ಶಂಭೂಕನ ತಲೆ ಕತ್ತರಿಸಿದ ಜಾತಿವಾದಿ ರಾಮ ದೇವನಲ್ಲ!
Team Udayavani, Sep 26, 2017, 2:42 PM IST
ಮೈಸೂರು : ವಿಚಾರವಾದಿ ಪ್ರೊಫೆಸರ್ ಕೆ.ಎಸ್.ಭಗವಾನ್ ಮತ್ತೆ ಹಿಂದೂ ದೇವರಾದ ರಾಮನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ದಸರಾ ಕವಿಗೋಷ್ಠಿಯಲ್ಲಿ ರಾಮನ ಕುರಿತಾಗಿ ವಿಚಾರ ಪ್ರಸ್ತಾವಿಸಿ”ರಾಮ ದೇವರೆ ಅಲ್ಲ, ನರಮಾನವ. ಕವಿ ವಾಲ್ಮೀಕಿ ರಾಮನನ್ನು ದೇವರು ಎಂದು ಎಲ್ಲೂ ಹೇಳಿಲ್ಲ. ರಾಮ ಜಾತಿ ವಾದಿಯಾಗಿದ್ದು, ಚಾತುರ್ವರ್ಣ ಪದ್ಧತಿಯನ್ನು ಬೆಂಬಲಿಸುತ್ತಿದ್ದ. ತುಂಬು ಗರ್ಭಿಣಿ ಸೀತೆಯನ್ನು ಕಾಡಿಗೆ ಕಳುಹಿಸಿದ. ಬ್ರಾಹ್ಮಣರ ಮಾತು ಕೇಳಿ ರಾಮ ಶಂಭೂಕನ ತಲೆ ಕತ್ತರಿಸಿದ್ದ. ರಾಮನಿಗೆ ಈಗ ದೇವಸ್ಥಾನ ಕಟ್ಟಲು ಹೊರಟಿದ್ದಾರೆ. ನಾವು ಇದನ್ನೆಲ್ಲಾ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ” ಎಂದರು.
ವಾಲ್ಮೀಕಿ ರಾಮಾಯಣದ ಅನೇಕ ಶ್ಲೋಕಗಳನ್ನು ತಮ್ಮ ಭಾಷಣದ ವೇಳೆ ಭಗವಾನ್ ಅವರು ಉಲ್ಲೇಖ ಮಾಡಿದರು.
ಅಂಧರು, ಕಿವುಡರು,ಮಂಗಳಮುಖಿಯರು,ವೃದ್ಧರು, ಅನಾಥಾಶ್ರಮಗಳಿಂದ ಬಂದವರು ಈ ಗೋಷ್ಠಿಯಲ್ಲಿ ಭಾಗಿಯಾಗಿದ್ದರು.
ಏನಿದು ಶಂಭೂಕನ ಕಥೆ ?
ಬ್ರಾಹ್ಮಣನೊಬ್ಬ ತನ್ನ ಮಗನ ಸಾವಿಗೆ ನ್ಯಾಯ ಕೇಳಲು ರಾಮನ ಆಸ್ಥಾನಕ್ಕೆ ಬರುತ್ತಾನೆ. ‘ಎಲೈ ರಾಜನೇ, ನೀನೇನೋ ಅನ್ಯಾಯ ಮಾಡಿರಬೇಕು, ಆದ್ದರಿಂದ ಯಾವ ತಪ್ಪನ್ನೂ ಮಾಡದ ನನ್ನ ಮಗ ಸಾವನ್ನಪ್ಪಿದ್ದಾನೆ’ ಎಂದು ರಾಮನ ವಿರುದ್ಧವೇ ಆರೋಪಿಸುತ್ತಾನೆ.
ಆ ವೇಳೆ ನಾರದಮುನಿಗಳು ರಾಮನಿಗೆ ಬ್ರಾಹ್ಮಣ ವಟುವಿನ ಸಾವಿಗೆ ಶಂಭೂಕನ ತಪಸ್ಸು ಕಾರಣ ಎಂದು ತಿಳಿಸುತ್ತಾರೆ. ತಕ್ಷಣ ರಾಮ ಶಂಭೂಕನಿದ್ದಲ್ಲಿಗೆ ತೆರಳಿ ಅವನ ತಪಸ್ಸಿನ ಕಾರಣ ಕೇಳುತ್ತಾನೆ.
ಇದಕ್ಕುತ್ತರವಾಗಿ ಶಂಭೂಕ ‘ರಾಮ, ನಾನು ಶೂದ್ರ ಕುಟುಂಬದಲ್ಲಿ ಜನಿಸಿದವ. ನನ್ನ ಕಠಿಣ ಪರಿಶ್ರಮದಿಂದ ದೇವತೆಗಳನ್ನು ಮೆಚ್ಚಿಸಿ, ದೇವಲೋಕವನ್ನು ನನ್ನದಾಗಿ ಮಾಡಿಕೊಂಡು ಸಶರೀರಿಯಾಗಿ ಸ್ವರ್ಗವನ್ನು ಪ್ರವೇಶಿಸಬೇಕೆಂದು ಘೋರ ತಪಸ್ಸನ್ನು ಮಾಡುತ್ತಿದ್ದೇನೆ’ ಎನ್ನುತ್ತಾನೆ.
ಅದಕ್ಕೆ ರಾಮ ‘ಅಯ್ಯಾ ನಿನ್ನ ತಪಸ್ಸು, ಪರಿಶ್ರಮ ಒಳ್ಳೆಯದೇ ಆದರೂ, ಅದರ ಹಿಂದಿನ ಕಾರಣ ಅಸಾತ್ವಿಕವಾದದ್ದು’ ಎಂಬ ಕಾರಣ ನೀಡಿ ಅವನ ತಲೆ ಕಡಿಯುತ್ತಾನೆ ಎನ್ನುವುದು ಕಥೆಯಲ್ಲಿ ಉಲ್ಲೇಖವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?