ರಾಜ್ಯದಲ್ಲೂ ಆಧಾರವೇ ಗತಿ
Team Udayavani, Jan 3, 2018, 8:18 AM IST
ಬೆಂಗಳೂರು: ರಾಜ್ಯದಲ್ಲಿಯೂ ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯವಾಗಿದೆ. ಕೇಂದ್ರ ಸರ್ಕಾರದ ಮಾದರಿಯಲ್ಲೇ ರಾಜ್ಯ
ಸರ್ಕಾರವೂ ಫಲಾನುಭವಿ ಆಧರಿತ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಬೇಕಾದರೆ ಆಧಾರ್ ಮಾಹಿತಿ ನೀಡಲೇಬೇಕು
ಎಂಬ ನಿಯಮ ಜಾರಿ ಮಾಡಿದೆ. ಈ ಸಂಬಂಧ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ರಾಜ್ಯ ಆಧಾರ್ (ಆರ್ಥಿಕ ಮತ್ತು ಇತರೆ ಸಬ್ಸಿಡಿಗಳ ಉದ್ದೇಶಿತ ವಿತರಣೆ, ಪ್ರಯೋಜನಗಳು ಮತ್ತು ಸೇವೆಗಳು) ವಿಧೇಯಕ-2017ಕ್ಕೆ ಅನುಮೋದನೆ ನೀಡಲಾಗಿದೆ.
ಈಗಾಗಲೇ ಕೇಂದ್ರ ಸರ್ಕಾರ ತನ್ನ ಎಲ್ಲಾ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿ ಕಾಯ್ದೆ ರೂಪಿಸಿದೆ. ಅದನ್ನು ರಾಜ್ಯಕ್ಕೂ
ಅನ್ವಯಗೊಳಿಸುವ ಮೂಲಕ ಫಲಾನುಭವಿ ಆಧಾರಿತ ಯೋಜನೆಗಳಲ್ಲಿ ಪಾರದರ್ಶಕತೆ ಕಾಪಾಡುವುದರೊಂದಿಗೆ ಯೋಜನೆಗಳನ್ನು
ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಈ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ ಎಂದು ಸಂಪುಟ ಸಭೆ ನಂತರ ಸುದ್ದಿಗೋಷ್ಠಿ ನಡೆಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಆಧಾರ್ ಕಡ್ಡಾಯಗೊಳಿಸುತ್ತಿರುವ ಕ್ರಮವನ್ನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದು, ಅದು ಇತ್ಯರ್ಥವಾಗುವ ಮುನ್ನ ಈ ವಿಧೇಯಕದ ಅಗತ್ಯವಿತ್ತೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಸದ್ಯಕ್ಕೆ ಇದು ತಾತ್ಕಾಲಿಕ ಕ್ರಮವಷ್ಟೆ. ಅಲ್ಲದೆ, ಸರ್ಕಾರದ ಯೋಜನೆಗಳ ಅನುಕೂಲ ಪಡೆದುಕೊಳ್ಳುವ ಫಲಾನು ಭವಿಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಹೇಳಿದರು. ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ಗಳಿಗೆ ಆಧಾರ್ ಕಡ್ಡಾಯಗೊಳಿಸುವುದಿಲ್ಲ ಎಂದು ಸಿಎಂ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಹೇಳಿರುವ ಕುರಿತಂತೆ ಪ್ರತಿಕ್ರಿಯಿಸಿದ ಸಚಿವರು, ಸದ್ಯಕ್ಕೆ ಪಡಿತರ ಚೀಟಿಗಳಿಗೆ ಆಧಾರ್ ಕಡ್ಡಾಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಸರ್ಕಾರದಿಂದ ನೀಡುವ ಇನ್ಪುಟ್ ಸಬ್ಸಿಡಿ, ವಿಮಾ ಯೋಜನೆ ಮುಂತಾದ ಸಂದರ್ಭಗಳಲ್ಲಿ ಆಧಾರ್ ಕಡ್ಡಾಯ ಮಾಡಬೇಕಾಗುತ್ತದೆ. ಅಷ್ಟಕ್ಕೂ ಸರ್ಕಾರದಿಂದ ಸಹಾಯ ಮತ್ತು ಸೌಲಭ್ಯ ಕೊಡುವಾಗ ಆಧಾರ್ ಕಡ್ಡಾಯಗೊಳಿಸುವುದು ಅನಿವಾರ್ಯ ವಾಗುತ್ತದೆ ಎಂದು ಹೇಳಿದರು.
ಅವಲಂಬಿತರ ಆಸ್ತಿ ವಿವರ ಕಡ್ಡಾಯ: ಜನಪ್ರತಿನಿಧಿಗಳು, ಸರ್ಕಾರಿ ನೌಕರರು ಸೇರಿದಂತೆ ಸರ್ಕಾರಿ ಸೇವಕರು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುವಾಗ ಇನ್ನುಮುಂದೆ ಪತ್ನಿ/ಪತಿ, ಮಕ್ಕಳ ಆಸ್ತಿಗಳ ಜತೆಗೆ ತಂದೆ-ತಾಯಿ ಸೇರಿದಂತೆ ಕುಟುಂಬ ಅವಲಂಬಿತರ ಆಸ್ತಿ ವಿವರವನ್ನೂ ಸಲ್ಲಿಸಬೇಕು. ಈ ಸಂಬಂಧ ಕರ್ನಾಟಕ ಲೋಕಾಯುಕ್ತ ನಿಯಮಗಳು, 1985ರ ನಿಯಮ ಏಳರಡಿ ನಿಗದಿಪಡಿಸಿರುವ ನಮೂನೆ 4ಕ್ಕೆ ತಿದ್ದುಪಡಿ ಮಾಡುವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ. ಪ್ರಸ್ತುತ ಸರ್ಕಾರಿ ಸೇವಕರು ತಮ್ಮ ಆಸ್ತಿ ವಿವರ ಸಲ್ಲಿಸುವಾಗ ತಮ್ಮ ಆಸ್ತಿಯ ಜತೆಗೆ ಪತ್ನಿ/ಪತಿ ಮತ್ತು ಮಕ್ಕಳ ಆಸ್ತಿ ಕುರಿತ ವಿವರ ನೀಡಬೇಕಿತ್ತು. ಹೊಸ ನಿಯಮದ ಪ್ರಕಾರ ಪತ್ನಿ/ಪತಿ, ಮಕ್ಕಳ ಜತೆಗೆ ತಂದೆ-ತಾಯಿ ಮತ್ತು ಕುಟುಂಬದ ಇತರೆ ಅವಲಂಬಿತರ ಆಸ್ತಿ ವಿವರಗಳನ್ನೂ ನೀಡಬೇಕಾಗುತ್ತದೆ. ಸ್ಥಿರ ಮತ್ತು ಚರ ಆಸ್ತಿಗಳ ಜತೆಗೆ ಬ್ಯಾಂಕ್ ಖಾತೆಗಳ ವಿವರ, 10 ಸಾವಿರ ರೂ.ಗಿಂತ ಮೇಲ್ಪಟ್ಟ ಮೌಲ್ಯದ ವಸ್ತುಗಳು, 25 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಗೃಹೋಪಯೋಗಿ ಸಲಕರಣೆಗಳ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ.
ಮಾರ್ಗಸೂಚಿ ದರ: ಇದಲ್ಲದೆ, ಸ್ಥಿರಾಸ್ತಿಯ ದರ ನಿಗದಿಯನ್ನೂ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಆಸ್ತಿ ಖರೀದಿಸಿದ
ಸಂದರ್ಭದಲ್ಲಿ ಇದ್ದ ಮಾರುಕಟ್ಟೆ ದರವನ್ನು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ತೀರಾ ಕಡಿಮೆ ದರ ನಮೂದಿಸಲಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸ್ಥಿರಾಸ್ತಿಗಳನ್ನು ಲೆಕ್ಕ ಹಾಕುವಾಗ ಅದರ ಮಾರ್ಗಸೂಚಿ ದರವನ್ನು ನಿಗದಿಪಡಿಸುವ ಬಗ್ಗೆಯೂ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಶಾಸಕರ ಮನೆ ಮಂದಿ ಆಸ್ತಿ ವಿವರ ಕಡ್ಡಾಯ
ಜನಪ್ರತಿನಿಧಿಗಳು ಲೋಕಾಯುಕ್ತರಿಗೆ ಆಸ್ತಿ ವಿವರ ಸಲ್ಲಿಸುವಾಗ ಇನ್ನುಮುಂದೆ ಪತ್ನಿ/ಪತಿ, ಮಕ್ಕಳ ಆಸ್ತಿಗಳ ಜತೆಗೆ ತಂದೆ- ತಾಯಿ
ಸೇರಿದಂತೆ ಕುಟುಂಬ ಅವಲಂಬಿತರ ಆಸ್ತಿ ವಿವರವನ್ನೂ ಸಲ್ಲಿಸ ಬೇಕು. ಈ ಸಂಬಂಧ ಕರ್ನಾಟಕ ಲೋಕಾ ಯುಕ್ತ ನಿಯಮಗಳು,
1985ರ ನಿಯಮ ಏಳರಡಿ ನಿಗದಿಪಡಿಸಿರುವ ನಮೂನೆ 4ಕ್ಕೆ ತಿದ್ದುಪಡಿ ಮಾಡುವ ಪ್ರಸ್ತಾಪ ವಿಧೇಯಕಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
ಪ್ರಸ್ತುತ ಸರ್ಕಾರಿ ಸೇವಕರು ತಮ್ಮ ಆಸ್ತಿ ವಿವರ ಸಲ್ಲಿಸುವಾಗ ತಮ್ಮ ಆಸ್ತಿಯ ಜತೆಗೆ ಪತ್ನಿ, ಪತಿ ಮತ್ತು ಮಕ್ಕಳ ಆಸ್ತಿ ಕುರಿತ ವಿವರ
ನೀಡಬೇಕಿತ್ತು. ಹೊಸ ನಿಯಮದ ಪ್ರಕಾರ ಪತ್ನಿ, ಪತಿ, ಮಕ್ಕಳ ಜತೆಗೆ ತಂದೆ-ತಾಯಿ ಮತ್ತು ಕುಟುಂಬದ ಇತರೆ ಅವಲಂಬಿತರ ಆಸ್ತಿ ವಿವರ ಗಳನ್ನೂ ನೀಡಬೇಕಾಗುತ್ತದೆ. ಸ್ಥಿರ ಮತ್ತು ಚರ ಆಸ್ತಿಗಳ ಜತೆಗೆ ಬ್ಯಾಂಕ್ ಖಾತೆಗಳ ವಿವರ, 10 ಸಾವಿರ ರೂ.ಗಿಂತ ಮೇಲ್ಪಟ್ಟ ಮೌಲ್ಯದ ವಸ್ತುಗಳು, 25 ಸಾವಿರ ರೂ.ಗಿಂತ ಹೆಚ್ಚು ಮೌಲ್ಯದ ಗೃಹೋಪಯೋಗಿ ಸಲಕರಣೆಗಳ ಬಗ್ಗೆಯೂ ಮಾಹಿತಿ ನೀಡಬೇಕಾಗುತ್ತದೆ.
ಮಾರ್ಗಸೂಚಿ ದರ: ಇದಲ್ಲದೆ, ಸ್ಥಿರಾಸ್ತಿಯ ದರ ನಿಗದಿಯನ್ನೂ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಆಸ್ತಿ ಖರೀದಿಸಿದ ಸಂದರ್ಭದಲ್ಲಿ ಇದ್ದ ಮಾರುಕಟ್ಟೆ ದರವನ್ನು ಪರಿಗಣಿಸಲಾಗುತ್ತಿತ್ತು. ಹೀಗಾಗಿ ಕೆಲವೊಮ್ಮೆ ತೀರಾ ಕಡಿಮೆ ದರ ನಮೂದಿಸಲಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಸ್ಥಿರಾಸ್ತಿಗಳನ್ನು ಲೆಕ್ಕ ಹಾಕುವಾಗ ಅದರ ಮಾರ್ಗಸೂಚಿ ದರವನ್ನು ನಿಗದಿಪಡಿಸುವ ಬಗ್ಗೆಯೂ ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಫೆ. 16ಕ್ಕೆ ರಾಜ್ಯ ಬಜೆಟ್
2018-19ನೇ ಸಾಲಿನ ಬಜೆಟ್ ಫೆ. 16ರಂದು ಮಂಡನೆಯಾಗಲಿದೆ. ಅಂದೇ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಮೊದಲ ದಿನ ಬಜೆಟ್ ಮಂಡನೆ ಮಾಡಲಾಗುತ್ತದೆ. ಫೆ. 28ಕ್ಕೆ ಬಜೆಟ್ ಅಧಿವೇಶನ ಕೊನೆಗೊಳ್ಳಲಿದೆ. ಈ ಮಧ್ಯೆ ವರ್ಷದ ಮೊದಲ ಜಂಟಿ
ಅಧಿವೇಶನವನ್ನು ಫೆ. 5ರಿಂದ ಆರಂಭಿಸಲು ಕೂಡ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಫೆ. 5ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು, ನಂತರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆದು
ಫೆ. 9ರಂದು ಸರ್ಕಾರ ಅದಕ್ಕೆ ಉತ್ತರಿಸಲಿದೆ. ಅಲ್ಲಿಗೆ ಜಂಟಿ ಅಧಿವೇಶನಕ್ಕೆ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ