ಸುವರ್ಣ ವಿಧಾನಸೌಧ: ಮೊದಲ ದಿನ ಖಾಲಿ 


Team Udayavani, Nov 14, 2017, 6:00 AM IST

13BNP-(24).jpg

ಸುವರ್ಣ ವಿಧಾನಸೌಧ, ಬೆಳಗಾವಿ: ಜನರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ, ನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅದಕ್ಕೊಂದು ಪರಿಹಾರದ ರೂಪ ನೀಡುವಂಥ ತಾಣವಾದ ಬೆಳಗಾವಿ ಸುವರ್ಣಸೌಧದಲ್ಲಿ ಹೇಳಲಿಕ್ಕೂ, ಕೇಳಲಿಕ್ಕೂ ಯಾರೂ ಇಲ್ಲದೇ ಚಳಿಗಾಲದ ಅಧಿವೇಶನದ ಮೊದಲ ದಿನವೇ “ವ್ಯರ್ಥಕಲಾಪ’ದ ದೃಶ್ಯ ಕಂಡು ಬಂತು.

ಈಗಾಗಲೇ ಶಾಸಕರ ನಿರಾಸಕ್ತಿ ಈ ಹಿಂದಿನ ಅಧಿವೇಶನಗಳನ್ನು ಗಮನಿಸಿದರೆ ಸಾಬೀತಾಗುತ್ತದೆ. ಆದರೆ ಬೆಂಗಳೂರು ಬಿಟ್ಟು, “ಉತ್ತರ’ದ ಸಮಸ್ಯೆಗಳ ಮೇಲೆಯೇ ಗಮನಹರಿಸಬಹುದಾದ ಸುವರ್ಣಸೌಧದ ಕಲಾಪಕ್ಕೂ ಬಾರದೇ ಜನಪ್ರತಿನಿಧಿಗಳು ತಮ್ಮ ಅಸಡ್ಡೆಯ ಪ್ರದರ್ಶನ ನಡೆಸಿದರು. ಕೆಳಮನೆಯಲ್ಲಿ ಶಾಸಕರ ಕೊರತೆ ಕಂಡು ಬಂದರೆ, ಮೇಲ್ಮನೆಯಲ್ಲಿ ಸಚಿವರೇ ಇರಲಿಲ್ಲ!

ಬೆಳಗ್ಗೆ 11ಕ್ಕೆ ಕಲಾಪ ಆರಂಭಕ್ಕೆ ನಿಗದಿಯಾಗಿದ್ದು, 10.45ರಿಂದಲೇ ಬೆಲ್‌ ಹೊಡೆಯಲು ಶುರು ಮಾಡಲಾಯಿತು. ಆದರೆ ಯಾರೊಬ್ಬ ಶಾಸಕರೂ ಸದನದಲ್ಲಿ ಉಪಸ್ಥಿತರಿರಲೇ ಇಲ್ಲ. 11 ಗಂಟೆಗೆ ಸದನ ಆರಂಭವಾದಾಗ ಕಾಂಗ್ರೆಸ್‌ನ 10, ಬಿಜೆಪಿಯ 7 ಮತ್ತು ಜೆಡಿಎಸ್‌ನ 3 ಸದಸ್ಯರು ಮಾತ್ರ ಉಪಸ್ಥಿತರಿದ್ದರು. ಮೊದಲ ದಿನ ಸಂತಾಪಕ್ಕೆ ಕಾರ್ಯಕಲಾಪ ಸೀಮಿತವಾಗಿತ್ತಾದರೂ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲೂ ಸಹ ಸದಸ್ಯರು ಇರಲಿಲ್ಲ. ಬಳಿಕ, ಕೋರಂ ಕೊರತೆಯಿಂದ ಐದು ನಿಮಿಷಗಳ ವರೆಗೆ ಸದನವನ್ನು ಸ್ಪೀಕರ್‌ ಕೋಳಿವಾಡ ಅವರು ಮುಂದೂಡಿದರು.

ಈ ಬಾರಿ ಇದೇ ವಿಶೇಷ. ಅಧಿವೇಶನದ ಮೊದಲ ದಿನದ ಆರಂಭದ ಕಲಾಪವೇ ಕೋರಂ ಕೊರತೆಯಿಂದ ಮುಂದೂಡಲ್ಪಟ್ಟಿತು. ಇತ್ತೀಚಿನ ವರ್ಷಗಳಲ್ಲಿ ಮೊದಲ ದಿನವೇ ಕೋರಂ ಕೊರತೆಯಿಂದ ಕಲಾಪ ಮುಂದೂಡುವಂತಾಗಿದ್ದು ಕೂಡ ಒಂದು ದಾಖಲೆ!

ಐದು ನಿಮಿಷಗಳ ನಂತರ ಸದನ ಆರಂಭವಾದಾಗ ಉಪಸ್ಥಿತರಿದ್ದ ಸದಸ್ಯರ ಸಂಖ್ಯೆ 30. ಕಡೆಗೆ ಕೋರಂ ಸಮಸ್ಯೆ ಬಾರದ ಕಾರಣ ಕಲಾಪವನ್ನು ಆರಂಭಿಸಲಾಯಿತು. ಮಧ್ಯಾಹ್ನ 12 ಗಂಟೆ ವೇಳೆಗೆ ಸದನದಲ್ಲಿ 55 ಸದಸ್ಯರು ಉಪಸ್ಥಿತರಿದ್ದರು. ಸಂತಾಪ ನಿರ್ಣಯದ ಸಂದರ್ಭದಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಸದನದಲ್ಲಿ ಉಪಸ್ಥಿತರಿದ್ದ ಸದಸ್ಯರ ಸಂಖ್ಯೆ 130ಕ್ಕೆ ತಲುಪಿತ್ತು. ಕಾಂಗ್ರೆಸ್‌ನ 90, ಬಿಜೆಪಿಯ 25, ಜೆಡಿಎಸ್‌ನ 12, ಎಂಇಎಸ್‌ನ ಇಬ್ಬರು ಸದಸ್ಯರ ಜತೆಗೆ ರೈತಸಂಘದ ಪುಟ್ಟಣ್ಣಯ್ಯ ಸದನದಲ್ಲಿ ಉಪಸ್ಥಿತರಿದ್ದರು.

ಬಿಜೆಪಿಯ ಪರಿವರ್ತನಾ ಯಾತ್ರೆ ಹಿನ್ನೆಲೆಯಲ್ಲಿ ಆ ಪಕ್ಷದ ಕೆಲವು ಶಾಸಕರು ಗೈರು ಹಾಜರಾಗಿದ್ದರು. ಉಳಿದಂತೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿಯಿಂದ ಒಟ್ಟು 100 ಕ್ಕೂ ಹೆಚ್ಚು ಸದಸ್ಯರು ಬೆಳಗಾವಿಗೆ ಬಂದರೂ ಅಧಿವೇಶನದತ್ತ ತಲೆ ಹಾಕಲಿಲ್ಲ. ಈಗಾಗಲೇ ಶಾಸಕರು ಚುನಾವಣೆ ಮೂಡ್‌ಗೆ ತೆರಳಿರುವುದರಿಂದ ಅಧಿವೇಶನದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಹಿರಿಯ ಶಾಸಕರೊಬ್ಬರು ವಿಧಾನಸಭೆ ಮೊಗಸಾಲೆಯಲ್ಲಿ ಚಟಾಕಿ ಹಾರಿಸಿದರು.

ವಿಧಾನಸಭೆಯಲ್ಲಿ ಶಾಸಕರ ಟೈಮಿಂಗ್ಸ್‌
ಬೆಳಗ್ಗೆ 11 ಗಂಟೆ: 20 ಸದಸ್ಯರು
ಬೆಳಗ್ಗೆ 11.10: 30 ಸದಸ್ಯರು
ಮಧ್ಯಾಹ್ನ 12 ಗಂಟೆ: 55 ಸದಸ್ಯರು
ಮಧ್ಯಾಹ್ನ 1 ಗಂಟೆ: 130 ಸದಸ್ಯರು

ಮೇಲ್ಮನೆಯಲ್ಲಿ ಬಿಜೆಪಿ ಸಭಾತ್ಯಾಗ
ವಿಧಾನ ಪರಿಷತ್‌:
ಸದನದಲ್ಲಿ ಕಡ್ಡಾಯವಾಗಿ ಹಾಜರಿರಬೇಕಾಗಿದ್ದ ಸಚಿವರ ಪೈಕಿ ಬಹುತೇಕರು ಗೈರು ಹಾಜರಾಗಿದ್ದರಿಂದ ಸರ್ಕಾರದ ವಿರುದ್ಧ ಆಕ್ರೋಶಗೊಂಡು ಪ್ರತಿಪಕ್ಷ ಬಿಜೆಪಿ ಸಭಾತ್ಯಾಗ ನಡೆಸಿದ ಪ್ರಸಂಗ ಸೋಮವಾರ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ, ಸದನದಲ್ಲಿ ಸೋಮವಾರ ಕಡ್ಡಾಯವಾಗಿ ಹಾಜರಿರಬೇಕಿದ್ದ ಸಚಿವರ ಪಟ್ಟಿಯನ್ನು ಪ್ರದರ್ಶಿಸಿ, ಸಚಿವರ ಹೆಸರುಗಳನ್ನು ಉಲ್ಲೇಖೀಸಿ ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರಗಳು, ಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕು ಎಂದು ಸರ್ಕಾರ ಅಧಿವೇಶನ ನಡೆಸುತ್ತಿದೆ.

ಆದರೆ, ಇಲ್ಲಿ ಸಚಿವರೇ ಇಲ್ಲ. ನಾವು ಯಾರಿಗೆ ಹೇಳಬೇಕು. ಸಚಿವರೇ ಇಲ್ಲ ಎಂದರೆ ನಾವ್ಯಾಕೆ ಸದನಕ್ಕೆ ಬರಬೇಕು ಎಂದು ಹರಿಹಾಯ್ದರು. ಕೆಲವರು ಇಲ್ಲೇ ಇದ್ದಾರೆ, ಉಳಿದವರು ಬರುತ್ತಾರೆ ಎಂದು ಆಡಳಿತ ಪಕ್ಷದ ಸದಸ್ಯರು ಸಮಜಾಯಿಷಿ ನೀಡಿದರಾದರೂ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಸದಸ್ಯರು ಸದನದಿಂದ ಹೊರನಡೆದರು.

ಸೋಮವಾರದ ಕಾರ್ಯಸೂಚಿ ಪಟ್ಟಿಯಂತೆ ಸದನದಲ್ಲಿ ಕಡ್ಡಾಯವಾಗಿ ಹಾಜರಿದ್ದು, ಉತ್ತರಿಸಬೇಕಾದ ಸಚಿವರ ಪಟ್ಟಿಯಲ್ಲಿ ರಮೇಶ್‌ಕುಮಾರ್‌, ಆಂಜನೇಯ, ಯು.ಟಿ.ಖಾದರ್‌, ಉಮಾಶ್ರಿ, ಡಾ.ಶರಣಪ್ರಕಾಶ್‌ ಪಾಟೀಲ್‌, ಎಂ.ಆರ್‌.ಸೀತಾರಾಂ, ಪ್ರಿಯಾಂಕ್‌ ಖರ್ಗೆ, ರೋಷನ್‌ ಬೇಗ್‌, ತನ್ವಿರ್‌ ಸೇs…, ರಮೇಶ್‌ ಜಾರಕಿಹೊಳಿ, ವಿನಯ್‌ ಕುಲಕರ್ಣಿ, ಎ.ಮಂಜು, ರುದ್ರಪ್ಪ ಲಮಾಣಿ, ಈಶ್ವರ್‌ ಖಂಡ್ರೆ, ಎಚ್‌.ಎಂ.ರೇವಣ್ಣ, ಆರ್‌.ಬಿ. ತಿಮ್ಮಾಪುರ ಅವರ ಹೆಸರಿತ್ತು. ಆದರೆ, ಸದನ ಆರಂಭವಾದಾಗ ಆಂಜನೇಯ, ಸೀತಾರಾಂ, ಖಾದರ್‌ ಮಾತ್ರ ಇದ್ದರು.

ಟಾಪ್ ನ್ಯೂಸ್

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

 Delhi: ಬ್ಯಾಂಕ್‌ ಮ್ಯಾನೇಜರ್‌ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

bike

Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

8-uv-fusion

Photography: ನಿಮ್ಮ ಬೊಗಸೆಯಲ್ಲಿ ಇರಲಿ ನೆನಪುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.