ಲಿಂಗಾಯತರಿಗೆ ಮೋಸವಾದ್ರೆ ವಿಧಾನಸಭೆಯಿಂದ ಆಚೆ ಹಾಕ್ತೇವೆ!
Team Udayavani, Nov 19, 2017, 4:00 PM IST
ಬೆಂಗಳೂರು: ಪ್ರತೇಕ ಲಿಂಗಾಯತ ಧರ್ಮಕ್ಕಾಗಿ ಹೋರಾಟ ತೀವ್ರಗೊಂಡಿದ್ದು, ‘ಲಿಂಗಾಯತರಿಗೆ ಮೋಸ ಮಾಡಿದರೆ ಬ್ರಿಟಿಷರನ್ನು ದೇಶದಿಂದ ಆಚೆ ಹಾಕಿದಂತೆ ವಿಧಾನಸಭೆಯಲ್ಲಿದ್ದವರನ್ನುಆಚೆ ಹಾಕಬೇಕಾಗುತ್ತದೆ’ ಎಂದು ನಟ ಚೇತನ್ ಗುಡುಗಿದ್ದಾರೆ.
ಭಾನುವಾರ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ದಲ್ಲಿ ಚೇತನ್ ವೀರಾವೇಶದ ಮಾತುಗಳನ್ನಾಡಿದರು.
‘ಬೌದ್ಧ ಧರ್ಮ ದಂತೆ ಲಿಂಗಾಯತವೂ ಒಂದು ಶ್ರೇಷ್ಠ ಧರ್ಮ.ನಾನಿಲ್ಲಿ ಲಿಂಗಾಯತನಾಗಿ ಹುಟ್ಟಿದ್ದಕ್ಕೆ ಬಂದಿಲ್ಲ. ಪ್ರಗತಿಪರ ಸಿದ್ದಾಂತದ ಅನುಯಾಯಿಯಾಗಿ ಬಂದಿದ್ದೇನೆ’ ಎಂದರು.
‘ನನ್ನ ತಂದೆ, ತಾಯಿ ವೀರಶೈವ, ಲಿಂಗಾಯತರು. ಆದರೆ ಅವರು ಯಾವುದೇ ಬೇಧ ಭಾವ ಇಲ್ಲದೆ ಬಸವಣ್ಣನವರ ತತ್ವಗಳನ್ನು ಮೈಗೂಡಿಸಿಕೊಂಡವರು’ ಎಂದರು.
‘ಲಿಂಗಾಯತ ಧರ್ಮದಲ್ಲಿ ತರ್ಕಬದ್ಧವಾದ ಯೋಜನೆ ಇದೆ. ಇಲ್ಲಿ ಬ್ರಾಹ್ಮಣರಿಗೆ ವಿರೋಧವಿಲ್ಲ, ಬ್ರಾಹ್ಮಣ್ಯಕ್ಕೆ ವಿರೋಧವಿದೆ ,ಸಂಘಟನೆಗೆ ವಿರೋಧವಿಲ್ಲ, ಸಂಘಪರಿವಾರಕ್ಕೆ ವಿರೋಧವಿದೆ’ ಎಂದು ಗುಡುಗಿದರು.
‘ನಮ್ಮ ಹೋರಾಟವನ್ನು ಯಾವುದೆ ರಾಜಕೀಯದ ಸ್ವಾರ್ಥ ಸಂಘಟನೆ ಯವರಿಗೆ ಲಾಭವಾಗಲು ಅವಕಾಶ ನೀಡಬಾರದು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ