30 ರೂಪಾಯ್ಗೆ 2ಪ್ಯಾಕೆಟ್ ಸಾರಾಯಿ,ಚಾಕ್ನಾ ಸಿಗ್ತಿತ್ತು
Team Udayavani, Nov 22, 2017, 7:46 AM IST
ವಿಧಾನಸಭೆ: “ಸಾರಾಯಿ ಇದ್ದಾಗ ಎರಡು ಪ್ಯಾಕೆಟ್ ಸಾರಾಯಿ, ಅದಕ್ಕೆ ನೆಂಚಿಕೊಳ್ಳೋದಕ್ಕೆ ಚಾಕ್ನಾ ಸೇರಿ ಎಲ್ಲಾ ಮೂವತ್ತು ರೂಪಾಯಿಗೆ ಮುಗೀತಿತ್ತು. ಆದರೆ, ಈಗ ಎರಡು ಕ್ವಾರ್ಟರ್ಗೆ 170 ರೂಪಾಯಿ ಆಗ್ತಿದೆ.!’
ಪ್ರಶ್ನೋತ್ತರ ವೇಳೆಯಲ್ಲಿ ಮಂಗಳವಾರ ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸಿದಾಗ ಸಿಎಂ ಸಿದ್ದರಾಮಯ್ಯ ಹೇಳಿದ ಈ ಮಾತಿನ ಕುರಿತು ಕೆಲಕಾಲ ಸ್ವಾರಸ್ಯಕರ ಚರ್ಚೆ ನಡೆಯಿತು. ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸಿದ ಬಿಜೆಪಿಯ ಸಿ.ಟಿ.ರವಿ, ನಮ್ಮ
ಸರ್ಕಾರ ಇದ್ದಾಗ ಸಾರಾಯಿ ನಿಷೇಧಿಸಿ ಒಂದು ಹೆಜ್ಜೆ ಮುಂದಿಟ್ಟೆದ್ದವು. ಇದೀಗ ನೀವು ಎರಡು ಹೆಜ್ಜೆ ಮುಂದಿಟ್ಟು ಸಂಪೂರ್ಣ ಮದ್ಯಪಾನ ನಿಷೇಧಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು. ಅದಕ್ಕೆ ಸಿದ್ದರಾಮಯ್ಯ, “ಅಯ್ಯೋ ಸುಮ್ಕಿರಪ್ಪ. ಸಾರಾಯಿ
ಇದ್ದಾಗ 2 ಪ್ಯಾಕೆಟ್ ಸಾರಾಯಿ, ನೆಂಚಿಳ್ಳೋದಕ್ಕೆ ಚಾಕಾ¡ ಸೇರಿ ಎಲ್ಲಾ ಮೂವತ್ತು ರೂಪಾಯಿಗೇ ಮುಗೀತಿತ್ತು. ಈಗ ಎರಡು ಕ್ವಾರ್ಟರ್ಗೆ 170 ರೂ. ಬೇಕಾಗಿದೆ. ನೀವು ಸಾರಾಯಿ ನಿಷೇಧಿಸಿದ್ದರಿಂದ ಈಗ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡುವಂತಾಗಿದೆ ‘ ಎಂದರು.
ಆಗ ಸಿ.ಟಿ.ರವಿ, “ಆಯ್ತು ಹಾಗಾದ್ರೆ. ನೀವು ಮತ್ತೆ ಸಾರಾಯಿ ಆರಂಭ ಮಾಡ್ತಿರಾ ಹೇಳಿಬಿಡಿ’ ಎಂದು ಕಾಲೆಳೆದರೆ, ಬಿಜೆಪಿಯ ಸುನೀಲ್ಕುಮಾರ್, ಎಲ್ಲಾ ಭಾಗ್ಯ ಕೊಟ್ಟಿದ್ದಿರಿ ಸಾರಾಯಿ ಭಾಗ್ಯಾನೂ ಕೊಟ್ಟು ಬಿಡಿ ಕಿಚಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ಎಂಬಂತೆ
ಸಿದ್ದರಾಮಯ್ಯ, “ಆಯ್ತು ಸುಮ್ಮನಿರ್ರಿ, ಮಹಾತ್ಮ ಗಾಂಧಿ ಹುಟ್ಟಿದ ಗುಜರಾತ್ನಲ್ಲಿ ಬಿಜೆಪಿ ಸರ್ಕಾರವೇ ಇದೆಯಲ್ಲಾ? ಅಲ್ಲಿ ಮದ್ಯಪಾನ ನಿಷೇಧ ಮಾಡಿದ್ದೀರಾ’ ಎಂದು ಬಿಜೆಪಿಯವರ ಬಾಯಿ ಮುಚ್ಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ