ನಾಲೆಯಲ್ಲಿ ಮುಳುಗಿ ಇಬ್ಬರು ಸಾವು
Team Udayavani, Oct 29, 2017, 6:45 AM IST
ಶಿವಮೊಗ್ಗ: ನೀರು ಕುಡಿಯಲು ನಾಲೆಗೆ ಇಳಿದಿದ್ದ ಕುರಿಗಾಹಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಹೊಳಲೂರು ಸಮೀಪ ಶುಕ್ರವಾರ ಸಂಜೆ ಸಂಭವಿಸಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕು ಹುಲವಳ್ಳಿ ಗ್ರಾಮದ ನರಸಪ್ಪ (15) ಹಾಗೂ ಚಿಕ್ಕೋಡಿ ತಾಲೂಕು ಮೊಳಕಿ ಗ್ರಾಮದ ಮುರಾರಿ (22) ಮೃತಪಟ್ಟವರು.
ಕುರಿ ಮೇಯಿಸಲು ಕುಟುಂಬ ಸದಸ್ಯರೊಂದಿಗೆ ಇಲ್ಲಿಗೆ ಆಗಮಿಸಿದ್ದ ಇವರಿಬ್ಬರೂ ಬಾಯಾರಿಕೆಯಾಗಿದ್ದರಿಂದ ಹತ್ತಿರದಲ್ಲೇ ಹರಿಯುತ್ತಿದ್ದ ತುಂಗಾ ನಾಲೆಗೆ ನೀರು ಕುಡಿಯಲು ತೆರಳಿದ್ದಾರೆ. ಈ ವೇಳೆ ನರಸಪ್ಪ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ. ನೀರಿನಲ್ಲಿ ಮುಳುಗುತ್ತಿದ್ದ ನರಸಪ್ಪನನ್ನು ರಕ್ಷಿಸಲೆಂದು ಮುರಾರಿ ನಾಲೆಗೆ ಇಳಿದಿದ್ದಾರೆ. ಆದರೆ ಹರಿಯುತ್ತಿದ್ದ ನೀರಿನಲ್ಲಿ ಇವರೂ ಸಹ ಮುಳುಗತೊಡಗಿದಾಗ
ದಡದಲ್ಲಿದ್ದ ಇನ್ನಿಬ್ಬರು ಕೂಡಲೆ ರಕ್ಷಣೆಗೆ ಮುಂದಾದರಾದರೂ ಯಾವುದೇ ಪ್ರಯೋಜನವಾಗಿಲ್ಲ.
ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಶವಗಳ ಹುಡುಕಾಟ ನಡೆಸಿದರಾದರೂ
ಪ್ರಯೋಜವಾಗಿರಲಿಲ್ಲ. ಕತ್ತಲು ಆವರಿಸಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಶನಿವಾರ ಬೆಳಗ್ಗೆ ಮತ್ತೆ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನುಹೊರತೆಗೆಯಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…