ಅವಾಚ್ಯ ಪದ ಬಳಸಿದ ಸಚಿವ ಆಂಜನೇಯ!
Team Udayavani, Nov 13, 2017, 6:50 AM IST
ಕೊಪ್ಪಳ: ನಗರದ ಪ್ರವಾಸಿ ಮಂದಿರದಲ್ಲಿ ಚಹ ಕೊಡಲು ವಿಳಂಬ ಮಾಡಿದ್ದಕ್ಕೆ ರೊಚ್ಚಿಗೆದ್ದ ಸಮಾಜ ಕಲ್ಯಾಣ ಇಲಾಖೆ
ಸಚಿವ ಎಚ್.ಆಂಜನೇಯ ಪ್ರವಾಸಿ ಮಂದಿರದ ಸಹಾಯಕರಿಗೆ ಅವಾಚ್ಯ ಶಬ್ದಗಳಿಂದ ಜರಿದು ಕೆಳಮಟ್ಟದ ಭಾಷೆ ಬಳಸಿದ ಪ್ರಸಂಗ ನಡೆಯಿತು.
ಕೊಪ್ಪಳದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ಮೋಚಿಗಾರ ಸಮಾವೇಶದಲ್ಲಿ ಪಾಲ್ಗೊಳ್ಳಲು ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ ಆಗಮಿಸಿದ್ದರು. ಸಚಿವ ಆಂಜನೇಯ ಅವರೂ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿ ನಗರದ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಈ ವೇಳೆ, ಮೀರಾ ಕುಮಾರ ಅವರಿಗೆ ಚಹ ಕೊಡಿ ಎಂದು ಸಚಿವ ಆಂಜನೇಯ ಹೇಳಿದ್ದರು. ಸಹಾಯಕ ಚಹ ತರುವಲ್ಲಿ ವಿಳಂಬ ಮಾಡಿದ್ದಕ್ಕೆ ಸಿಡಿಮಿಡಿಗೊಂಡ ಎಚ್.ಆಂಜನೇಯ, “ಯಾವ ಸೂ..ಮಗ, ಒಬ್ಬೊವನು ಇಲ್ಲಿ ಇಲ್ಲವಲ್ಲ. ಎಲ್ಲಿ ಹೋಗಿದ್ದಾನೆ ಸೂ..ಮಗ’ ಎಂದೆಲ್ಲ ಕೆಳಮಟ್ಟದ ಭಾಷೆಯಲ್ಲಿ ಜರಿದರು. ಕ್ಯಾಮರಾ ಕಣ್ಣು ಬೀಳುತ್ತಿದ್ದಂತೆ ಕ್ಷಮಿಸಿ ಎನ್ನುತ್ತಲೇ ಸಮಾಜದ ಮುಖಂಡರಿಂದ ಹೂವಿನ ಹಾರ ಹಾಕಿಸಿಕೊಳ್ಳುವಲ್ಲಿ ಸಚಿವರು ತಲ್ಲೀನರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ