, ನಾವಾಗೇ ಕೇಳದಿದ್ದರೆ ನಮ್ಮನ್ನು ಗಮನಿಸುವುದೇ ಇಲ್ಲ, ನಮ್ಮ ಸಹನೆಯ ಕಟ್ಟೆ ಒಡೆಯುತ್ತದೆ, ಎಂದು ಕಿಡಿ ಕಾರಿದರು.
ಸುರೇಶ್ ಬೇಡಿಕೆಗೆ ಶಾಸಕ ಮುನಿರತ್ನ ಬೆಂಬಲವನ್ನೂ ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ