ಸೋಮವಾರ ಮಧ್ಯರಾತ್ರಿಯಿಂದ ಸುಜ್ಲಾನ್ ಲಾಕೌಟ್ ಘೋಷಣೆ
Team Udayavani, Nov 14, 2017, 12:35 PM IST
ಪಡುಬಿದ್ರಿ : ಇಲ್ಲಿನ ಸುಜ್ಲಾನ್ ಎನರ್ಜಿ ಘಟಕವನ್ನು ಕಂಪೆನಿಯು ಸೋಮವಾರ ಮಧ್ಯರಾತ್ರಿಯಿಂದ ತನ್ನ ನೌಕರರಿಗೆ ಮುಚ್ಚಲಾಗಿದೆ.
ಕೈಗಾರಿಕಾ ವಿವಾದ ಕಾಯಿದೆ ಸೆ.22 ಉಪ ಸೆ.2ರ ಪ್ರಕಾರ ಲಾಕೌಟ್ ಘೋಷಿಸಲು ಕಂಪೆನಿಯು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.
ಅದರೆ ಕಂಪೆನಿಯು ತನ್ನ ನೌಕರರಿಗೆ ಲಾಕೌಟ್ ಘೋಷಣೆಯ ಯಾವುದೇ ಮುನ್ಸೂಚನೆ ನೀಡಿಲ್ಲವೆಂದು ತಿಳಿದುಬಂದಿದೆ. ಸುಜ್ಲಾನ್ ಕಂಪೆನಿಯು ತನ್ನ ಪಡುಬಿದ್ರಿ ಘಟಕದಲ್ಲಿ ಗಾಳಿ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಬೇಕಾಗುವ ರೆಕ್ಕೆಗಳನ್ನು ಉತ್ಪಾದಿಸುತ್ತಿತ್ತು.
ಕಂಪೆನಿಯು ತಾನು ಲಾಕೌಟ್ ಘೋಷಿಸಲು ನೌಕರರ ದುರ್ವರ್ತನೆ ಮತ್ತು ವಿಧ್ವಂಸಕ ಕೃತ್ಯಗಳೇ ಕಾರಣ ಎಂದು ಹೇಳಿದೆ. ಇದರಿಂದ ತನಗೆ ಅಪಾರ ನಾಶ ನಷ್ಟ ಉಂಟಾಗಿದೆ ಎಂದು ಹೇಳಿದೆ.
ಸೋಮವಾರ ರಾತ್ರಿ ಪಾಳಿ ನೌಕರರನ್ನು ಇದ್ದಕ್ಕಿದ್ದಂತೆಯೇ ಕಂಪೆನಿಯ ಆವರಣದಿಂದ ಹೊರಕಳಿಸಲಾಯಿತು. ಪರಿಣಾಮವಾಗಿ 326 ಕೆಲಸಗಾರರು ಸೇರಿದಂತೆ ಒಟ್ಟು 600 ಕಾರ್ಮಿಕರು ತಮ್ಮ ಉದ್ಯೋಗವನ್ನು ಕಳೆದು ಕೊಂಡರು. ಮಂಗಳವಾರ ಬೆಳಗ್ಗಿನಿಂದ ಭಾರೀ ಸಂಖ್ಯೆಯ ಕಾರ್ಮಿಕರು ಕಂಪೆನಿಯ ಪ್ರಮುಖ ದ್ವಾರದ ಮುಂದೆ ಜಮಾಯಿಸಿದರು.
ಎರಡು ವಾರಗಳ ಹಿಂದೆ ಕಂಪೆನಿಯ ಆವರಣದಲ್ಲಿ ಧರಣಿ ನಡೆಸಿದ್ದರು. ಅವರನ್ನು ಕೂಡಲೇ ತೆರವುಗೊಳಿಸಲಾಗಿ ಯಾವುದೇ ಮುನ್ಸೂಚನೆ ನೀಡದೆ ಅವರನ್ನು ಉದ್ಯೋಗದಿಂದ ತೆಗೆದುಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ