ಪಡಿತರಕ್ಕಾಗಿ ತಾಸುಗಟ್ಟಲೆ ನಡಿಗೆ!
Team Udayavani, Dec 9, 2017, 8:59 AM IST
ಆಳಂದ(ಕಲಬುರಗಿ): ಆಧುನಿಕ ಯುಗದಲ್ಲಿ ಬೊಜ್ಜು ಕರಗಿಸಲು ಜನತೆ ನಾಲ್ಕಾರು ಕಿ.ಮೀ. ನಡೆಯುವುದು ವಾಡಿಕೆ. ಆದರೆ, ತಾಲೂಕಿನ ಕೊಟ್ಟರಗಾ ಗ್ರಾಮದ ಜನತೆ ಬದುಕು ಸಾಗಿಸುವ ಸಲುವಾಗಿ ಪಡಿತರ ತರಲು ನಾಲ್ಕು ಕಿ.ಮೀ. ನಡೆದು ಹೋಗಿ ಹತ್ತಾರು ಕೆಜಿ ಪಡಿತರ ಹೊತ್ತು ತರುತ್ತಾರೆ! ಆಶ್ಚರ್ಯವಾದರೂ ಇದು ಸತ್ಯ. ಬಡವರಿಗೆ ಅನುಕೂಲವಾಗಲಿ ಎಂದು ಸರ್ಕಾರ ಕೈಗೆಟಕುವ ದರದಲ್ಲಿ ಪಡಿತರ ಅಂಗಡಿಗಳಲ್ಲಿ ಸಕ್ಕರೆ, ಅಕ್ಕಿ, ಗೋಧಿ , ಬೇಳೆ, ಎಣ್ಣೆ ವಿತರಿಸುತ್ತದೆ. ಊರಲ್ಲಿಯೇ ಪಡಿತರ ಅಂಗಡಿ ಇದ್ದರೆ ಸಲೀಸಾಗಿ ಪಡಿತರ ಮನೆಗೆ ತರಬಹುದು. ಆದರೆ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದಿರುವ ಕೊಟ್ಟರಗಾ ಗ್ರಾಮಸ್ಥರು ಶ್ರೀಚಂದ್ ಗ್ರಾಮಕ್ಕೆ ಹೋಗಿ ಪಡಿತರ ತರುತ್ತಿದ್ದಾರೆ.
ವಾಹನಗಳ ಮೂಲಕ ಶ್ರೀಚಂದ್ ಗ್ರಾಮಕ್ಕೆ ಹೋಗಬೇಕಾದರೆ ಸುತ್ತಿ ಬಳಸಿ ಸುಮಾರು 200ರೂ.ಗಳಷ್ಟು ಖರ್ಚಾಗುತ್ತಿದೆ. ಆದರೆ, ಕಗ್ಗಾಡಿನಲ್ಲಿ 4 ಕಿ.ಮೀ. ಕಚ್ಛಾ ರಸ್ತೆಗಿಂತಲೂ ಹದಗೆಟ್ಟ ದಾರಿ ಮೂಲಕ ಕಾಲ್ನಡಿಗೆಯಲ್ಲೇ ಹೋಗಿ ಪಡಿತರ ತರುತ್ತಿದ್ದಾರೆ.
ಏಕೆ ಈ ಸಮಸ್ಯೆ?: ಸುಮಾರು 700 ಜನಸಂಖ್ಯೆ ಇರುವ ಕೊಟ್ಟರಗಾ ಗ್ರಾಮದಲ್ಲಿ ಕಡಿಮೆ ಪಡಿತರ ಕಾರ್ಡ್ಗಳಿವೆ. ಈ ಗ್ರಾಮಕ್ಕೆ ಪ್ರತ್ಯೇಕವಾದ ನ್ಯಾಯಬೆಲೆ ಅಂಗಡಿಯಿಲ್ಲ. ಹೀಗಾಗಿ ಪಕ್ಕದ ಶ್ರೀಚಂದ್ ಗ್ರಾಮಕ್ಕೆ ಹೋಗುವ ಅನಿವಾರ್ಯತೆಯಿದೆ. ಅನೇಕ
ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಯವರು ಗ್ರಾಮಕ್ಕೆ ಬಂದು ಪಡಿತರ ಧಾನ್ಯ ವಿತರಿಸುತ್ತಿದ್ದರು. ಇತ್ತೀಚಿನ ಕಾನೂನುಗಳಿಂದ ಅವರು ಗ್ರಾಮಕ್ಕೆ ಬರುವುದನ್ನು ಸ್ಥಗಿತಗೊಳಿಸಿದ್ದಾರೆ. ಯಾವುದೇ ಗ್ರಾಮದಲ್ಲಿ ಪಡಿತರ ಅಂಗಡಿ ಇರಬೇಕಾದರೆ ಕನಿಷ್ಠ 500 ಕಾರ್ಡ್ಗಳು ಇರಬೇಕು. ಕೊಟ್ಟರಗಾದಲ್ಲಿ 150 ಕಾರ್ಡ್ಗಳು ಇರುವುದರಿಂದ ನ್ಯಾಯಬೆಲೆ ಅಂಗಡಿ ಸ್ಥಾಪಿಸಿಲ್ಲ.
ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ