ರಂಗಕರ್ಮಿ ಹೆಗ್ಗೋಡು ಪ್ರಸನ್ನಗೆ ಜೀವಮಾನ ಗೌರವ ಪುರಸ್ಕಾರ
Team Udayavani, Dec 12, 2017, 6:30 AM IST
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿಯ 2017ನೇ ಸಾಲಿನ ಪ್ರಶಸ್ತಿಗಳನ್ನು ಘೋಷಿಸಿದ್ದು, ಜೀವಮಾನದ ಸಾಧನೆಯ ಪುರಸ್ಕಾರಕ್ಕಾಗಿ ಹಿರಿಯ ರಂಗಕರ್ಮಿ ಹೆಗ್ಗೋಡು ಪ್ರಸನ್ನ ಪಾತ್ರರಾಗಿದ್ದಾರೆ. ಚಲನಚಿತ್ರ ನಟ, ರಂಗ ನಿರ್ದೇಶಕ ಮಂಡ್ಯ ರಮೇಶ್ ಸೇರಿ 25 ರಂಗಕರ್ಮಿಗಳಿಗೆ ವಾರ್ಷಿಕ ಪ್ರಶಸ್ತಿ ಲಭ್ಯವಾಗಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಪ್ರಕಟಿಸಿದ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜೆ.ಲೋಕೇಶ್, ಗುರುವಾರ ನಡೆದ ನಾಟಕ ಅಕಾಡೆಮಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ರಂಗಕರ್ಮಿ ಹೆಗ್ಗೊàಡು ಪ್ರಸನ್ನ ಅವರನ್ನು ಅಕಾಡೆಮಿಯ 2017ನೇ ಸಾಲಿನ ಜೀವಮಾನ ಗೌರವ ಪ್ರಶಸ್ತಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 50 ಸಾವಿರ ರೂ. ನಗದನ್ನೊಳಗೊಂಡಿದೆ ಎಂದು ತಿಳಿಸಿದರು. ವಾರ್ಷಿಕ ರಂಗ ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ.
ವಾರ್ಷಿಕ ರಂಗಪ್ರಶಸ್ತಿ
ಮಂಡ್ಯ ರಮೇಶ್ (ನಟ, ನಿರ್ದೇಶಕ-ಮೈಸೂರು), ಎಸ್.ಎಸ್.ಗಾಯಿತ್ರಿ (ನಟಿ, ಪೌರಾಣಿಕ), ಕೃಷ್ಣಮೂರ್ತಿ ಕವತ್ತಾರು (ನಟ, ನಿರ್ದೇಶಕ -ದಕ್ಷಿಣ ಕನ್ನಡ), ಕೆ.ರಾಮಕೃಷ್ಣಯ್ಯ (ನಟ, ಪ್ರಾಧ್ಯಾಪಕ-ಚಿಕ್ಕಬಳ್ಳಾಪುರ), ನಾಗಿಣಿ ಭರಣ (ವಸ್ತ್ರವಿನ್ಯಾಸಕಿ-ಬೆಂಗಳೂರು), ಎಲ್.ಎನ್.ಮುಕುಂದರಾಜ್ (ಸಂಘಟಕ, ನಾಟಕಕಾರ), ನಾಗೇಶ್ ಕಶ್ಯಪ್ (ನಟ, ನಿರ್ದೇಶಕ), ಕೆ.ರೇವಣ್ಣ (ನಟ, ಸಂಘಟಕ), ಕಮಲ ವಿ.ರಾವ್ (ನೇಪಥ್ಯ, ವಸ್ತ್ರವಿನ್ಯಾಸಕಿ), ದಯಾನಂದ ಶೆಟ್ಟಿ (ವೃತ್ತಿ ರಂಗಭೂಮಿ -ಉಡುಪಿ), ಭೋಗ ನರಸಿಂಹ (ವೃತ್ತಿ ರಂಗಭೂಮಿ -ತುಮಕೂರು), ಮರಿಯಮ್ಮನಹಳ್ಳಿಯ ಡಿ.ಹನುಮಕ್ಕ (ವೃತ್ತಿ, ಪೌರಾಣಿಕ, ಹವ್ಯಾಸಿ ನಟಿ), ಶಾರದ ಅರವಿಂದ ರಾಸೂರು (ವೃತ್ತಿ ರಂಗಭೂಮಿ, ನಟಿ -ಬಾಗಲಕೋಟೆ), ರಂಗಪ್ಪ ಲ.ಕಟಗೇರಿ (ಅಣ್ಣಪ್ಪ) (ವೃತ್ತಿ ರಂಗಭೂಮಿ, ನಟ), ಉಲಿವಾಲ ಮೋಹನ್ಕುಮಾರ್ (ನಟ, ಸಂಘಟಕ-ಹಾಸನ), ಗುರುನಾಥ್ ಬಿ.ಹೂಗಾರ್ (ನಟ, ನೇಪಥ್ಯ – ಕಲಬುರಗಿ), ಎಂ.ಪಂಪಣ್ಣ ಕೊಗಳಿ (ವೃತ್ತಿರಂಗಭೂಮಿ, ನಿರ್ದೇಶಕ -), ವೆಂಕಟೇಶ್ ಅಲ್ಕೋಡ್ (ರಂಗಸಂಗೀತ -ರಾಯಚೂರು), ಮಹದೇವ ಎಂ.ಗುಟಿÉ (ಪ್ರಸಿದ್ಧ ಸ್ತ್ರೀ ಪಾತ್ರಧಾರಿ ನಟ -ಜಮಖಂಡಿ), ಚಂದ್ರಶೇಖರ ಜಿಗಜಿನ್ನಿ (ನಟ, ನಿರ್ದೇಶಕ – ಧಾರವಾಡ), ಸುರೇಖಾ ತಾಳೀಕೋಟೆ (ವೃತ್ತಿ ರಂಗಭೂಮಿ ನಟಿ -ವಿಜಯಪುರ), ಬಿ.ರವಿಕುಮಾರ್ (ನಟ, ನಿರ್ದೇಶಕ -ಚಿಕ್ಕಮಗಳೂರು), ಎಸ್.ಸೋಮಶೇಖರಯ್ಯ (ವೃತ್ತಿ ರಂಗಭೂಮಿ, ನಟ -ಮಂಡ್ಯ), ಕಲ್ಕರೆ ನರಸಿಂಹಮೂರ್ತಿ (ಪೌರಾಣಿಕ, ಹಾರ್ಮೋನಿಯಂ -ತುಮಕೂರು), ಮಂಚೇಗೌಡ (ನೇಪಥ್ಯ -ರಾಮನಗರ).
ದತ್ತಿ ಪ್ರಶಸ್ತಿಗಳು
ಕಲ್ಚರ್ ಕಾಮಿಡಿಯನ್ ಮಾಸ್ಟರ್ ಕೆ.ಹಿರಣ್ಣಯ್ಯ ದತ್ತಿ ಪ್ರಶಸ್ತಿಗೆ ಹಾಸನದ ನಟ ಚೌಡಪ್ಪ ದಾಸ್, ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪ್ರಶಸ್ತಿಗೆ ರಂಗ ಧಾರವಾಡದ ನಿರ್ದೇಶಕ ಬಸವರಾಜ ಬೆಂಗೇರಿ ಅವರು ಆಯ್ಕೆಯಾಗಿದ್ದಾರೆ.
ಬಾಗಲಕೋಟೆಯ ವೃತ್ತಿರಂಗಭೂಮಿ ನಟಿ ಮನೋರಂಜನ ಸಿಂಧೆ ಅವರಿಗೆ ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪ್ರಶಸ್ತಿ ಲಭಿಸಿದೆ. ಕೆ.ರಾಮಚಂದ್ರಯ್ಯ ದತ್ತಿನಿಧಿ ಪುರಸ್ಕಾರಕ್ಕೆ ಭದ್ರಾವತಿಯ ನೇಪಥ್ಯ ಕಲಾವಿದ ಮಾಯಿಗಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಗಳು ತಲಾ 5 ಸಾವಿರ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರವನ್ನೊಳಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayendra ಜತೆ ಚರ್ಚೆ: ಮಂಡ್ಯದಲ್ಲೇ ನಿರ್ಧಾರ ತಿಳಿಸುತ್ತೇನೆ ಎಂದ ಸುಮಲತಾ
Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
MUST WATCH
ಹೊಸ ಸೇರ್ಪಡೆ
Mangaluru: ಕಳವು ಮಾಡಿದ ಯುವಕನಿಗೆ ಹಲ್ಲೆ… ವೀಡಿಯೋ ವೈರಲ್
Udupi: ಕಾರು ಢಿಕ್ಕಿ… ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
LS ಚುನಾವಣೆ ಬಳಿಕ ಬಿಜೆಪಿ ರಾಜ್ಯ ನಾಯಕತ್ವ ಬದಲಾವಣೆ ಕೂಗು: ಯತ್ನಾಳ್
Belthangady: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕಾರು, ತಪ್ಪಿದ ದುರಂತ
NDA;ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವವರು ಮೋದಿ ಮತ್ತು ಶಾ ಮಾತ್ರ: ದೇವೇಗೌಡ