ಅಹಿಂದ ಜಾತಿಗಳಿಗೆ ಸಿದ್ದು ಭೂ ಆಮಿಷ
Team Udayavani, Dec 12, 2017, 6:00 AM IST
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ರಾಜ್ಯದ ಸುಮಾರು 36 ಜಾತಿ, ಸಮುದಾಯಗಳಿಗೆ ಮಠ ಮಾನ್ಯಗಳ ಕಟ್ಟಿಕೊಳ್ಳಲು ಭೂಮಿ ಕೊಟ್ಟಿರುವ ರಾಜ್ಯ ಸರ್ಕಾರ “ಅಹಿಂದ ಜಪ’ವನ್ನು ಇನ್ನಷ್ಟು ತೀವ್ರಗೊಳಿಸಿದೆ.
ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಗುತ್ತಿಗೆ ಆಧಾರದ ಮೇಲೆ ಬೆಂಗಳೂರಿನ ಹೊರವಲಯದಲ್ಲಿ ಬೆಲೆ ಬಾಳುವ 58.20 ಎಕರೆ ಭೂಮಿ ಮಂಜೂರು ಮಾಡಿದೆ. ಈ ನಿಟ್ಟಿನಲ್ಲಿ ಕುರುಬ, ಈಡಿಗ, ವಿಶ್ವಕರ್ಮ, ಕುರುಹಿನ ಶೆಟ್ಟಿ, ಪದ್ಮಸಾಲಿ, ಮಡಿವಾಳ, ಒಕ್ಕಲಿಗ, ವೀರಶೈವ, ಗಾಣಿಗ, ಉಪ್ಪಾರ ಸೇರಿದಂತೆ 36 ಜಾತಿ ಸಂಘಟನೆಗಳು, ಸಮುದಾಯ, ಮಠ, ಸೇವಾ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆ ದಾಸನಪುರ ಹೋಬಳಿ ಮಾಚೋಹಳ್ಳಿಯ ಸರ್ವೇ ನಂ. 81ರ ಸುಮಾರು 96.12 ಎಕರೆ ಪೈಕಿ 78 ಎಕರೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಈ ಕುರಿತು ಮಾಹಿತಿ ನೀಡಿದ್ದಾರೆ.
ಹಿಂದುಳಿದ ಸಮುದಾಯದವರಿಗೇ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಕುರುಬರ ಸಂಘ, ಆರ್ಯ ಈಡಿಗರ ಸಂಘ, ಮಡಿವಾಳರ ಸಂಘ, ವಾಲ್ಮೀಕಿ ಸಮುದಾಯ, ಹಿಂದುಳಿದ ಜಾತಿಗಳ ಒಕ್ಕೂಟ, ದೇವಾಡಿಗರ ಸಂಘಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಒಟ್ಟು 78 ಎಕರೆಯಲ್ಲಿ 19 ಎಕರೆ 2 ಗುಟೆಯನ್ನು ಗ್ರಾಮದ ಅಭಿವೃದ್ಧಿ, ಸರ್ಕಾರಿ ಶಾಲಾ-ಕಾಲೇಜು ಸ್ಥಾಪನೆ, ಸರ್ಕಾರಿ ಆಸ್ಪತ್ರೆ ಮತ್ತು ವಸತಿ, ಸಾರ್ವಜನಿಕ ದೇವಸ್ಥಾನ ಮತ್ತು ಯಾಗಶಾಲೆ, ಅಗ್ನಿಶಾಮಕ ಠಾಣೆ ಮತ್ತು ಪೊಲೀಸ್ ಠಾಣೆ ಸ್ಥಾಪನೆಗೆ ಮಂಜೂರು ಮಾಡಿದರೆ, ಉಳಿದ 58 ಎರರೆ 20 ಗುಂಟೆಯನ್ನು ಜಾತಿ ಸಂಘಟನೆಗಳು, ಮಠ ಮತ್ತಿತರೆ ಸಂಸ್ಥೆಗಳಿಗೆ ನೀಡಲಾಗಿದೆ.
ಶೈಕ್ಷಣಿಕ ಸಂಸ್ಥೆಗಳು, ವಿದ್ಯಾರ್ಥಿನಿಲಯ ಸ್ಥಾಪನೆ ಸೇರಿದಂತೆ ಜನಾಂಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲು ಈ ಭೂಮಿ ಮಂಜೂರು ಮಾಡಲಾಗಿದೆ ಎಂದು ಸರ್ಕಾರ ಹೇಳಿದೆ. ತಮ್ಮ ಸಂಘಟನೆಗಳಿಗೆ ಬೆಂಗಳೂರಿನಲ್ಲಿ ಭೂಮಿ ನೀಡಬೇಕು ಎಂದು ಹಲವು ವರ್ಷಗಳಿಂದ ಒತ್ತಡ ಹೇರುತ್ತಿದ್ದರೂ ಚುನಾವಣೆ ಸಮೀಪಿಸುತ್ತಿರುವಾಗ ಈ ನಿರ್ಧಾರ ಕೈಗೊಳ್ಳುತ್ತಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ, ಎಲ್ಲಾ ಸಂಘಟನೆಗಳಿಗೆ ಒಂದೇ ಕಡೆ ಭೂಮಿ ನೀಡಿರುವುದು ಜಾತಿಗಳನ್ನು ಓಲೈಸಲು ನಡೆಸುತ್ತಿರುವ ಪ್ರಯತ್ನ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಠ-ಮಂದಿರ, ಜಾತಿ ಸಂಘಟನೆಗಳಿಗೆ ಕೋಟಿಗಟ್ಟಲೆ ಅನುದಾನ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿತ್ತು. ಈ ಮಧ್ಯೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಾತಿ ಸಂಘಟನೆಗಳು ಮತ್ತು ಮಠಗಳಿಗೆ ಬೆಂಗಳೂರು ಬಳಿ ಭೂಮಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಅಲ್ಲದೆ, ಇತ್ತೀಚೆಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರೊಂದಿಗೆ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ಅನೇಕ ಮಠಾಧೀಶರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಠ ಮತ್ತು ಜಾತಿ ಸಂಘಟನೆಗಳಿಗೆ ಭೂಮಿ ನೀಡುವಂತೆ ಮನವಿ ಮಾಡಿದ್ದರು. ಇದಾದ ಬಳಿಕ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
ಯಾರಿಗೆ ಎಷ್ಟು ಭೂಮಿ?
ಕರ್ನಾಟಕ ಪ್ರದೇಶ ಕುರುಬರ ಸಂಘ- 3 ಎಕರೆ
ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ- 3 ಎಕರೆ
ಆರ್ಯ ಈಡಿಗರ ಸಂಘ- 1 ಎಕರೆ
ಕರ್ನಾಟಕ ವಿಶ್ವಕರ್ಮ ಸಮಾಜ- 1.20 ಎಕರೆ
ಕುರುಹಿನ ಶೆಟ್ಟಿ ಸಮುದಾಯ- 1.20 ಎಕರೆ
ಕರ್ನಾಟಕ ಪದ್ಮಸಾಲಿ ಸಂಘ- 1 ಎಕರೆ
ಕರ್ನಾಟಕ ರಾಜ್ಯ ಮಡಿವಾಳರ ಸಂಘ- 1.20 ಎಕರೆ
ವಾಲ್ಮೀಕಿ ನಾಯಕ ಮಹಾಸಭಾ- 1.20 ಎಕರೆ
ರಾಜ್ಯ ಜ್ಯೋತಿಪಣ ಗಾಣಿಗರ ಸಂಘ- 1.2 ಎಕರೆ
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ- 5 ಎಕರೆ
ಹಠಯೋಗಿ ಕಾಳಪ್ಪ ಸ್ವಾಮಿಗಳ ಟ್ರಸ್ಟ್- 1 ಎಕರೆ
ವಿಶಾಖಾ ಎಜುಕೇಷನ್ ಸೋಷಿಯಲ್ ಕಲುcರಲ್ ಟ್ರಸ್ಟ್- 1.2 ಎಕರೆ
ದೇವಾಡಿಗರ ಸಂಘ-1.2 ಎಕರೆ
ದೇವಾಂಗ ಸಂಘ- 1.2 ಎಕರೆ
ಸವಿತಾ ಸಮಾಜ- 1.2 ಎಕರೆ
ಉಪ್ಪಾರರ ಸಂಘ- 2.2 ಎಕರೆ
ಜಗದ್ಗುರು ಅಖೀಲ ಹೊಸದುರ್ಗ ಕುಂಚಟಿಗರ ಮಹಾಸಂಸ್ಥಾನ ಮಠ- 1.2 ಎಕರೆ
ರಾಜ್ಯ ದೊಂಬಿ ದಾಸರ ಕ್ಷೇಮಾಭಿವೃದ್ಧಿ ಸಂಘ- 1.2 ಎಕರೆ
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ- 1.2 ಎಕರೆ
ಮುಸ್ಲಿಂ ಅನಾಥಾಶ್ರಮ- 1.2 ಎಕರೆ
ತಿಗಳರ ಅಗ್ನಿವಂಶ ಕ್ಷತ್ರಿಯ ಸಾರ್ವಜನಿಕರ ವಿದ್ಯಾಭಿವೃದ್ಧಿ ಸಂಘ- 1 ಎಕರೆ
ದಲಿತ ಸಂಘರ್ಷ ಸಮಿತಿ- 1 ಎಕರೆ
ಅಖೀಲ ಭಾರತ ವೀರಶೈವ ಮಹಾಸಭಾ- 2 ಎಕರೆ
ಮಲಯಂಕರ ಸಿರಿಯಾನ್ ಅನನ್ಯಾ ಟ್ರಸ್ಟ್- 1.20 ಎಕರೆ
ಬಂಜಾರ ಮಹಿಳಾ ಸೇವಾ ಸಮಾಜ ಲಂಬಾಣಿ ಸಂಘ- 1.20 ಎಕರೆ
ರೇವಣಸಿದ್ದೇಶ್ವರ ವಿದ್ಯಾಪೀಠ ಧಾರವಾಡ- 1 ಎಕರೆ
ಅಂಬೇಡ್ಕರ್ ಮೆಮೋರಿಯಲ್- 1 ಎಕರೆ
ಆಲ್ ಇಂಡಿಯಾ ಆಂಗ್ಲೋ ಇಂಡಿಯನ್ ಅಸೋಸಿಯೇಷನ್- 2 ಎಕರೆ,
ಗೊಲ್ಲ ಯಾದವ ಸಂಘ- 1 ಎಕರೆ
ಅಹಲ್ಯಾಬಾಹಿ ಹೋಳ್ಕರ್ ಮಹಿಳಾ ಸೇವಾ ಸಂಘ- 1 ಎಕರೆ
ಕೊರಮ ಸಮಾಜ- 1.2 ಎಕರೆ
ಗಂಗಾ ಮತಸ್ಥರ ಸಂಘ- 1 ಎಕರೆ
ಒಕ್ಕಲಿಗರ ಸಂಘ- 2 ಎಕರೆ
ಬೆಂಗಳೂರು ಪೆಂಟಾ ಕೋಸ್ಟಲ್ ಫೆಲೋಶಿಪ್- 1.2 ಎಕರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
MUST WATCH
ಹೊಸ ಸೇರ್ಪಡೆ
Yugadi: ಯುಗಾದಿ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ