ಮಹಾಜ್ವಾಲೆಗೆ ಉತ್ತರ ಕರ್ನಾಟಕ ಸ್ತಬ್ಧ
Team Udayavani, Dec 28, 2017, 9:12 AM IST
ಹುಬ್ಬಳ್ಳಿ: ಮಹದಾಯಿಗಾಗಿ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. “ಜಲ ರಾಜಕೀಯ’ಕ್ಕೆ ಬೇಸತ್ತು ಡಿ.27ರಂದು ನೀಡಲಾಗಿದ್ದ “ಉತ್ತರ ಕರ್ನಾಟಕ ಬಂದ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ, ಬಾಗಲಕೋಟೆಯಲ್ಲಿ ಜನಜೀವನ ಸಂಪೂರ್ಣ ಸ್ತಬ್ದವಾಗಿದ್ದರೆ, ಉತ್ತರ ಕನ್ನಡ, ವಿಜಯಪುರ, ಹಾವೇರಿ, ಕೊಪ್ಪಳ, ಬಳ್ಳಾರಿ, ಕಲಬುರಗಿ ಭಾಗದಲ್ಲಿ ಪ್ರತಿಭಟನೆಯ ಮೂಲಕ ಬೆಂಬಲ ದೊರೆತಿದೆ.
ಹುಬ್ಬಳ್ಳಿಯಲ್ಲಿ ಬಂದ್ ವೇಳೆ ಸಂಸದ ಪ್ರಹ್ಲಾದ ಜೋಶಿ ಕಚೇರಿ, ನಿವಾಸಕ್ಕೆ ಮುತ್ತಿಗೆ ಹಾಕಲಾಯಿತಲ್ಲದೆ, ಕಚೇರಿಯ ಕಿಟಕಿ ಗಾಜು ಒಡೆಯಲಾಗಿದೆ. ಸರ್ಕ್ನೂಟ್ ಹೌಸ್ ರಸ್ತೆಯಲ್ಲಿನ ಕಾμ ಡೇ ತೆರೆದುಕೊಂಡಿದ್ದನ್ನು ಕಂಡು ಒಳ ನುಗ್ಗಿದ ಪ್ರತಿಭಟನಾಕಾರರು ಕುರ್ಚಿಗಳನ್ನು ಜಖಂಗೊಳಿಸಿದ್ದಾರೆ. ಶಾಲಾ-ಕಾಲೇಜುಗಳು ಬಂದ್ ಆಗಿದ್ದವು. ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾಕಾರರು ಮುಂದಾದಾಗ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕರವೇಯ ನಾಲ್ವರು ಕಾರ್ಯಕರ್ತರು ಬ್ಲೇಡ್ಗಳಿಂದ ತಮ್ಮ ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಬಂಡಾಯ ನೆಲದಲ್ಲಿ ಕಿಚ್ಚು: ಬಂಡಾಯದ ನೆಲ ನರ ಗುಂದ, ನವಲಗುಂದದಲ್ಲಿ ಪ್ರತಿಭಟನೆ ಜೋರಾಗಿತ್ತು. ನವಲಗುಂದದ ರೈತ ಭವನದಲ್ಲಿ ಪಕ್ಷಾತೀತ ಹೋರಾಟ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹ ಬುಧವಾರ 888ನೇ ದಿನಕ್ಕೆ ಕಾಲಿಟ್ಟಿತು. ಪ್ರತಿಭಟನೆ ವೇಳೆ ಟೈರ್ಗೆ ಸುರಿದ ಪೆಟ್ರೋಲ್ ಸಿಪಿಐ ದಿವಾಕರ ಕಾಲಿಗೆ ಸಿಡಿದು ಬೆಂಕಿ ಹೊತ್ತಿಕೊಂಡ ಘಟನೆಯೂ ನಡೆಯಿತು. ಪಟ್ಟಣದಲ್ಲಿ ರೈತರ ಮೇಲೆ ಪಿಎಸ್ಐ ಲಾಠಿ ಬೀಸಿದ್ದಾರೆಂಬ ವದಂತಿ ಹರಡಿದ್ದರಿಂದ ಸ್ವಲ್ಪ ಸಮಯ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡಿತ್ತು. ಬಾಗಲಕೋಟೆಯಲ್ಲಿ ವೈನ್ಶಾಪ್ವೊಂದಕ್ಕೆ ಕಲ್ಲು ಎಸೆಯಲಾಯಿತು. ಬೆಳಗಾವಿ ಜಿಲ್ಲೆಯ ಹಲವೆಡೆಯೂ ಬಂದ್ಗೆ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ವಿಜಯಪುರ ಸೇರಿದಂತೆ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.
ಎನ್ಫಿಲ್ಡ್ ಏರಿದ ಕೋನರೆಡ್ಡಿ: ಬೆಳಗ್ಗೆಯೇ ರಾಯಲ್ ಎನ್ಫಿಲ್ಡ್ ಬೈಕ್ನಲ್ಲಿ ಧಾರವಾಡದ ನಗರದ ತುಂಬೆಲ್ಲಾ ಸಂಚರಿಸಿದ ನವಲಗುಂದದ ಶಾಸಕ ಎನ್. ಎಚ್.ಕೋನರೆಡ್ಡಿ ಹೋರಾಟಕ್ಕೆ ಸಾಥ್ ನೀಡಿದರು.
ರಸ್ತೆ ಮಧ್ಯೆಯೇ ಹೋಮ
ಮಹದಾಯಿ ವಿವಾದ ಶೀಘ್ರ ಬಗೆಹರಿಯಲಿ ಎಂದು ಕರ್ನಾಟಕ ಯುವ ಸೇನೆ ಕಾರ್ಯಕರ್ತರು ರಸ್ತೆ ನಡುವೆಯೇ ಸ್ನಾನ ಮಾಡಿ ಹೋಮ ಮಾಡಿದರು. ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾಕಾರರು ಭಜನೆ ಮಾಡಿದರು. ಮಹಿಳಾ ಹೋರಾಟಗಾರರು ಕುಂಟೆ ಬಿಲ್ಲೆ
ಆಡಿದರು. ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಕಾರ್ಯಕರ್ತರು ತಲೆ ಮೇಲೆ ನೀರು ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಆಟೋ ಚಾಲಕರ ಸಂಘದವರು ರಾಜಕಾರಣಿಗಳನ್ನು ಹರಾಜು ಹಾಕಿದರು.
ಹಾಲು ಹಂಚಿದ ಬಸವರಾಜ
ಧಾರವಾಡದ ನಗರಕ್ಕೆ ದಿನನಿತ್ಯ ಬೈಕ್ ಮೇಲೆ ಬಂದು ಎರಡು ಕ್ಯಾನ್ ಹಾಲು ಪೂರೈಸುವ ಸಮೀಪದ ಕ್ಯಾರಕೊಪ್ಪ ಗ್ರಾಮದ ಬಸವರಾಜ ಬುಧವಾರ ಮಹದಾಯಿ ಹೋರಾಟಕ್ಕೆ ಬಂದಿದ್ದ ಹೋರಾಟಗಾರರಿಗೆ ಕುಡಿಯಲು ಹಾಲು ನೀಡಿ ಹೋರಾಟಕ್ಕೆ ಸಾಥ್
ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ