ಚುನಾವಣೆಗೆ ಹೆದರುವ ಪ್ರಶ್ನೆ ಇಲ್ಲ: ಸಿಎಂ
Team Udayavani, Dec 27, 2017, 7:35 AM IST
ದಾವಣಗೆರೆ: “ಫೆಬ್ರವರಿಯಲ್ಲಿ ವಿಧಾನಸಭೆ ವಿಸರ್ಜಿಸಿ, ಚುನಾವಣಾ ಅಖಾಡಕ್ಕೆ ಬರುವಂತೆ ಸವಾಲು ಹಾಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಏನ್ ಎಲೆಕ್ಷನ್ ಕಮೀಷನ್ನರ್ರಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಿವಾಸದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ಈಗಲೇ ಅಲ್ಲ. ಯಾವಾಗಾದಾರೂ ನಡೆಯಲಿ ಗೆಲ್ಲುವವರು ನಾವೇ. ಆದರೆ, ರಾಜ್ಯದ ಜನ ನಮಗೆ ಮೇ
ತಿಂಗಳವರೆಗೆ ಅಧಿಕಾರ ಕೊಟ್ಟಿದ್ದಾರೆ. ಆಗಲೇ ಎದುರಿಸೋಣ. ನಾವು ಚುನಾವಣೆಗೆ ಹೆದರುವ ಮಾತೇ ಇಲ್ಲ ಎಂದರು.
ರಾಜ್ಯದ ಕೆಲವಾರು ಕಡೆ ಬಿಜೆಪಿ, ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದಾಗಿ ಸೋಮವಾರ ನಡೆದ ಕಾಂಗ್ರೆಸ್ ಸಭೆಯಲ್ಲಿ ಪ್ರಸ್ತಾಪಿಸಿದ್ದರ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷದ ಕಾರ್ಯರ್ತರ ಸಭೆಯಲ್ಲಿ ಏನೇನೋ ಮಾತನಾಡಿರುತ್ತೇವೆ. ಅವೆಲ್ಲವನ್ನೂ ಬಹಿರಂಗವಾಗಿ ಹೇಳಲಿಕ್ಕೆ ಆಗುತ್ತದೆಯೇ. ಪಕ್ಷದ
ಸಭೆಯಲ್ಲಿ ಮಾತನಾಡಿದ್ದನ್ನೆಲ್ಲಾ ಬಹಿರಂಗಪಡಿಸಲಿಕ್ಕೆ ಆಗದು ಎಂದರು.