ಸೋಯಾ ಹಸಿ ಅವರೆಯಾಗಿ ಇನ್ನು ಬಳಕೆಗೆ ರೆಡಿ


Team Udayavani, Nov 20, 2017, 10:23 AM IST

20-5.jpg

ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಬೆಂಗಳೂರು ಕೃಷಿ ವಿವಿ ವಿಜ್ಞಾನಿಗಳು 8 ವರ್ಷಗಳಿಂದ ಸುದೀರ್ಘ‌ ಅಧ್ಯಯನ ನಡೆಸಿ ತರಕಾರಿ “ಸೋಯಾ ಅವರೆ’ಯನ್ನು ಹೊಸದಾಗಿ ಅಭಿವೃದ್ಧಿಪಡಿಸಿದ್ದಾರೆ. 

ಈ ಮೊದಲು ಸೋಯಾ ಅವರೆ ಎಣ್ಣೆಕಾಳಾಗಿ ಮಾತ್ರ ಬಳಕೆಯಲ್ಲಿತ್ತು. ಆದರೆ, ಹಸಿಕಾಯಿ(ತರಕಾರಿ)ಯಾಗಿ ಬಳಕೆ
ಮಾಡುವ ಯಾವುದೇ ತಳಿ ದೇಶದಲ್ಲಿರಲಿಲ್ಲ. ಬೆಂಗಳೂರು ಕೃಷಿ ವಿವಿಯ ವಿಜ್ಞಾನಿಗಳ ಸಂಶೋಧನೆ ಪರಿಣಾಮವಾಗಿ ಈಗ “ಕರುಣೆ’ ತಳಿಯ ತರಕಾರಿ ಸೋಯಾ ಅವರೆಯನ್ನು ಸಹ ಹಸಿಕಾಯಿಯಾಗಿ ಬಳಸಬಹುದಾಗಿದೆ. ತರಕಾರಿಯಂತೆ ಈ ಸೋಯಾ ಅವರೆಯನ್ನು ಹಸಿ ಇರುವಾಗಲೇ ಕಿತ್ತು ಬಳಕೆ ಮಾಡಬಹುದು. ಇದೊಂದು ದ್ವಿದಳ ಬೆಳೆಯಾಗಿದ್ದು, ಶೇ.40 ಸಸಾರಜನಕ ಮತ್ತು ಶೇ.20 ಎಣ್ಣೆ ಅಂಶದಿಂದ ಕೂಡಿದೆ. ಯಾವುದೇ ಕಾಳುಗಳಲ್ಲಿ ಇಷ್ಟು ಪ್ರಮಾಣದ ಸಸಾರಜನಕ  ಮತ್ತು ಎಣ್ಣೆ ಅಂಶ ಇರಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸೋಯಾ ಅವರೆ ಸಂಶೋಧನಾ ವಿಭಾಗ ಹಿರಿಯ ಸಂಶೋಧನಾ ಸಹಾಯಕ ವಿಜ್ಞಾನಿ ಕೆ.ನಟರಾಜ್‌.
ತೈವಾನಿನ ಏಷ್ಯನ್‌ ವೆಜಿಟೇಬಲ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಟ್‌ ಕೌನ್ಸಿಲ್‌ನಿಂದ 9 ವರ್ಷಗಳ ಹಿಂದೆ ಸುಮಾರು 12 ತಳಿಗಳನ್ನು ಕೃಷಿ ವಿವಿ ತರಿಸಿಕೊಂಡಿತ್ತು. ಈ ತಳಿಗಳನ್ನು ಪ್ರಯೋಗಕ್ಕೆ ಒಳಪಡಿಸಿದ ಮೇಲೆ ಸೋಯಾ ಅವರೆ ಇಲ್ಲಿನ ಹವಾಮಾನ ಮತ್ತು ಮಣ್ಣಿಗೆ ತಕ್ಕಂತೆ ಅಭಿವೃದ್ಧಿ ಪಡಿಸಲು ಸಾಧ್ಯವೆಂದು ಅರಿತ ಎಂ.ಸ್ವಾಮಿ ನೇತೃತ್ವದ ವಿಜ್ಞಾನಿಗಳ ತಂಡದ ಎಂ.ಚಂದ್ರಪ್ಪ, ಸಿ.ಮಂಜಾನಾಯಕ್‌, ಜಿ.ಟಿ.ಸಂತೋಷ್‌ಕುಮಾರ್‌, ಎನ್‌.ಸ್ವಾಮಿ, ಎಂ.ಸುಶ್ಮಿತಾ ಅವರು ಸತತ ಎಂಟು ವರ್ಷಗಳ
ಕಾಲ ತರಕಾರಿ ಸೋಯಾ ಅವರೆಯನ್ನು ವಿವಿಧ ಹಂತದಲ್ಲಿ ಸಂಶೋಧನೆಗೆ ಒಳಪಡಿಸಿ ಅಭಿವೃದ್ಧಿಪಡಿಸಿದ್ದಾರೆ. 

ವಿಶ್ರಬೆಳೆಯಾಗಿ ಸೋಯಾ ಅವರೆ
2 ಅಡಿ ಅಂತರದ ತೊಗರಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆಯಬಹುದು. ಇದರಿಂದ ಎಕರೆಗೆ ಸುಮಾರು 4-5 ಕ್ವಿಂಟಾಲ್‌ ತೊಗರಿ, 3 ಕ್ವಿಂಟಾಲ್‌ ಸೋಯಾ ಅವರೆ ಪಡೆಯಬಹುದು. ರಾಗಿಯಲ್ಲಿ ಒಂದೂವರೆ ಅಡಿ ಅಂತರದಲ್ಲಿ ಎರಡು ರಾಗಿ ಸಾಲುಗಳ ಮಧ್ಯೆ ಒಂದು ಸಾಲು ಸೋಯಾ ಅವರೆ ಬೆಳೆದರೆ 6 ಕ್ವಿಂಟಲ್‌ ರಾಗಿ ಮತ್ತು 3 ಕ್ವಿಂಟಲ್‌ ಸೋಯಾ ಅವರೆ ಸಿಗುತ್ತದೆ. ಕಬ್ಬು, ಮುಸುಕಿನ ಜೋಳ, ಭತ್ತದ ಕೂಳೆ ಗದ್ದೆಯಲ್ಲೂ ಮಿಶ್ರಬೆಳೆಯಾಗಿ ಸೋಯಾ ಅವರೆ ಬೆಳೆಯಬಹುದು. 

ಉಚಿತ ಬೀಜ
ಕೃಷಿ ಮೇಳದಲ್ಲಿ ತರಕಾರಿ ಸೋಯಾ ಅವರೆಯನ್ನು ವಿಸ್ತರಿಸುವ ಉದ್ದೇಶದಿಂದ ಸೋಯಾ ಅವರೆ ಸಂಶೋಧನಾ ವಿಭಾಗ ಉಚಿತವಾಗಿ ರೈತರಿಗೆ ಈ ತಳಿಯ ಬೀಜಗಳನ್ನು ವಿತರಿಸಿದೆ. ಆಸಕ್ತ ರೈತರು ಈ ತಳಿ ಬೆಳೆಯಲು ಬಯಸುವುದಾದರೆ ಕೃಷಿ ವಿಜ್ಞಾನಿಗಳು ಮಾಹಿತಿ ನೀಡಲಿ ದ್ದಾರೆ. ತರಕಾರಿ ಸೋಯಾ ಅವರೆ ತಳಿ ಬೀಜ ಮತ್ತು ಮಾಹಿತಿಗೆ ವಿಜ್ಞಾನಿಗಳಾದ ಎಂ.ಚಂದ್ರಪ್ಪ (9986858158), ಸಿ.ಮಂಜಾನಾಯಕ್‌ (9480773978) ಮತ್ತು ಡಾ.ಕೆ. ನಟರಾಜ್‌ (8147129773) ಸಂಪರ್ಕಿಸಬಹುದು. 

ಸಂಪತ್‌ ತರೀಕೆರೆ

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

1-adsad

Gadag; ನಾಲ್ವರ ಬರ್ಬರ ಹತ್ಯೆ ಐವರು ದುಷ್ಕರ್ಮಿಗಳು ಮಾಡಿರುವ ಶಂಕೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.